Showing posts with label ಪ್ರಸ್ತುತ. Show all posts
Showing posts with label ಪ್ರಸ್ತುತ. Show all posts

14 March 2010

ನಾಳೆಯ Surprise... ಏನ್ ಗೊತ್ತಾಯ್ತಾ ?



The Surprise Is Ready to Serve...

ನಾಳೆ ಯುಗಾದಿ... ಹೊಸ ವರುಷ...

ನೀವೂ ಕೂಡ ನಾಳೆಗಾಗಿ ಒಂದೇನೋ ಹೊಸತನ್ನ plan ಮಾಡಿರ್ತೀರಿ... ಅಂತೆಯೇ ನಾನೂ. ಅದುವೇ ನಾನು ಈ ಎರಡು ದಿನಗಳ ಕೆಳಗೆ Surprise ಅಂತ ಹೇಳಿದ್ದು... ಈಗ ಆ Surprise ತನ್ನ ಪೊರೆ ಕಳಚಿ ನಿಮ್ಮ ಮುಂದಿದೆ. ಓದಿ.

----------------------

ನಾವು ಕಚೇರಿ ಸಮಯದಲ್ಲಿ ಓದಲಿಕ್ಕೆ ಅಂತ , ಹಾಗೇ ಸುಮ್ಮನೆ , ಪರೀಕ್ಷೆಗಳಿಗೆ ಸಹಾಯ ಆಗೋ ಹಾಗೆ ಓದಲು ಪುಸ್ತಕ ತರೋದು ಸಾಮಾನ್ಯ. ಹೀಗೆ ತರೋ ಪುಸ್ತಕಗಳನ್ನ ತೆರೆಯೋದಕ್ಕೆ ಆಗುತ್ತೋ ಇಲ್ವೋ ...ಆದ್ರೆ ನಮ್ಮ ಕಂಪ್ಯೂಟರ್ ಎದುರಿಗಂತೂ ದಿನದ ಹೆಚ್ಚು ಹೊತ್ತು ಕಳೆಯುವ ಪ್ರಸಂಗ ಇದ್ದೇ ಇದೆ. ಇದನ್ನ ಗಮನದಲ್ಲಿರಿಸಿಕೊಂಡು , ನಮ್ಮ ಪರೀಕ್ಷೆಗಳ ಸಿದ್ಧತೆಗೆ ಸಹಾಯ ಮಾಡೋ ಒಂದು ಸುಂದರ ಕನ್ನಡ e-ತಾಣ ಇದ್ದರೆ ಹೇಗೆ ಅಂತ ಯೋಚಿಸಿ , ಅಂಥದೊಂದನ್ನ ತಯಾರು ಮಾಡಿದೀನಿ. ಆ ಹೊಸ ತಾಣವೇ ನಿಮಗೆ ನಾನು ಯುಗಾದಿಗೆ ನೀಡಬೇಕು ಅಂತಿರೋ Surprise.

So, ಈ ಹೊಸ ತಾಣ ನಮಗೆ ಕೆಲಸ ಒದಗಿಸಲು ಒಡ್ಡುವ ಪರೀಕ್ಷೆಗಳಿಗೆ ಸಹಾಯ ಮಾಡೋ ಹಾಗೆ Design ಮಾಡಿದೀನಿ ಅಂತ ನನ್ನ ಅಭಿಪ್ರಾಯ. ಅದನ್ನ ನೋಡಿದ ಮೇಲೆ ನಿಮಗೂ ಹಾಗೆ ಅನ್ನಿಸಿದರೆ ನನ್ನ ಶ್ರಮ ಸಾರ್ಥಕ.

ಇಲ್ಲಿ ಒಟ್ಟು 4 e-ತಾಣಗಳಿವೆ. ಒಂದು Mother Site.

  1. ಸ್ಪರ್ಧಾತ್ಮಕ ಪರೀಕ್ಷೆಯ General Studies ಅನ್ನೋ Broad ವಿಷಯಕ್ಕೆ ಸಹಾಯ ಮಾಡೋವಂಥದ್ದು.
  2. ದಿನ ದಿನದ ಆಗುಹೋಗುಗಳು , ಅಂದ್ರೆ ಪ್ರಚಲಿತ ವಿದ್ಯಮಾನಗಳ ಬಗ್ಗೆ ಎರಡನೆಯದು. ಈ ತಾಣದಲ್ಲಿ ಮುಖ್ಯಾಂಶಗಳನ್ನ ಒಂದೆಡೆ ಒಟ್ಟು ಮಾಡಿ , ಅಲ್ಲಿಂದ ಮುಂದೆ ಹೆಚ್ಚಿನ ಓದಿಗಾಗಿ ಸೂಕ್ತ ಹಾಗೂ ಉಪಯುಕ್ತ ತಾಣ ಒಂದಕ್ಕೆ Link ಮಾಡಿರ್ತೀನಿ. ಅಷ್ಟನ್ನ ಓದಿಕೊಂಡರೆ ಆ ದಿನದ ಆ ಮುಖ್ಯಾಂಶಗಳಿಗೆ ನೀವು ಉತ್ತರ ನೀಡೋ ಹಾಗೆ ತಯಾರಾಗಿರ್ತೀರಿ ಅಂತ ನನ್ನ ಅಭಿಮತ.
  3. ಇದು ನಮ್ಮ ಕನ್ನಡ ನಾಡಿನ ಬಗ್ಗೆ ವ್ಯವಸ್ಥಿತವಾಗಿ ತಿಳಿಸಿ ಕೊಡಲು ಅಂತ ಶುರು ಮಾಡಿರೋ ತಾಣ. ಆದರೆ , ಇದನ್ನ ಕನ್ನಡ ಸಾಹಿತ್ಯ Optional ವಿಷಯಕ್ಕೆ ಸಹಾಯ ಆಗೋ ಹಾಗೆ ತಯಾರು ಮಾಡೋದು ನನ್ನ ಮಹದಾಸೆ.
  4. ಇದು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಬಿಡಿಸಿದ ಪ್ರಶ್ನೆಪತ್ರಿಕೆಗಳನ್ನ ಒದಗಿಸುವ ತಾಣ.
ಈ ಎಲ್ಲ ತಾಣಗಳಲ್ಲಿ ಜಾಸ್ತಿ ಕನ್ನಡ , ಸ್ವಲ್ಪ ಇಂಗ್ಲೀಷ್ ಇರೋ ಹಾಗೆ ನೋಡ್ಕೊಂಡಿದೀನಿ. ಎಲ್ಲೆಲ್ಲಿ ಅವಶ್ಯ ಅಲ್ಲಿ ಮಾತ್ರ ಇಂಗ್ಲೀಷ್ ಬಳಸೋದು ನನ್ನ Plan. ಯಾಕಂದ್ರೆ ಇದು ಕನ್ನಡಿಗರಿಗೆ , ಕನ್ನಡದಲ್ಲಿ , ಕನ್ನಡದವನಿಂದ ಅಂತ ನಾನು ಮುನ್ನುಡಿಯಲ್ಲೇ ಹೇಳ್ಕೊಂಡಿದೀನಿ ಅದ್ಕೆ.

ಇನ್ನೊಂದು ಮುಖ್ಯ ವಿಚಾರ ಏನಂದ್ರೆ : ಈ ನಾಲ್ಕೂ ತಾಣಗಳು ಇನ್ನೂ ತಯಾರಿಯ ಹಂತದಲ್ಲಿವೆ. ಅವಕ್ಕೆ ನಾನಿನ್ನೂ ಸಂಪೂರ್ಣವಾಗಿ Finish ಮಾಡಿ Final Touch ಕೊಟ್ಟಿಲ್ಲ.

ಮತ್ತೇನಕ್ಕೆ ಆತುರ ಮಾಡಿ ನಾಳೆನೇ Release ಮಾಡ್ತಿರೋದು ಅಂತ ಕೇಳ್ಬೇಡಿ. ನಾಳೆ ಯುಗಾದಿ . ಒಳ್ಳೇ ದಿವಸ. ಒಳ್ಳೇ ಕೆಲಸ ಅಂತ ಅನ್ಕೊಂಡು ಶುರು ಮಾಡಿರೋ ಈ e-ತಾಣಗಳನ್ನ ನಿಮ್ಮ ಮುಂದಿಡೋದಕ್ಕೆ ನಾಳೆ ಸರಿಯಾದ ದಿನ ಅನ್ನಿಸ್ತು. ಅಷ್ಟೆ.

ನಾಳೆ ದಿವಸ ಇದೇ ಸ್ಥಳದಲ್ಲಿ ಆ ನಾಲ್ಕೂ ತಾಣಗಳ Web Address ಇರುತ್ತೆ. ಸಾಧ್ಯ ಆದ್ರೆ ನಾಳೆ Visit ಮಾಡಿ. ಇಲ್ಲ ಅಂದ್ರೆ ನಾಡಿದ್ದು .

ಎಲ್ಲವನ್ನ ಕೂಲಂಕಷವಾಗಿ ಪರಿಶೀಲಿಸಿ ನಿಮ್ಮ ನಿಷ್ಕಲ್ಮಶ ಪ್ರತಿಕ್ರಿಯೆ ನೀಡಿ.

ನಿಮ್ಮ ಪತ್ರ ಹಾಗೂ ಪ್ರತಿಕ್ರಿಯೆಗಳೇ ನಂಗೆ ಮುಂದುವರೆಯೋದಕ್ಕೆ ಸ್ಫೂರ್ತಿ.





ನಿಮ್ಮವ,
ರೇವಪ್ಪ

06 January 2010

ನಿಮ್ಮ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿ ...

ನಮಸ್ತೆ ..

ಇವತ್ತಿಗೆ 15 ದಿವಸ ಆಯ್ತು ಅನ್ಸುತ್ತೆ ... ನಿಮ್ಮ ಮುಂದೆ ಕೃಷ್ಣ ದೇವರಾಯ ದೊರೆಯ ಬಗ್ಗೆ / ವಿಜಯನಗರದ ಬಗ್ಗೆ ನಿಮ್ಮ ಅನಿಸಿಕೆ / ಲೇಖನ / ಬರಹ ಕಳುಹಿಸಿ ಅಂತ ವಿನಂತಿಸಿ...

ಜೊತೆಗೆ ನಮ್ಮ ಬ್ಲಾಗ್ ಪ್ರಥಮ ವಾರ್ಷಿಕೋತ್ಸವಕ್ಕೆ ನಿಮ್ಮ ಅನಿಸಿಕೆ ಅಭಿಪ್ರಾಯ ಕೇಳಿ ಒಂದು ವಾರ ಕಳೀತು ...

ಇನ್ನು ' ನಾನು ಕಂಡಂತೆ ನಾನು ' ಅಂತ ಬರೆದು ಕಳಿಸಿ ಅಂತ ಕೇಳಿ ಎರಡೇ ದಿವ್ಸ ಆಗಿದ್ರು Response Zero .

------------------

So, ನಿಮ್ಮಗಳ ಆಸಕ್ತಿಯ ಹೊರತು ಹೊಸ Activity ಶುರು ಮಾಡೋದು ಶ್ರಮ ವ್ಯರ್ಥ ಆದ ಹಾಗೆ ಲೆಕ್ಕ ಅಲ್ವೇ ?

29 December 2009

We R 1 year old...




Hey Buddies..

'Namma Blog' Completes 1 year on 1st January 2010.

So, I'm planning to post the opinions of all our friends on 'namma blog' on 1st january...

So, Interested Friends Contribute Your Opinion on 'Namma Blog'

Your opinions Should Reach my mail ID before midnight 31/12/2009...




-Regards,
Revappa

22 December 2009

500th Anniversary of Coronation Of Sri Krishnadevaraya

ನಮಸ್ತೆ ...

ಕರ್ನಾಟಕ ಸರ್ಕಾರ ೪೦ ದಿನಗಳ ಕಾಲ ವಿಜಯನಗರ ಸಾಮ್ರಾಜ್ಯದ ಹೆಮ್ಮೆಯ ದೊರೆ ಶ್ರೀ ಕೃಷ್ಣದೇವರಾಯನ ಪಟ್ಟಾಭಿಷೇಕದ 500ನೇ ವರ್ಷಾಚರಣೆಯನ್ನು ಅದ್ದೂರಿಯಿಂದ ಆಚರಿಸಲು ನಿರ್ಧರಿಸಿ, ಆಚರಣೆ ಕೂಡ ಆರಂಭವಾಗಿದೆ. ಇಂಥ ಸಂದರ್ಭದಲ್ಲಿ ಸಾಮ್ರಾಜ್ಯದ ಮೇಲೆ ಬೆಳಕು ಚೆಲ್ಲುವ / ಸಾಮ್ರಾಜ್ಯದ ವೈಭವದ ನೆರಳಲ್ಲಿ ಇಂದಿನ ನಾಡಿಗಾಗಿ ಹೊಸ ಕನಸು ಕಾಣುವ / ಪ್ರಸ್ತುತವೆನಿಸುವ ಲೇಖನ/ಕವನ ಗಳನ್ನ ಆಹ್ವಾನಿಸಿದೆ.

ಆಸಕ್ತ ಕಿರಿಯ ಸಹಾಯಕರುಗಳು ತಮ್ಮ ಲೇಖನವನ್ನು :: revappa@gmail.com ಗೆ ಕಳುಹಿಸಲು ಕೋರಿದೆ.

ಕೊನೆ ದಿನಾಂಕ : 01/01/10

------------------------

ನಮ್ಮ ಬ್ಲಾಗ್ ನಲ್ಲಿ ಪ್ರಸ್ತುತ ವಿಷಯವನ್ನು ಬಹುದಿನಗಳ ಹಿಂದೆಯೇ ಪ್ರಸ್ತಾಪಿಸಲಾಗಿತ್ತು ಅಂತ ಬಹುತೇಕ ಕಿರಿಯ ಸಹಾಯಕರಿಗೆ ಗೊತ್ತಿರುವ ವಿಚಾರ. ನಮ್ಮ ಸರ್ಕಾರ ಈಗ ಆಚರಿಸುತ್ತಿರಬೇಕಾದರೆ ನಾವೇಕೆ ಅಷ್ಟು ಹಿಂದೆಯೇ ಅದನ್ನ ನೆನೆದೆವು ಅನ್ನೋದು ನಿಮ್ಮ ಪ್ರಶ್ನೆಯಾದರೆ : ಹಿಂದೂ ಕ್ಯಾಲೆಂಡರ್ ಪ್ರಕಾರ ಶ್ರೀಕೃಷ್ಣದೇವರಾಯನ ಪಟ್ಟಾಭಿಷೇಕವಾಗಿ 500 ವರ್ಷ ಪೂರೈಸಿದ್ದು ಆಗಸ್ಟ್ 08 2009 ರಂದು ಅನ್ನೋದು ಉತ್ತರ.

ಸರ್ಕಾರದ ಬಳಿ ಆಯ್ಕೆಯಾದ ಎಲ್ಲ ಜನಪ್ರತಿನಿಧಿಗೂ ಒಂದೊಂದು ' ಜವಾಬ್ದಾರಿಯುತ ' ಕುರ್ಚಿ ನೀಡಿ ಕುಳ್ಳಿರಿಸಲಿಕ್ಕೆ ಸಮಯ ಸಾಕಾಗದೆ ಇರೋ ತುರ್ತು ಪರಿಸ್ಥಿತಿಯಲ್ಲಿ ಕೃಷ್ಣದೇವರಾಯ 500 ವರ್ಷದ ಹಿಂದೆ ಸಿಂಹಾಸನ ಏರಿದ ಸುಸಂದರ್ಭ ನೆನೆಯಲಿಕ್ಕೆ ಸಮಯ ಸಿಗುವುದಾದರೂ ಎಲ್ಲಿಂದ ?

ಇನ್ನು ಗತವೈಭವ ಮರುಕಳಿಸಬೇಕಾದರೆ ಮಹಾಭಾರತದ ಕೃಷ್ಣ ವಿಜಯನಗರದ ಕೃಷ್ಣದೇವರಾಯನಾಗಿ ಹುಟ್ಟಿ ಬೆಳೆದು ದೊಡ್ಡವನಾಗಿ ಆಮೇಲೆ ರಾಜ್ಯಭಾರ ಮಾಡುವ ಕಾಲ ಬೇಗ ಬರಲೆಂದು ಹಾರೈಸೋಣ.

ನಿಮ್ಮ ಬರಹಗಳ ನಿರೀಕ್ಷೆಯಲ್ಲಿ,
ರೇವಪ್ಪ


13 November 2009

Namaste..

ನಿಮಗೆಲ್ಲ ಒಂದು ಮಾತು ಕೇಳ್ಬೇಕು...

ಅಲ್ರೀ ಅವತ್ತಿನ ದಿವಸ ಬ್ಲಾಗ್ ಮರು ಶುರು ಮಾಡ್ಲಿಕ್ಕೆ ನಾಲ್ಕೈದು ಜನ ಸೇರಿ ಬೆನ್ನು ತಟ್ಟಿದ್ದು ನೋಡಿ ಖುಷಿ ಆಗಿತ್ತು ...

ಆದ್ರೆ ಈ ಥರ ಬೆನ್ನು ತಟ್ಟಿ ಬಾವಿಗೆ ಬೀಳಿಸ್ತೀರಿ ಅನ್ಕೊಂಡಿರ್ಲಿಲ್ಲಿಲ್ಲ ಕಣ್ರೀ....

" ಬ್ಲಾಗ್ ಮುಂದುವರೆಸು ರೇವಪ್ಪ... ನಾವು ನಿಮ್ಮೊಂದಿಗಿದೀವಿ " ಅಂದ್ರೆ ಏನರ್ಥ ಅಂತ ಪ್ರಶ್ನೆ ಮಾಡ್ಕೋಬೆಕು ನಾನು..

" ನೋಡಿ ನಿಮಗೆ ಸರಿ ಅನ್ನಿಸಿದ್ದನ್ನ ನೀವು ಮಾಡಿ.. ನನಗನ್ನಿಸಿದ್ದನ್ನ ನಾನು ಮಾಡ್ತೀನಿ " ಅನ್ನೋವಷ್ಟು ಆತುರದ ನಿರ್ಧಾರ ತಗೊಳೊದಿಲ್ಲ...

ಸ್ವಲ್ಪ ದಿವಸ Wait & See ಮಾಡ್ತೀನಿ...

ನಿಮ್ಮವ,
ರೇವಪ್ಪ

02 November 2009

ಕನ್ನಡ ರಾಜ್ಯೋತ್ಸವ



ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

Your Responses

" Continue The Blog.. I Support Ur Idea "
yours
Parashu..,

ಬ್ಲಾಗ್ ನಮ್ಮ ನಡುವಿನ ಸಂಪರ್ಕ ಕೊಂಡಿಯಷ್ಟೇ ಆಗಿಲ್ಲ.... ನಮ್ಮ ನಡುವಿನ ಸಂವಹನ ಸೇತು... ನಮ್ಮ ಭಾವ ಬಿಂಬನದ ವೇದಿಕೆ.... ಬ್ಲಾಗ ನಮ್ಮ ನಡುವೆ ಸಾಮಾನ್ಯರಂತೆ ಇರುವವರ ಅಪ್ರಕಟಿತ ಪ್ರತಿಭೆಗಳಿಗೆ ಸೂಕ್ತ ವೇದಿಕೆಯಾಗಿ ಕೆಲಸ ಮಾಡಿದೆ.... ನಾನು ಬ್ಲಾಗ್ ನಿಂದ ಪಡೆದಿರೋದಕ್ಕೆ ಲೆಕ್ಕ ಇಟ್ಟರೆ ತಪ್ಪಾಗ ಬಹುದು.... ನೀಡಿದ್ದು ಮಾತ್ರ ಅಲ್ಪವೇ.... ಒಂದು ಸದಾಶಯ... ಎರಡು ಶುಭಾಶಯ... ಮತ್ತೊಂದು ಕತೆ ಇನ್ನೊಂದು ಭಾವ ಲಹರಿ..... ಬ್ಲಾಗ್ ನಿಲ್ಲಿಸಿದರೆ... ಇದಕ್ಕಾಗಿ ಸ್ಪಂದಿಸಿದ ಭಾವಗಳಿಗೆ ಮೋಸ ಮಾಡಿದಂತೆಯೇ ಸರಿ... ಯಾವುದೇ ಸ್ಪಂದನೆ ಹಳತಾದರು ಅದರ ಭಾವ ಚಿರಂತನ... ಅನ್ನೋದು ನನ್ನ ನಂಬಿಕೆ....
ನಲುಮೆಯಿಂದ
ಯಶವಂತ್

HAI "BLOG BHAYANKARA" REVA INNOVA, The past 10 months was a very interesting and entertaining period (thanks to u and our blog and to all my blog friends) for our blog provided the very much required forum to break the monotony we experienced in our workplace . It was a welcome change for us for it primarily paved the path for we friends to interact both socially and intellectually. it helped us to bring out the best in us through our writings. and then never can we forget the various "links" our blog provided . our blog was an network of various networks. i personally enjoyed taking part in our blog in one way or the other.we have a galaxy of stars like you(rev), niharika, yeshwanth, parashuram, madhuchandra, manjappa , santosh, nagarathna and not to forget ramesh and siddegowda.i have enjoyed reading their writings and i don't want to miss this opportunity which u and namma blog have created to exhibit the creative talent which is latent in not only the stars i named but also in those who are there to come. i very much enjoyed the comments i received for my writings and never to forget the support i received right from you to the non-secretariat competitors while conducting english grammar competition.At any cost i want the blog to continue . and as always i am always there to give and take from the blog . i am sorry "we" are always there to give and take from the blog .

some highlights:-

1)rev's katte melina maatu and pdo study materials
2)niharika's bhaava laharis-on the moon and "sanje male"
3)yash's muddu prema and bhavada elle meeri
4) parashu's "maravina prasanga" and "on the rain"
5) madhu's "kannada mattu anna"
6)manjappa's mega-serial and a poem on love
7)santu's multi-faced poems
8)nagaratnna's "namma bhaarata"
9)ramesh's article on various forms of love
10) siddegowda's shortpoem

( friends if i have forgotten to mention any author/poet kindly co-operate)

REV, HOW CAN I EVER THINK OF MISSING ALL THESE AND MORE WHICH ARE THERE TO COME.

REV, at present our blog may be treading on a snail pace but i believe it will gain momentum in the near future

So, I strongly support THAT OUR BLOG SHOULD AND MUST CONTINUE
And I VERY MUCH BELIEVE IT WILL CONTINUE

THE LONG GAP WHICH WE EXPERIENCED FOR NEARLY A MONTH OR SO WAS "MEDITATIVE PHASE" FOR YOU ,"OUR BLOG" AND TO ALL OF US

NOW WE HAVE ALL COME OUT OF THIS PHASE AND GAINED BOTH POWER AND PEACE AND COME ON FRIENDS LET US ALL FEEL IT COLLECTIVELY AND MUTUALLY.


I WISH ALL THE BEST TO ALL OF US AND TO "OUR BLOG"

LONG LIVE "OUR BLOG"

------------------------------
---------------------------ALWAYS YOUR'S
SAKKAT SACCHI


" i will always support ur idea.. u please continue the blog... i am waiting for ur blog "

- Pavithra


" Continue The Blog ...i Always Support Your Idea "

- Niharika




----------------------------------------------------------
.... Thank U

Revappa


31 October 2009

31 to 31

It's Been Relishing 10 Months From The Day 'Namma Blog' started.

We Witnessed Ups & Downs ....

Now It Has Come To A Stand still From The Past Few Days,

Rather Many Few Days...

WHO IS RESPONSIBLE ? CAN THEY COME FORWARD ON THEIR OWN !!

All U 62 Followers & Countless Wellwishers Supported My Idea...

& Helped My spirit Overcome Hardtimes...Thank U.

But Today, We R @ A Crucial Juncture...

So Now I Request The Interested Friends To VOTE for ' Namma Blog '

U Have The Option of Saying Your Bit... Dont Let it Go..!!

  • U Can Just Say " Continue The Blog.. I Support Ur Idea "
  • U Can Say " Why U Should Continue The Blog ? "
  • U Can Say " What All I Got From The Blog & What I Want 2 Give Back To It "



.
.
.
.
.
.

... Just Follow Your Heart & Say Your Bit to Save The Blog ...



[ All Your Opinions Are To Be Mailed 2 My e-mail ID ]

[ & Your Opinions will Be Published The Next Day ]


24 September 2009

No Results Found !!!

Yesterday, On The Way Back To Home, I Searched For The Reasons To Continue The Blog.

But I Found None.

If Any of U Have One, Let Me Know...

I Think Only [60 + 1] Reasons Will Lift Up My Spirit to Continue...

Or Else Let's Continue With Our 10-5 Routine...

& This Is What I Wanted To Write For Yesterday....

Yours,
Revappa

21 September 2009

ಶಾಭಾಶ್...!!!

ಮತ್ತೆ ಹೇಗಿದ್ದೀರಾ ..? ಎಲ್ರೂ...

ನಾನೂ ಚನ್ನಾಗಿದೀನಿ ...

ಎಲ್ರುದೂ ಪರೀಕ್ಷೆ ಸಾಂಗವಾಗಿ ಸಾಗಿದೆ ಅಂತ ಗೊತ್ತು ...

ನನಗೆ ಬಂದಿರುವ ....ಬರುತ್ತಿರುವ Performance Report ನೋಡಿದ್ರೆ ಮೇಲಿನ ಮಾತು ನಿಚ್ಚಳವಾಗಿದೆ ...

ಎಲ್ರಿಗೂ ಅಭಿನಂದನೆಗಳು ...

-------------------------------------------------

ಹೊಸ ದಿನ ಹೊಸ ಬಣ್ಣ ....ಆನಂದಿಸಿ ...[ ಇದು ಒಂದೇ ದಿನ ಈ ಬಣ್ಣ...ಹಾಗೆ ಸುಮ್ನೆ Change ಇರ್ಲಿ ಅಂತ ]

ನಿಮ್ಮವ,
Revappa

05 September 2009

" ಬದಲಾದ ಶಿಕ್ಷಕನ ಪಾತ್ರ "



" ಬದಲಾದ ಶಿಕ್ಷಕನ ಪಾತ್ರ "










ಈಗ್ಗೇ 5 ದಶಕಗಳ ಹಿಂದಿನ ಮಾತು....ಆಗ ಇರುತ್ತಿದ್ದುದು..ಗ್ರಾಮಕ್ಕೆ..ಒಂದು ಶಾಲೆ.ಅದಕ್ಕೆ ಇರುತ್ತಿದ್ದುದು ಒಬ್ಬನೇ ಶಿಕ್ಷಕ.ಅಂದಿಗೆ ಶಿಕ್ಷಕನಾದವನಿಗೆ ಸಮಾಜದಲ್ಲಿ ಅವನದ್ದೇ ಆದ ವಿಶೇಷ ಸ್ಥಾನ ಮಾನಗಳಿದ್ದವು.ಆತ ಕೇವಲ ಶಾಲೆಗೆ ಮಾತ್ರ ಶಿಕ್ಷಕನಾಗಿರದೆ,ಈಡೀ..ಊರಿಗೆ ಶಿಕ್ಷಕ....ಆದರ್ಶ ವ್ಯಕ್ತಿ.ಆ ಕಾಲದಲ್ಲಿ, ಸಾಕ್ಷರಾಗಿದ್ದುದು..ಅಲ್ಲಿನ ಶಾಲೆಯ ಶಿಕ್ಷಕ ಮತ್ತು ಆತನ ವಿದ್ಯಾರ್ಥಿಗಳು ಮಾತ್ರ ಹೀಗಾಗಿ...ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಯ ಮೂಲ ಶಿಕ್ಷಕ ಮಾತ್ರ ಆಗಿರುತ್ತಿದ್ದ.ಊರಿನಲ್ಲಿ ನಡೆಯುವ ಚಿಕ್ಕ ಪುಟ್ಟ ಜಗಳ,ಕಾದಾಟಗಳ ತೀರ್ಪುಗಾರ ಆತನೇ ಊರಿನ ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡುವ ಮಾರ್ಗದರ್ಶಿ.ಎಷ್ಟೋ ಸಲ ಊರಿಂದ ಊರಿಗೆ ಮಾಹಿತಿ ರವಾನಿಸುವ ಮಧ್ಯವರ್ತಿ,ಈಡೀ ರಾಜ್ಯ .ದೇಶ ವೀದೇಶಗಳ ಸುದ್ದಿಗಳನ್ನು ಊರಿನವರಿಗೆ ತಿಳಿಸುವ ಸಂವಾಹಕ.ಹೀಗೆ ಆತನ ಪಾತ್ರ ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತಿತ್ತು.ಆತ ಊರಿನವರ ದೃಷ್ಟಿಯಲ್ಲಿ,ವಿದ್ಯಾರ್ಥಿಗಳ ದೃಷ್ಟಿಯಲ್ಲಿ "ಸಾಕ್ಷಾತ್ ದೇವರು".

ಅಂದಿನ ಶಾಲೆಗಳಲ್ಲಿ ಇರುತ್ತಿದ್ದುದು..1 ಅಥವಾ 2 ಕೊಠಡಿಗಳು ಭೋದನೋಪಕರಣವೆಂದರೆ.ಕರಿಹಲಗೆ ಮಾತ್ರ.ಹೀಗಾಗಿ ಶಿಕ್ಷಕ ತನಗೆ ಗೊತ್ತಿದ್ದಿದ್ದಷ್ಟನ್ನು ಕೇವಲ ತನ್ನ ಅಭಿವ್ಯಕ್ತಿ ಸಾಮರ್ಥ್ಯದಿಂದ ಮಕ್ಕಳಿಗೆ ಅರ್ಥೈಸಬೇಕಾಗಿತ್ತು.ಯಾವುದೇ ರೀತಿಯ ಬೋಧನೆ- ಕಲಿಕಾ ಸಾಮಾಗ್ರಿಗಳು ಲಭ್ಯವಿರಲಿಲ್ಲ.ಬೋಧನೆ ಎನ್ನುವುದು ಕೇವಲ ಶಿಕ್ಷಕನ ವೈಯಕ್ತಿಕತೆಯನ್ನು ಆಧರಿಸಿತ್ತು.ಬಹುತೇಕ ಶಿಕ್ಷಕರಿಗೆ ಮಕ್ಕಳ ಮೇಲೆ ವೈಯಕ್ತಿಕ ಕಾಳಜಿ ಇತ್ತು.ಈ ಕಾರಣದಿಂದಲೇ ಮಕ್ಕಳನ್ನು ದಂಡಿಸುವ ನೈತಿಕ ಹಕ್ಕನ್ನು ಆತ ಹೊಂದಿರುತ್ತಿದ್ದ. " ಛಡಿ ಛಡಿ ಚಂ ಚಂ ವಿದ್ಯಾಯೇ ಘಂ ಘಂ"ಎಂಬುದು ಬಹುತೇಕ ಶಿಕ್ಷಕರ ನಿಲುವಾಗಿತ್ತು.ಆದರೂ ಕೂಡ ಶಿಕ್ಷಕರೆಂದರೆ ಮಕ್ಕಳಿಗೆ ವೈಯಕ್ತಿಕವಾದ ಪ್ರೀತಿ,ಗೌರವ ಅಭಿಮಾನಗಳಿದ್ದವು.
ಕಾಲ ಬದಲಾದ ಹಾಗೇ ಶೈಕ್ಷಣಿಕ ವ್ಯವಸ್ಥೆ, ಸಾಮಾಜಿಕ ವ್ಯವಸ್ಥೆ ಅದರೊಳಗಿನ ಒಂದು ಭಾಗವಾದ ಶಿಕ್ಷಕರು-ವಿದ್ಯಾರ್ಥಿಗಳ ಪಾತ್ರ ಕೂಡ ಬದಲಾಗುತ್ತಾ ಸಾಗಿದೆ....
ಈಗ ಪ್ರತಿ ಹಳ್ಳಿಗೂ ಶಾಲೆಗಳಿವೆ,ಬಹುತೇಕ ಎಲ್ಲಾ ಶಾಲೆಗಳಲ್ಲೂ ಮೂಲಭೂತ ಸೌಕರ್ಯಗಳಿವೆ,ಕನಿಷ್ಠ 2-3 ಶಿಕ್ಷಕರಿದ್ದಾರೆ,ಜೊತೆಗೆ ಬೋಧನೆಯ ಮೌಲ್ಯ ವಿಧಾನ ಪದ್ದತಿ,ಪಠ್ಯವಿಷಯ,ಪಠ್ಯವಸ್ತು,ಭೋದನಾ-ಕಲಿಕಾ ಸಾಮಾಗ್ರಿಗಳು,ಕಲಿಕೆಯ ವಿಧಾನ ,ಶಾಲೆಯ ಭೌತಿಕ ಪರಿಸರ,ಆಂತರಿಕ ವಾತಾವರಣ,ಶಿಕ್ಷಕರು- ಮಕ್ಕಳ ನಡುವಿನ ಸಂಬಂಧ,ಶಿಕ್ಷಕರು- ಪಾಲಕರ ಸಂಬಂಧ ಎಲ್ಲವೂ ಬದಲಾಗಿದೆ.ಇವತ್ತು ಮಕ್ಕಳಿಗೆ ಕೇವಲ ಶಿಕ್ಷಕ ಮಾತ್ರ ಕಲಿಕೆಯ ಆಧಾರವಗಿರದೆ ಹಲವು ಸಾಧನ ಸೌಲಬ್ಯಗಳು ಲಭ್ಯವಿದೆ.
ಸಮಾಜ-ಶೈಕ್ಷಣಿಕ ವ್ಯವಸ್ಥೆ ಬದಲಾಗಿದ್ದರೂ ಕೂಡ ಸಮಾಜದಲ್ಲಿ ಶಿಕ್ಷಕನಿಗಿರುವ ಗೌರವ,ಮೌಲ್ಯ ಕಡಿಮೆಯಾಗಿಲ್ಲ ಅನ್ನಬಹುದು.
ಆದರೂ,ಇಂದಿನ ದಿನಗಳಲ್ಲಿ ಶಿಕ್ಷಣ -ಶಿಕ್ಷಕ ಎಂಬ ಪವಿತ್ರ ವಿಚಾರವನ್ನು,ಮಾರಾಟಕ್ಕೆ ಇಳಿಸುತ್ತಾ ಇರುವುದು ಶೋಚನೀಯ ಸಂಗತಿ.

ನನ್ನೆಲ್ಲಾ ಶಿಕ್ಷಕರಿಗೆ ಗೌರವಪೂರ್ವಕ ವಂದನೆಗಳೊಂದಿಗೆ,
ನಿಹಾರಿಕಾ.

ಕೋಲು ಕೊಟ್ಟರು ಶಿಕ್ಷಕರು

ಕೋಲು ಕೊಟ್ಟರು ಶಿಕ್ಷಕರು

ನನಗಾಗ ಏಳು ವರ್ಷ ಎಲ್ಲಾ ಮಕ್ಕಳನ್ನೂ ಆರು ವರ್ಷ ತುಂಬುವುದರೊಳಗೇ ಶಾಲೆಗೆ ಸೇರಿಸಿದರೆ. ನನ್ನನ್ನು ಶಾಲೆಗೆ ಸೇರಿಸಲಾಗದಂತಹ ಪರಿಸ್ಥಿತಿಯಲ್ಲಿ ನಾನಿದ್ದೆನಂತೆ. ಹುಟ್ಟಿದ ಎರಡು ವರ್ಷಕ್ಕೆ ಪೋಲಿಯೋಕ್ಕೆ ತುತ್ತಾಗಿ ತೆವಳುವ ಮಗನನ್ನು ಶಾಲೆಗೆ ಸೇರಿಸುವುದಾದರೂ ಹೇಗೆ..? ಎಂಬ ಚಿಂತೆ ನನ್ನ ತಂದೆ-ತಾಯಿಯರದ್ದಾದರೆ, ಹೇಗಾದರಾಗಲಿ ನಾನು ನನ್ನ ಜೀವ ಗಟ್ಟಿ ಇರುವ ತನಕ ನೋಡಿಕೊಳ್ತೇನೆ ಎಂದು ಪಣತೊಟ್ಟಿದ್ದ ನನ್ನ ಅಜ್ಜಿ. ದೈರ್ಯದೊಂದಿಗೆ ಶಾಲೆಗೆ ಹೋಗಿ 'ಇತರ ಮಕ್ಕಳಂತೆ ಇವನಿಗೂ ಅಕ್ಷರ ಕಲಿಸಿ' ಎಂದು ಶಿಕ್ಷಕರಲ್ಲಿ ಬೇಡಿಕೊಂಡಳಂತೆ. ಆ ಶಿಕ್ಷಕರ ಮನಸ್ಸು ಕರಗಿತೋ ಏನೋ ನನಗೂ ಒಂದನೇ ತರಗತಿಗೆ ಪ್ರವೇಶ ಕೊಟ್ಟರಂತೆ. ಅಂದಿನಿಂದ ದಿನಾಲು ಬೆಳಿಗ್ಗೆ, ಮಧ್ಯಾಹ್ನ, ಸಂಜೆ ನನ್ನನ್ನು ಶಾಲೆಗೆ ಎತ್ತಿಕೊಂಡು ಹೋಗುವುದು, ಕರೆದುಕೊಂಡು ಬರುವುದು ನನ್ನಜ್ಜಿಗೆ ದಿನದ ಕರ್ಮವಾಯಿತಂತೆ. ನನ್ನಕ್ಕನೂ ಅದೇ ಶಾಲೆಯಲ್ಲಿ ಓದುತ್ತಿದ್ದಳಾದರೂ ಅವಳು ಎತ್ತಿಕೊಂಡು ಬರಲಾಗದಷ್ಟು ದಷ್ಟ-ಪುಷ್ಟ ನಾಗಿದ್ದೆನಂತೆ ಆಗ ನಾನು. ನಮ್ಮ ಶಾಲೆಯೇನೂ ದೂರವಿರಲಿಲ್ಲ ವಿಧಾನ ಸೌಧದಿಂದ ಕಾವೇರಿ ಭವನದ ವರೆಗಿನ ದೂರವಿರ ಬಹುದೇನೋ ಅಷ್ಟು ದೂರದಲ್ಲಿತ್ತು. ಅಲ್ಲಿಗೆ ಸರಿಸುಮಾರು ಒಂದು ವರ್ಷಗಳ ಕಾಲ ದಿನಾಲು ನನ್ನಜ್ಜಿ ನನ್ನನ್ನು ಶಾಲೆಗೆ ಕರೆದುಕೊಂಡು ಹೋಗುವುದು, ಬರುವುದು ನಡೆದೇ ಇತ್ತಂತೆ. ಹೀಗಿರುವಾಗ ಹೊಸದಾಗಿ ಬಂದಿದ್ದ 'ಡಿಸೋಜಾ' ಮೇಷ್ಟ್ರು ಒಂದು ದಿನ ನನ್ನಜ್ಜಿಯನ್ನು ಕರೆದು " ನೋಡಮ್ಮಾ ಈಗೇನೋ ಮೊಮ್ಮಗ ಚಿಕ್ಕವನಿದ್ದಾನೆ, ನಿನಗೂ ವಯಸ್ಸಿದೆ ಎತ್ತಿಕೊಂಡು ಬರ್ತೀಯ, ವರ್ಷಗಳು ಕಳೆದಂತೆ ಅವನು ದೊಡ್ಡವನಾಗ್ತಾನೆ, ನಿನಗೆ ಇಳಿಪ್ರಾಯವಾಗುತ್ತೆ ಆಗಲೂ ಎತ್ಕೊಂಡು ಬರೋಕೆ ಆಗುತ್ತಾ, ಯೋಚನೆ ಮಾಡು.... ಅದ್ಕೆ ಈ ಕೋಲು ಕೊಡು ದಿನಾ ಸ್ವಲ್ಪ ಸ್ವಲ್ಪ ನಡೆಸೋದನ್ನು ಅಭ್ಯಾಸ ಮಾಡಿಸು" ಅಂತೇಳಿ. ಬೇಲಿಯ ಬದಿಯಲ್ಲಿದ್ದ ಒಂದು ಕೋಲನ್ನು ಕೊಟ್ಟರಂತೆ.

ಅಂದು ಆ ಮೇಷ್ಟ್ರ ಮಾತಿನಂತೆ ನನಗೆ ಕೋಲನ್ನು ಕೊಟ್ಟು ನಡೆಯುವಂತೆ ಮಾಡಿದಳು ನನ್ನಜ್ಜಿ. ಅದರ ಬಲದಿಂದಲೇ ನಾನು ಇದುವರೆಗೆ ಬೆಳೆದೆ, ಬೆಳೆಯುತ್ತಿದ್ದೇನೆ. ಆನಂತರ ಒಂದೆರಡು ವರ್ಷ ಆ ಮೇಷ್ಟ್ರು ನಮ್ಮ ಶಾಲೇಲೆ ಇದ್ದು ನಂತರ ವರ್ಗವಾಗಿ ಬೇರೆ ಊರಿಗೆ ಹೋದ್ರಂತೆ. ಅವರ ಮುಖ ಪರಿಚಯ ನನಗೀಗಲೂ ಇಲ್ಲ. ನನ್ನಜ್ಜಿ ಈಗಲೂ ನನ್ನ ಬಾಲ್ಯದ ಕಥೆ ಹೇಳುವಾಗ ಆ ಮೇಷ್ಟ್ರು ಬಗ್ಗೆ ಹೇಳುವಾಗ ನನ್ನಲ್ಲಿ ನನಗರಿವಿಲ್ಲದೇ ಒಂದು ಅಗೋಚರ ಆರಾಧನಾ ಭಾವ ಡಿಸೋಜಾ ಮೇಷ್ಟರ ಬಗ್ಗೆ ಉಂಟಾಗುತ್ತೆ. ಪ್ರತಿ ವರ್ಷ ಶಿಕ್ಷಕರ ದಿನಾಚರಣೆ ಬಂದಾಗಲೂ ನನಗೆ ಡಿಸೋಜಾ ಮೇಷ್ಟ್ರು ನೆನಪಾಗ್ತಾರೆ. ನಾನು ಬೆಂಗಳೂರಿಗೆ ಬಂದ ಮೇಲೂ ಆಕಸ್ಮಿಕವಾಗಿ ನನ್ನಮ್ಮನಿಗೆ ಸಿಕ್ಕಿದ ಮೇಷ್ಟ್ರು 'ಶಿಷ್ಯ'ನ ಬಗ್ಗೆ ವಿಚಾರಿಸಿದರಂತೆ. ಹೀಗೆ 'ನನ್ನ ಕೋಲಮೇಲೆ ನಾನು ನಿಲ್ಲುವಂತೆ' ನನ್ನ ಬದುಕನ್ನು ರೂಪಿಸಿದ ಆ ಮೇಷ್ಟ್ರು ಹಾಗೂ ನನಗೆ ಅಕ್ಷರ ಧಾರೆ ಎರೆದ ಎಲ್ಲಾ ನನ್ನ ನೆಚ್ಚಿನ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಹೃತ್ಪೂರ್ವಕ ಶುಭಾಷಯಗಳನ್ನು ಕೋರುತ್ತೇನೆ.

ಗುರು ಬ್ರಹ್ಮ, ಗುರು ವಿಷ್ಣು, ಗುರುದೇವೋ ಮಹೇಶ್ವರ |
ಗುರು ಸಾಕ್ಷಾತ್ ಪರಬ್ರಹ್ಮ, ತಸ್ಮೈಶ್ರೀ ಗುರುವೇ ನಮಃ ||

ಪರಶು..,
renukatanaya@gmail.com

ಶಿಕ್ಷಕರ ದಿನಾಚರಣೆ

" ವರ್ಣ ಮಾತ್ರಂ ಕಲಿಸಿದಾತಂ ಗುರು "
ಎನ್ನುವುದನ್ನು ಸ್ಮರಿಸುತ್ತ, ನಮ್ಮ ಜೀವನದಲ್ಲಿ ಬಂದು ಹೋದ ಸಮಸ್ತ ಶಿಕ್ಷಕರಿಗೂ ಮನಃ ಪೂರ್ವಕ ನಮನಗಳು.



ಪುನರ್ನವ - ಸಚಿವಾಲಯ ಕಿರಿಯ ಸಹಾಯಕರ ಬ್ಲಾಗ್ 1.0




ಲೇಖನ ಕಳಿಸಲಿಚ್ಚಿಸುವವರು ಈ ದಿನ ಮಧ್ಯಾನ್ಹ 2 ಗಂಟೆಯವರೆಗೆ
ನನ್ನ e-mail ID ಗೆ ತಮ್ಮ ಲೇಖನ ಕಳಿಸಬಹುದು...[ ನಿನ್ನೆಯ ರಜೆ ದಿನವನ್ನ ಗಮನದಲ್ಲಿರಿಸಿಕೊಂಡು... ]
- revappa@gmail.com

02 September 2009

Articles Invited









ಶಿಕ್ಷಕರ ದಿನಾಚರಣೆ ಪ್ರಯುಕ್ತ ಲೇಖನಗಳನ್ನ ಆಹ್ವಾನಿಸಿದೆ.....

ನಿಮ್ಮ ಶಾಲೆಯ ಅನುಭವ , ಶಿಕ್ಷಕರೊಂದಿಗೆ ಕಳೆದ ' ಆ ದಿನಗಳು ' , ಅವರ ಮೇಲಿದ್ದ ಸಿಟ್ಟು - ಅವರ ಮೇಲಿದ್ದ ಗೌರವ, ಅವರೊಂದಿಗೆ ಕಳೆದ ರಸ ನಿಮಿಷಗಳು ...ಇವೆಲ್ಲ ಅಲ್ಲದೆ ನಿಮಗೆ ಸರಿ ಎನಿಸಿದ ಎಲ್ಲ ನೆನೆಪುಗಳನ್ನೂ ಎಲ್ಲರೊಂದಿಗೆ ಹಂಚಿಕೊಳ್ಳಿ ..

ನಿಮ್ಮ ಲೇಖನ ಹೀಗೆ ಇರಲಿ ...ಹಾಗೆ ಇರಲಿ ಎನ್ನುವ ನಿಬಂಧನೆ ಇಲ್ಲ ...ಸಂದರ್ಭೋಚಿತ ಎನ್ನುವ ನಿಯಮ ಹೊರತುಪಡಿಸಿ...

ಕೊನೆ ದಿನಾಂಕ : 5 ನೇ ಸಪ್ಟೆಂಬರ್ 2009 - ಬೆಳಿಗ್ಗೆ 05:00 ಗಂಟೆಯವರೆಗೆ

ನಿಮ್ಮವ,
ರೇವಪ್ಪ

14 August 2009

H1N1 ತಿಳುವಳಿಕೆ

ಹಕ್ಕಿಗಳು ಮನುಷ್ಯನ್ನ ಹೆದರಿಸಿಯಾಯ್ತು (ಹಕ್ಕಿ ಜ್ವರ ) ಈಗ ಹಂದಿಗಳ ಸರದಿ ....

ಹಂದಿ ಜ್ವರ ಅಂತ ಕರೆಸಿಕೊಂಡು H1N1 ಅಂತ ಮರುನಾಮಕರಣ ಗೊಂಡಿರುವ ರೋಗದ ಭೀತಿ ಎಲ್ಲೆಡೆ ಹಬ್ಬಿದೆ ..

ಮೊದಲು
ಏನು ಹೇಳಬಯಸ್ತೀನಿ ಅಂದ್ರೆ ನಿತ್ಯ ಜೀವನದಲ್ಲಿ ಯಾವುದೇ ಪ್ರಶ್ನೆ ಸಮಸ್ಯೆ ಗಳು ಎದುರಾದಾಗ ಅವಕ್ಕೆ ಮರುಪ್ರಶ್ನೆಹಾಕೊದಕ್ಕಿನ್ನ ಉತ್ತರ ಕಂಡುಹಿಡಿಯೋದು ಸೂಕ್ತ ದಾರಿ / ಪದ್ಧತಿ ಅಂದ್ರೆ ಹೀಗೆ ರೋಗದ ಭೀತಿ ಎದುರಾದಾಗ ಅದಕ್ಕೆ ಉತ್ತರವಾಗಿರುವ ತಿಳುವಳಿಕೆ / ಜಾಗೃತಿ ಹಬ್ಬಿಸುವ ಬದಲು ವದಂತಿ / ಭಯ ಹಬ್ಬಿಸೋದು ಸೂಕ್ತ ದಾರಿ / ಪದ್ಧತಿ ಅಲ್ಲ ... ಹೀಗಾಗಿ ನನಗೆ ತಿಳಿದಿರುವ ಕೆಲ ಮಾಹಿತಿಗಳನ್ನ ನಿಮಗೆ ತಿಳಿಸ ಬಯಸ್ತೇನೆ ...

H1N1 Virus ಹಂದಿಗಳಲ್ಲಿ ವರ್ಷಪೂರ್ತಿ ಜೀವಂತವಾಗಿರುತ್ತೆ... ಅಂದ್ರೆ ಅವುಗಳ ದೇಹದಲ್ಲಿ ಆಶ್ರಯ ಪಡೆಯುತ್ತೆ ... ಮನುಷ್ಯರು ಸರಿಯಾಗಿ ಬೇಯಿಸದ ಹಂದಿ ಮಾಂಸ ತಿಂದಾಗ ಅವರ ದೇಹ ಪ್ರವೇಶಿಸುವ ಸಾಧ್ಯತೆ ಇರುತ್ತೆ ... ಇದೆ ರೀತಿ ನಡೆದು ರೋಗ ಮೊದಲು ಕಾಣಿಸಿಕೊಂಡದ್ದು ಮೆಕ್ಸಿಕೋ ದಲ್ಲಿ ....
ಆದರೆ ಇಲ್ಲಿ ನಾವು ಗಮನಿಸಬೇಕಾದ ಅಂಶ ಏನು ಅಂದ್ರೆ ಹಂದಿಗಳು ಮಾಡಿರೋ ತಪ್ಪು ಏನೂ ಇಲ್ಲ : ಆ Virus ಗಳಿಗೆ ಆಶ್ರಯ ನೀಡಿದ್ದನ್ನ ಹೊರತುಪಡಿಸಿ ... ವೈರಸ್ ಮುಖ್ಯ ಗುಣ ಏನು ಅಂದ್ರೆ ಹಂದಿಗಳಲ್ಲಿದ್ದಾಗ ತೆಪ್ಪಗೆ ಕೂತು ಮನುಷ್ಯರಲ್ಲಿ ಬಂದಾಗ ಪ್ರಸರಣವಾಗ್ತಾ ಹೋಗುತ್ತೆ ..

ನಂತರ ಒಬ್ಬರಿಂದ ಒಬ್ಬರಿಗೆ ಹರಡೋದು ಸುಲಭ...


ನಮಗೆ 3 ದಿನಗಳಿಗಿಂತ ಹೆಚ್ಚಿಗೆ ನೆಗಡಿ, ಶೀತ, ಜ್ವರ ಉಳಿದುಕೊಂಡ್ರೆ ಮಾತ್ರ ಆತಂಕ ನಿವಾರಣೆಗಾಗಿ ಪರೀಕ್ಷೆ ಮಾಡಿಸಿಕೊಳ್ಬೇಕು....ಸುಮ್ನೆ ಬೆಂಗ್ಳೂರಲ್ಲಿ ಯಾರಿಗೋ ಬಂತು ಅಂತ ನಾವು ಆಸ್ಪತ್ರೆ ಎದುರಿಗೆ ಸಾಲು ಗಟ್ಟಿ ನಿಲ್ಲೋದು ಮೂರ್ಖತನ ವಾಗುತ್ತೆ ...

ಆಮೇಲೆ Mask ಧರಿಸುವ ಬಗ್ಗೆ :

ನಿನ್ನೆ ನಮ್ಮ ಕೇಂದ್ರ ಆರೋಗ್ಯ ಸಚಿವರೇ ಹೇಳಿರೋ ಹಾಗೆ ಇದು ಇರೋದು ಚಿಕಿತ್ಸೆ ತಗೊತಿರೋರಿಗೆ ಮತ್ತು ಕೊಡ್ತಿ ರೋರಿಗೆ ....ಸಾಮನ್ಯ ಜನ ಕರವಸ್ತ್ರ ಕಟ್ಟಿಕೊಂಡರೆ ಸಾಕು ... ಒಮ್ಮೆ ಧರಿಸಿದ ಕರವಸ್ತ್ರ ವನ್ನ 5-6 ಗಂಟೆಗಳ ಬಳಕೆ ನಂತರ ಸ್ವಚ್ಚವಾಗಿ ಒಗೆದು ಮತ್ತೆ ಬಳಸಬೇಕು ...ಅಥವಾ ದಿನಕ್ಕೆ 4 ಸ್ವಚ್ಚ್ ಇರೋ ಕರವಸ್ತ್ರ ಇಟ್ಟುಕೊಂಡು ಸರದಿಯಲ್ಲಿ ಬಳಸಿದರಾಯಿತು ...Actually ಸುರಕ್ಷಿತ Mask ಅಂದ್ರೆ N95 Mask ... ಅದು ದುಬಾರಿ ಕೂಡ ಅಂತ ಬೆಳಿಗ್ಗೆ ರೇಡಿಯೋದಲ್ಲಿ ವೈದ್ಯರೊಬ್ಬರು ಹೇಳಿದ್ರು ...

ಮುಂಜಾಗೃತೆ :

ಸಾಧ್ಯವಾದಷ್ಟು ಸಾರ್ವಜನಿಕ ಸ್ಥಳಗಳನ್ನ Avoid ಮಾಡಿ ...
ಜ್ವರ,ನೆಗಡಿ,ಕೆಮ್ಮು ಇರೋ ಮಕ್ಕಳನ್ನ ಕೆಲ ದಿನ ಶಾಲೆಗೆ ಕಳಿಸದೆ ಸೂಕ್ತ ಚಿಕಿತ್ಸೆ ಕೊಡಿಸಿ ...
ಭಯ ತಂದುಕೊಳ್ಳೋದು / ತರಿಸೋದನ್ನ ಬಿಟ್ಟು ಸರಿಯಾದ ತಿಳುವಳಿಕೆ ತಗೊಳ್ಳೋದು + ತಂದುಕೊಡೋದು ...

ಇದೂ ಕೂಡ ಬೆಳಿಗ್ಗೆ ರೇಡಿಯೋದಲ್ಲಿ ಡಾಕ್ಟರು ಹೇಳಿದ್ದು ...


*********************

ಸ್ನೇಹಿತರೊಬ್ಬರು ತಮ್ಮ ಬ್ಲಾಗ್ ನಲ್ಲಿ ಬರೆದ ಸರಕನ್ನ ಕದ್ದು ಇಲ್ಲಿ ಕೆಳಗೆ ನೀಡಿದೀನಿ ( ಇದರ ಸತ್ಯಾಸತ್ಯತೆ ಅವರ ಜವಾಬ್ದಾರಿ ಅಂತ ಗುಟ್ಟನ್ನ ಹೇಳ್ದೆ ) ಆಯುವ್ರೇದ ವಿಧಾನ ಯಾವತ್ತಿದ್ರೂ ಒಳ್ಳೇದೇ ಅಲ್ವೇ ?

ಗೃಹಬಳಕೆಯ ವಸ್ತುಗಳಿಂದ ಹಂದಿಜ್ವರ ಅಲಿಯಾಸ್ ಸ್ವೈನ್ ಫ್ಲೂ ಅಲಿಯಾಸ್ ಎಚ್1ಎನ್1 ಇನ್‌ಫ್ಲೂಯೆಂಜಾ ಎಂಬ ಮಹಾಮಾರಿ ಹತ್ತಿರ ಸೋಂಕದಂತೆ ದೂರವಿರಿಸಬಹುದು.

* ನಿಮ್ಮ ಕರವಸ್ತ್ರದಲ್ಲಿ ಒಂದು ಹನಿ ನೀಲಗಿರಿ ತೈಲವನ್ನು ಚಿಮುಕಿಸಿಕೊಳ್ಳಿ.
* ಒಂದು ಸೆಕೆಂಡುಗಳ ಕಾಲ ಲವಂಗದ ತೈಲವನ್ನು ಇನ್‌ಹೆಲ್ ಮಾಡಿ.
* ಲವಂಗವನ್ನು ಬಾಯಲ್ಲಿರಿಸಿಕೊಂಡು ನಿಧಾನಕ್ಕೆ ಅದರ ರಸವನ್ನು ನುಂಗಿ (ದಿನಕ್ಕೊಂದು)
* ಒಂದರಿಂದ ಐದು ಗ್ರಾಂಗಳಷ್ಟು ಹಸಿ ಬೆಳ್ಳುಳ್ಳಿ, ಈರುಳ್ಳಿ ಹಾಗೂ ಶುಂಠಿಯನ್ನು ತಿನ್ನಿ
* ಬಿಸಿ ಹಾಲಿನಲ್ಲಿ ಎರಡು ಗ್ರಾಂ ಅರಸಿನಪುಡಿ ಸೇರಿಸಿ ಕುಡಿಯಿರಿ
* ವಿಟಮಿನ್ ಸಿ ಇರುವ ಹಣ್ಣು-ತರಕಾರಿಗಳನ್ನು ಹೇರಳವಾಗಿ ಸೇವಿಸಿ
* ಪ್ರತಿನಿತ್ಯ ತುಳಸಿ ಎಲೆಗಳನ್ನು ಜಗಿದು ತಿನ್ನಿ

ಇದರಿಂದ ಹಂದಿಜ್ವರ ಮಾತ್ರವಲ್ಲ, ಎಲ್ಲಾ ರೀತಿಯ ರೋಗದಿಂದಲೂ ದೂರ ಇರಬಹುದು.


*****************************

FACT :

ಈ ಜ್ವರ ಬರೋ ವ್ಯಕ್ತಿಗಳಲ್ಲಿ 95 % ವ್ಯಕ್ತಿಗಳು ಸಂಪೂರ್ಣ ಗುಣಮುಖರಾಗ್ತಾರೆ...ಸೂಕ್ತ ಸಮಯದಲ್ಲಿ ಸರಿಯಾದ ಚಿಕಿತ್ಸೆ ಪಡೆದಾಗ ....ಈಗಾಗಲೇ ನೀವುಗಳು ಪತ್ರಿಕೆಗಳಲ್ಲಿ ಓದಿರೋ ಹಾಗೆ ಈಗಾಗಲೇ ಬಲಿಯಾಗಿರುವ ಅನೇಕರಿಗೆ ಶ್ವಾಸಕೋಶ ಸಂಬಂಧಿ ಕಾಯಿಲೆ ಇರೋದರ ಜೊತೆಗೆ ಇದೂ ಸೇರಿಕೊಂಡು ಪರಿಸ್ಥಿತಿ ಕೈ ಮೀರಿದ್ದು ..

ಸಮಸ್ಯೆಯ
ವೈಭವೀಕರಣ / ಪರಿಸ್ಥಿತಿಯ ದುರುಪಯೋಗ :

ಇದೂ ಆಗೋ ಸಾಧ್ಯತೆಯನ್ನ ತಳ್ಳಿ ಹಾಕುವಂತಿಲ್ಲ ... ನಮ್ಮ ಗೃಹ ಮಂತ್ರಿಗಳು ನಿನ್ನೆ ಹೇಳಿದರಲ್ಲ " ಇದು ಪ್ರವಾಸಿಗರು ನಮ್ಮದೇಶಗಳ ಕಡೆ ಬರೋ ಕಾಲ ಅವರನ್ನ ಬೇರೆ ಕಡೆ Divert ಮಾಡೋ ಸಲುವಾಗಿ ಕೆಲವರು ಮಾಡಿರೋ ಕುತಂತ್ರ " ಅಂತ ...

ಮತ್ತೆ Mask ಕಂಪನಿಗಳ ಕುಮ್ಮಕ್ಕೂ ಇರಬಹುದು ...

ನೀವು ಮಾತ್ರ ಜಾಗೃತಿ ತಗೊಳ್ಳಿ ಮತ್ತು ನೀಡಿ ....


ಮುಗಿಸೋದಕ್ಕಿನ್ನ ಮುಂಚೆ ಹಾಸ್ಯಾಸ್ಪದ ವಿಚಾರ ಹೇಳ್ಬೇಕು :



ನಾವು ನೂರ ಹತ್ತು ಕೋಟಿ ಜನರಲ್ಲಿ ಕೆಲವೇ ಜನರಿಗೆ ಬಂದಿರೋ
H1N1 ಗೂ ಮತ್ತೆ ಲಕ್ಷ ಲಕ್ಷ ಜನರಿಗೆ ಹಬ್ಬಿರೋ AIDS ಗೂ IRONY ನೋಡಿ




ಜಾಗೃತಿ ಪಡೆಯಿರಿ ಮತ್ತು ನೀಡಿ ಎಂಬ ಸದಾಶಯದೊಂದಿಗೆ ,
Revappa





05 August 2009

First Batch PP Declared



ನಮ್ಮ ಬ್ಯಾಚ್ ಮೊದಲ ಇಪ್ಪತ್ತು ಜನ ಕಿರಿಯ ಸಹಾಯಕರ ಪರೀಕ್ಷಾ ಪೂರ್ವ ಅವಧಿ ತೃಪ್ತಿಕರವೆಂದು ಘೋಷಣೆಯಾಗಿದೆ. ಸಂಧರ್ಭದಲ್ಲಿ ನಮಗೆ ಸಹಕರಿಸಿದ ಎಲ್ಲ ರಿಗೂ ನಾವು ಧನ್ಯವಾದಗಳನ್ನ ಅರ್ಪಿಸೋದು ನಮ್ಮ ಕರ್ತವ್ಯ .

ಎಲ್ಲ ಸಂಬಂಧಿಸಿದ ಶಾಖೆಯ ವಿಷಯ ನಿರ್ವಾಹಕರು ...

ನಮ್ಮ ಅರ್ಜಿಗಳನ್ನ ಆಡಳಿತ ಶಾಖೆಗೆ ಶಿಫಾರಸ್ಸು ಮಾಡಿದ ಅದಿಕಾರಿಗಳು ...

ನಮ್ಮ ಕಾರ್ಯನಿರ್ವಹಣಾ ವರದಿಯನ್ನ ಧನಾತ್ಮಕವಾಗಿ ಬರೆದವರು ...

ನಮ್ಮ ಟಪಾಲುಗಳನ್ನ ಆಡಳಿತ ಶಾಖೆಗೆ ತಲುಪಿಸಿದ ದಲಾಯತ್ ಮಿತ್ರರು ..

...........

ಪ್ರತ್ಯಕ್ಷ ಹಾಗೂ ಅಪ್ರತ್ಯಕ್ಷ ವಾಗಿ ಸಹಕರಿಸಿದ ಎಲ್ಲರಿಗೂ ನಮ್ಮ ಧನ್ಯವಾದಗಳು ...





ಕಿರಿಯ
ಸಹಾಯಕರ ಪ್ರಥಮ ಬ್ಯಾಚ್ ಪರವಾಗಿ,
ರೇವಪ್ಪ



21 May 2009



Major Terrorist Attacks In India


ಥರ ದಾಳಿಗೀಡಾ ಅಮಾಯಕರೆಷ್ಟೋ ?


March 12, 1993 - A series of bomb blasts, planted by Muslim underworld figures, rock the country's commercial capital of Bombay, killing some 260 people and injuring 713.


February 14, 1998 - 46 persons were killed and more than 200 injured when 13 blasts ripped through Coimbatore, members from Al-Umma, All India Al-Jihad Committee, and Peoples Democratic Party were found to be behind the attack.

December 24-31, 1999 – Pakistani militants hijack


an Indian Airlines flight from Kathmandu to New Delhi with 189 people aboard, kill one passenger and force the release of three jailed Muslim militants in exchange.

December 22, 2000 - Lashkar-e-Taiba militants attack the Red Fort in Delhi that left two Army personnel and a civilian dead.

October 1, 2001 - At least 21 people killed in a suicide bomb explosion and gunfire at the assembly in Kashmir in an attack by suspected Islamic militants.

December 13, 2001 - Heavily armed Islamic militant group opened fire in Parliament complex, killing several people in an unprecedented attack on the seat of power in the world's biggest democracy.

January 22, 2002 - Four people were killed in an attack on the American Center, Kolkata by Lashkar-e-Taiba militants.

March 30, 2002 - Seven Hindus killed in an attack by Islamic militants on the Raghunath Temple in Jammu.

May 14, 2002 - More than 30 army men were killed in a terrorist attack on an Army camp near Jammu.

September 24, 2002 - 35 people were killed when 2 Lashkar-e-Taiba militants attacked the Akshardham temple in Gandhinagar, Gujarat.

December 2, 2002 - Two persons were killed and 31 injured in a powerful explosion in a bus outside the crowded Ghatkopar railway station in Mumbai. Students Islamic Movement of India was suspected to be behind the blasts

December 6, 2002 - Twenty-five people were injured in a bomb blast by members of the Students Islamic Movement of India at McDonalds fast food restaurant at Mumbai Central railway station. The bomb was planted in the airconditioner duct. It was suspected to be a crude bomb.

January 27, 2003 - At least 30 people were injured when a bomb planted on a bicycle went off throwing splinters of sharp nails outside Vile Parle railway station in Mumbai. Members of SIMI were found to be behind the attack.

March 13, 2003 - A powerful bomb blast shattered a bogie of a local train at Mulund railway station in Mumbai during peak hours killing 11 people and injuring more than 65. This was the most powerful serial explosion.

August 23, 2003 - Two bombings at the Gateway of India and the Mumba Devi temple in Mumbai killed 52, injured 167. Terrorists from Lashkar-e-Taiba and the Students Islamic Movement of India were found to be behind the attacks.

July 28, 2003 - Bus blast kills 3 and injures 31 others in Mumbai. Pakistani intelligence agency: ISI and members of the Students Islamic Movement of India were found to be behind the blast.

July 5, 2005 - Five Bangladeshi terrorists, trained by the Jaish-e-Mohammad, attacked the Ram Janmabhumi in Ayodhya, all 5 killed, 1 civilian died.

October 29, 2005 - 67 people were killed and 224 injured in serial bombings in major Delhi markets on Diwali eve. A Pakistani group, Islamic Inquilab Mahaz, claimed responsibility for the attack. The group is linked to Lashkar-e-Taiba.

March 7, 2006 - At least 20 persons were killed and over 101 injured when two blasts rocked Varanasi. The first blast took place at the Sankat Mochan Hanuman temple, the second at the Varanasi railway station. Terrorists from Lashkar-e-Taiba were found to be behind the attack.

June 1, 2006 - Three heavily armed terrorists were killed in an encounter with the police when they tried to drive through the security cordon guarding the RSS headquarters in Nagpur. Two policemen were injured in the encounter.

July 11, 2006 - Seven explosions ripped through crowded commuter trains and stations in Mumbai, killing at least 200 people and leaving 700 more bloodied and injured.


Lashkar-e-Taiba and local Students Islamic Movement of India (SIMI) activists were found to be behind the attacks.


September 8, 2006: Over 37 killed and 125 injured in a series of bomb blasts in the vicinity of a mosque in Malegaon, Maharashtra.


May 18, 2007: At least 13 were killed in the bombing at Mecca Masjid, Hyderabad, which took place during Friday prayers.


August 25, 2007: At least 42 people were killed in two blasts in Hyderabad's Lumbini park and a restaurant.


May 13, 2008: At least 63 were killed in nine bomb blasts in Jaipur.


July 25, 2008: At least two killed and 20 injured in eight low-intensity blasts in Bangalore.


July 26, 2008: 29 killed and over 100 injured in 17 serial bomb blasts in Ahmedabad.


September 13, 2008: At least 15 killed and over 110 injured in five blasts across New Delhi.


November 26, 2008: 195 killed, over 300 hundred injured


in a series of synchronised attacks in Mumbai around midnight on Wednesday. Three top Mumbai Police officials also killed in encounter.


--------------------------------------





One Famous Writer Writes For


The New Indian Express


On Terrorists & Terror Attacks.















-----------------------------------------


ಇದು ಒಂದು Eye Opener ರೀತಿಯಲ್ಲಿ ನೀಡಿರುವ ಮಾಹಿತಿ ....


ಇಲ್ಲಿ ಬಲಿಯಾದವರು ಯಾರೋ ಒಬ್ಬ ಭಾರತೀಯನ ತಂದೆ , ಅಣ್ಣ , ತಂಗಿ , ಮಗು ....ಅಂತ ಬಗೆದರೆ ಈ ಮಣ್ಣಿಗೆ ನಾವೂ


ದ್ರೋಹ ಬಗೆದಂತಗುತ್ತೆ.....


ಇಂದಲ್ಲ ನಾಳೆ ಇಂಥ ದಾಳಿಗಳಿಗೆ


ನಾವು / ನಮ್ಮವರು / ನಮ್ಮ ದೇಶದ ಜನ ತುತ್ತಾಗುವುದನ್ನತಪ್ಪಿಸಲು ನಮ್ಮಿಂದ ಮಾತ್ರ ಸಾಧ್ಯ...


ಉಗ್ರರ ವಿರುದ್ಧ ಹೊರಡಲಿಕ್ಕೆ NSG ಇಂದ ಮಾತ್ರ ಸಾಧ್ಯ ಅಂತ ತಿಳ್ಕೊಳ್ಳೋದು ಶುದ್ಧ ಹೇಡಿತನ ...


ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸೋದು ಒಂದು ಹೋರಾಟವೇ ...


ಅಷ್ಟೆ ಅಲ್ಲ ಉಗ್ರರ ವಿರುದ್ಧದ ಹೋರಾಟಗಳಲ್ಲಿ ಅದೇ ಮೊದಲನೆಯದು ...


ನಾವೂ ಮೊದಲಿಗರಾಗೋಣ....


ಅದಕ್ಕೆ ಪ್ರಥಮ ಹೆಜ್ಜೆಯಾಗಿ ' ಭಯೋತ್ಪಾದನೆಯ ವಿರುದ್ಧ ಜನರಲ್ಲಿ ಹೇಗೆ ಜಾಗೃತಿ' ತರುವಿರಿ ಅಂತ ತಿಳಿಸಿ ...


Comment ಗಳ ಮೂಲಕ ....



ನಿಮ್ಮವ,

ರೇವಪ್ಪ

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    11 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    11 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದ...
    13 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    15 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    15 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    15 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    16 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    16 years ago