Showing posts with label ತುಂಗೆಯ ಹನಿಗಳು.... Show all posts
Showing posts with label ತುಂಗೆಯ ಹನಿಗಳು.... Show all posts

18 August 2009

ಸಂತೋಷ್ ಮತ್ತೊಮ್ಮೆ ...

ಮೆಟ್ಟಿಲುಗಳು....

ಕಾಡುತ್ತಿವೆ ನನಗೆ

ಈ ಮೆಟ್ಟಿಲುಗಳು.

ಸುರುಳಿ, ಸುರುಳಿಯಾಗಿ ಮೇಲೇರಿ

ನಭಕೆ ಚುಂಬಿಸುತ್ತಿವೆ.

ಹತ್ತಲಾರೆನೆಂದು ಅಡಿಯಲ್ಲಿದ್ದೆ.

ಅಶಕ್ತ ಕೈಗಳಾಸರೆಯಲಿ ಹತ್ತಿಬಿಟ್ಟ.

ಹತ್ತಿದವನೊಬ್ಬ ಸುಲಭದಲಿ ಇಳಿದು;

ಮತ್ತೆ ಹತ್ತಿದ.

ನನ್ನೊಡನಿದ್ದವರು;

ನನ್ನಿಂದೆ ಬಂದವರು ಎಲ್ಲರೂ

ಮೆಟ್ಟಿಲುಗಳ ಏರಿ, ಮೀರಿ

ಮುಗಿಲೆಡೆ ಇದ್ದರು.

ನಾ ಮಾತ್ರ ಇದ್ದಲೇ ಇದ್ದೆ.

ದಿಟ್ಟಿಸುತ್ತಿದ್ದೆ ಅವನ್ನೇ,

ಮೂರ್ತವಾದ ಇವು

ಅಮೂರ್ತವಾದದ್ದೇನೋ ಹೇಳುತ್ತಿದ್ದವು.

ಅಮೂರ್ತವ ಅರ್ಥೈಸಿಕೊಳ್ಳುವುದರಲ್ಲಿ

ಮೀರಿತ್ತು ಮೆಟ್ಟಿಲೇರುವ ಸಮಯ.

******

ಕುರುಡ...

ರೈಲಿನಲ್ಲಿ ನಿದ್ದೆಯಲ್ಲಿದ್ದೆ,

ಇಂಪಾದ ಧ್ವನಿಯೊಂದು ತೇಲಿ ಬಂತು.

ಗಾನ ಕುರುಡನದು; ಬಿಕ್ಷೆಗಾಗಿ.

ಜನರು ಜಾಸ್ತಿ,

ಎದ್ದರೆ ಸ್ಥಾನ ವಂಚನೆಯ ಭಯ.

ಅಂತರಾತ್ಮ ಮರಗುತ್ತಿತ್ತು.

ತೊಳಲಾಟದಲ್ಲಿ ಅಂತಾತ್ಮ ಸೋತಿತು.

ನೋಡುತ್ತಿದ್ದೆ ಅವನನ್ನೇ...

ಇವುಗಳನ್ನೆಲ್ಲವ ಮೀರಿ ಮುಂದೆ ಸಾಗುತಿದ್ದ...

***** ಸಂತೋಷ್ ಸಿಹಿಮೊಗೆ

03 August 2009

ಸಂತೋಷ್ ಸಿಹಿಮೊಗೆ 2 ಕವನಗಳು

ಅರಳಿ ಮರ....

ಒಂದು ಅರಳಿ ಮರ,

ತುಂಗೆ ತೀರದ ಬಳಿ.

ನಾ ಅದರ ಮುಂದೆ ಅಜ;

ಅದು ನೂರ್ಮಡಿಗಳಷ್ಟು ಗಜ.

ಮಳೆಯಲ್ಲೊಮ್ಮೆ

ಬುಡದಲ್ಲಿ ನಿಂತಿದ್ದೆ.

ಪಕ್ಕದ ಬೇವಿನೊಂದಿಗೆ

ಮದುವೆಯಾಗಿತ್ತು.

ಕಲ್ಲುಗಳ ರಾಶಿಗೆ

ಪೂಜೆ ಸಾಗಿತ್ತು.

ಕೆಳಗೆ ಅರಳಿಯ ಹಣ್ಣುಗಳು,

ಬಿಡಿಸಿದರೆ ಬರೀ ಹುಳುಗಳು.

ಬಿತ್ತು ಕೊಂಬೆಯೊಂದು ಮಳೆಗೆ.

ಹೊತ್ತೊಯ್ದೆ ಮನೆಗೆ.

ಅರಳಿ ಮರ ಶ್ರೇಷ್ಠ,

ಒಲೆಗೆ ಒಡ್ಡಬಾರದೆಂದಳಮ್ಮ.

ಪಕ್ಕದ ಹುಸೇನಣ್ಣನ ಮನೆಯಲಿ

ಒಡ್ಡಿ ಅರಳಿಯ ಕೊಂಬೆ,

ರೊಟ್ಟಿ ಮಾಡಿ ತಿಂದು;

ಜಾರಿದರು ಸುಖ ನಿದ್ದೆಗೆ...!

ನಿರ್ವಾಣ...

ನನ್ನಜ್ಜ

ಗಾಣದೆತ್ತಿನ ಜೀವ.

ಅವನಿಗೆ ಅಸಾಧ್ಯ

ಅಳುನಗುಗಳು.

ಅಪಘಾತಕ್ಕೊಳಗಾದ.

ಹೊತ್ತಿ-ಸುತ್ತಿ ಬಂದರು,

ಊರು-ನಗರಗಳ ಆಸ್ಪತ್ರೆ.

"ಪ್ರಾಣ" ಹೋಗದೆ

ತಂದರು ಮನೆಗೆ.

ನಡುಮನೆಯಲಿ

ನಿಶ್ಚಲನಾಗಿದ್ಧವನು

ಮನದಲ್ಲೇ ಮನೆನೋಡಿದ.

ಕಣ್ಣಂಚಲಿ ಕಂಬನಿ ಮಿಡಿಯಿತು.

ಮನೆಯ ಮೇಲೆ ಕೂತಿದ್ದ ಹಕ್ಕಿ ಹಾರಿತ್ತು.



-ಸಂತೋಷ್ ಸಿಹಿಮೊಗೆ.

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    11 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    11 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದ...
    13 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    15 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    15 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    15 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    16 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    16 years ago