Showing posts with label ಸ್ಪಂದನ. Show all posts
Showing posts with label ಸ್ಪಂದನ. Show all posts

27 July 2010

ಗೋಹತ್ಯೆ ನಿಷೇಧ/ Anti Cow Slaughter



ಗೋಹತ್ಯೆ ನಿಷೇಧ/ Anti Cow Slaughter


ನಮ್ಮ ಸಂವಿಧಾನದ  Article 48 ನಲ್ಲಿ ಗೋಹತ್ಯೆ ನಿಷೇಧ ಕುರಿತು ಹೇಳಲಾಗಿದೆ. ನಾವಿರುವುದು For the people, by the people ಎಂದು ಹೇಳುವ Democratic Country  ಅಲ್ಲಿ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. 

Indian Constitution Article 48 reads: Organisation of agriculture and animal husbandry", Its state "the state shall endeavor to organise agriculture and animal husbandry on modern and scientific lines and shall, in particular, take steps for preserving and improving the breeds, and prohibiting the slaughter of cows and calves and other milch and draught cattle".

ಅದರಂತೆ, ಕೃಷಿ ಮತ್ತು ಪಶು ಸಂಗೋಪನೆ ಅಭವೃದ್ದಿ ಕುರಿತು ಆಧುನಿಕ ಹಾಗೂ ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಳ್ಳುವ/ಅನುಸರಿಸುವ ಬಗ್ಗೆ ಪ್ರಯತ್ನಿಸುವುದು ಹಾಗೂ ವಿಶೇಷವಾಗಿ ಗೋಹತ್ಯೆ  ನಿಷೇಧ ಮತ್ತು ಜಾನುವಾರುಗಳ (ದನ, ಕರು, ಎತ್ತು, ಎಮ್ಮೆ, ಹೋರಿ) ಪೋಷಣೆ, ಸಂರಕ್ಷಣೆ ಮಾಡುವ ಕುರಿತಂತೆ ಆಯಾ ರಾಜ್ಯಗಳು ಕ್ರಮ ಕೈಗೊಳ್ಳುವುದು ಎಂದು ಹೇಳಲಾಗಿದೆ.
Article 48 specifically provides that the State should make a law prohibiting slaughter of cows, calves as also milch and draught.

ನಮ್ಮ ಸಂವಿಧಾನ  ಎನ್ನುವುದು Sacrosanct and Superior ಅಂದರೆ ಧಾರ್ಮಿಕ ಮನ್ನಣೆ ಪಡೆದ, ಸರ್ವಶ್ರೇಷ್ಟವಾದ, ಅಪವಿತ್ರ ಮಾಡಕೂಡದ ಹಾಗೂ ರಾಜ್ಯದ ನೀತಿ-ನಿಯಮಗಳು/ಸಾಮಾನ್ಯ ನಿಯಮಗಳು ಕುರಿತಂತೆ ಮಾರ್ಗದರ್ಶನ ನೀಡುವ ಪ್ರಬಲವಾದ ಒಂದು ಶಾಸನ. ಮಧ್ಯಪ್ರದೇಶ,  ಉತ್ತರ ಪ್ರದೇಶ, ಬಿಹಾರ, ಗುಜರಾತ್ ರಾಜ್ಯಗಳಲ್ಲಿ ಗೋಹತ್ಯೆ ನಿಷೇಧವನ್ನು ಜಾರಿಗೆ ತಂದು ಸಂವಿಧಾನಕ್ಕೆ ಗೌರವ ಸಲ್ಲಿಸಿದ್ದಾರೆ ಎಂದು ಹೇಳಬಹುದು.

ಗುಜರಾತ್ ನಲ್ಲಿ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಜಾರಿಗೆ ತಂದ ಕುರಿತು ಒಂದು Case ದಾಖಲಾಯಿತು. ಅದೇ, "State of Gujarath V/s Mirzapur Moti Kureshi Kasab Jammath" (2005(8) SCC 534). And this was referred to larger bench of 7 judges and the judgement was,


"ಸಂವಿಧಾನದ Article 48 ರಲ್ಲಿ ಹೇಳಲಾಗಿರುವ ವಿಷಯಗಳ ಹಿತದೃಷ್ಟಿಯಿಂದ, ರಾಜ್ಯ ಸರ್ಕಾರ ಯಾವುದೇ ನಿರ್ಧಾರಗಳನ್ನು ಕೈಗೊಂಡರೂ ಅದು ಅಕ್ರಮವಲ್ಲ, ಸಂವಿಧಾನದ ಪ್ರಕಾರ ನ್ಯಾಯಯುತವಾದದ್ದು, " ಎಂಬ ನಿಲುವನ್ನು ಎತ್ತಿ ಹಿಡಿಯಿತು. 

ಅಲ್ಲದೇ ಯಾವುದೇ ರಾಜ್ಯ ಶಾಸಕಾಂಗವು ಗೋಹತ್ಯೆ ನಿಷೇಧಿಸಲು ದಕ್ಷ ಮತ್ತು ಸಮರ್ಥನೀಯವಾಗಿರುವುದಲ್ಲದೇ ಅಂತಹ ಕಾನೂನನ್ನು Article 48 ರಲ್ಲಿ ಸ್ಪಷ್ಟವಾಗಿ ಹೇಳಿರುವಂತೆ ಜಾರಿಗೆ ತರುವುದು ಸಹ ಸಂವಿಧಾನಾತ್ಮಕ ಕರ್ತವ್ಯವಾಗಿದೆ. ಸಂವಿಧಾನದಲ್ಲಿ ಈ ಬಗ್ಗೆ ಎಲ್ಲಿಯೂ redundant ಆಗಿ ಅಂದರೆ ಅತಿರೇಕವಾಗಿ ಹೇಳಲಾಗಿಲ್ಲ.
Indian Constitution ಗೆ ಗೌರವ ಕೊಡಬೇಕಾದ್ದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಕರ್ತವ್ಯ.  ಆದ್ದರಿಂದ, ಈ ಶಾಸನಕ್ಕೆ ವಿರೋಧ ವ್ಯಕ್ತಪಡಿಸುವುದು, ಭಾರತದ ಸಂವಿಧಾನಕ್ಕೆ ಅಗೌರವ ತೋರಿದಂತೆ ಹಾಗೂ ರಾಜಕೀಯ ಪ್ರೇರಣೆ ನೀಡಿದಂತಾಗುತ್ತದೆ. ನಮ್ಮ ಹಕ್ಕಿಗೆ ಯಾವುದೇ ರೀತಿಯ ಧಕ್ಕೆ ಉಂಟಾದರೆ ನಮ್ಮ Constitution ನಲ್ಲಿರುವ fundamental rights ( eg. Right to speak) ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುವ ನಾವು, ಅದೇ Constitution ನಲ್ಲಿ ಹೇಳಲಾಗಿರುವ ಗೋಹತ್ಯೆ ನಿಷೇಧ ಕುರಿತು ಉದಾಸೀನ/ತಾರತಮ್ಯ ತೋರುವುದು ಎಷ್ಟು ಸರಿ. ನಮ್ಮ ಸಂವಿಧಾನವನ್ನು ನಮ್ಮ ಸ್ವಾರ್ಥ ಸಾಧನೆ ಹೊರತು ಪಡಿಸಿಯೂ ಸಹ ಗೌರವಿಸಬೇಕಾದ್ದು ನಮ್ಮೆಲ್ಲರ  ಆದ್ಯ ಕರ್ತವ್ಯ. 300 B.C. ಯಲ್ಲಿ ಬರೆದ ಕೌಟಿಲ್ಯನ ಅರ್ಥಶಾಸ್ತ್ರದಲ್ಲೂ ಗೋಹತ್ಯೆ ನಿಷೇಧ ಹಾಗೂ ಅದರ ಸಂತತಿಯನ್ನು ರಕ್ಷಿಸುವ ಬಗ್ಗೆ ಹೇಳಿರುವುದು ನಿಜಕ್ಕೂ ಸಮಂಜಸವಾಗಿದೆ.

ಈ ಕುರಿತಂತೆ ಮಹಾತ್ಮ ಗಾಂಧಿ, ಅಂಬೇಡ್ಕರ್, ವಿವೇಕಾನಂದ ರಂತಹ ಮಹನೀಯರು ಈ ನಿಷೇಧವನ್ನು ಸ್ವಾಗತಿಸಿದ್ದರು.

ಈ ಗೋಹತ್ಯೆ ನಿಷೇಧವನ್ನು Dalits and Minorities, concentrate ಮಾಡಿ ವಿರೋಧಿಸುತ್ತಿರುವುದಾದರೆ, ನಮ್ಮ Indian Constitution ರಚಿಸಿದವರೂ ಸಹ  ಒಬ್ಬ Dalit  ಎಂಬುದನ್ನು ಯಾರೂ ಮರೆಯಬಾರದು. ಇನ್ನೂ ಕ್ಯೂಬಾ, ಇರಾನ್ ಅಲ್ಲದೇ ಪಾಕಿಸ್ತಾನ ದಂತಹ ಮುಸ್ಲಿಂ ರಾಷ್ಟ್ರಗಳಲ್ಲೂ ಗೋಹತ್ಯೆಯನ್ನು ನಿಷೇಧಿಸಲಾಗಿದೆ. 

ಇನ್ನೂ ಹೇಳುವುದಾದರೆ It is a blatant act of heresy. ಇದು ನಾವು ನಂಬಿ ಸ್ವೀಕರಿಸಿರುವ ಧಾರ್ಮಿಕ ತತ್ವ/ಸಿದ್ದಾಂತಗಳ ವಿರುದ್ದ ಎತ್ತಿ ಕಟ್ಟಿ, ಗಲಭೆ ಹುಟ್ಟುಹಾಕುವ ಹುನ್ನಾರವಾಗಿದೆ. ಇದರಲ್ಲಿ ಯಾವುದೇ ರೀತಿಯ conspiracy  ಆಗಲೀ, ರಾಜಕೀಯ ಆಗಲೀ ಮಾಡುವುದು ಸರಿಯಲ್ಲ.  ಇದು ಸಂವಿಧಾನವನ್ನು ಅಂಗೀಕರಿಸಿದ್ದೇನೆಂದು ಅದಕ್ಕೆ ಬದ್ದನಾಗಿದ್ದೇನೆ ಎಂದು ಹೇಳಿ ಪ್ರಮಾಣ ಮಾಡಿರುವವರೆಲ್ಲರೂ ಸಂವಿಧಾನವನ್ನು ಉಲ್ಲಂಘನೆ ಮಾಡುವುದಷ್ಟೇ ಅಲ್ಲ, ಅದನ್ನು ಖಂಡಿಸಿದಷ್ಟೇ ಸಮನಾಗಿದೆ.

"ಇಟ್ಟರೆ ಸಗಣಿಯಾದೆ, ತಟ್ಟಿದರೆ ಕುರುಳಾದೆ, ತಟ್ಟದೆ ಹಾಕಿದರೆ ಮೇಲು ಗೊಬ್ಬರವಾದೆ, ಸುಟ್ಟರೆ ನೊಸಲಿಗೆ ವಿಭೂತಿಯಾದೆ, ನೀನ್ಯಾರಿಗಾದೆಯೋ ಎಲೆ ಮಾನವ" ಎಂಬುದೊಂದು ನುಡಿ ಗಟ್ಟಿದೆ.

ಗೋವುಗಳು ಹಿಂದೂ ಧರ್ಮದ ಅವಿಭಾಜ್ಯ ಅಂಗ ಆಗಿವೆ. ಅವುಗಳನ್ನು ಪರಮ ಪೂಜ್ಯ  ಎಂದು ಭಾವಿಸಲಾಗುತ್ತದೆ. ಅವುಗಳು ತಾಯಿ (ತಾಯಿಯಂತೆ ಹಾಲು ನೀಡಿ ಪೋಷಿಸುತ್ತವೆ) ತಂದೆ (ದುಡಿಯುವ ದೃಷ್ಟಿಯಿಂದ ಹೇಳುವುದಾದರೆ, ಹೊಲದಲ್ಲಿ ದುಡಿದು, ವಸ್ತುಗಳ ಸಾಗಣೆಗೆ ಬಳಸಲಾಗುತ್ತದೆ) ಸಾಕ್ಷಾತ್ ಭಗವಂತನ ಸ್ವರೂಪವಾಗಿ ಪೂಜಿಸಲ್ಪಡುತ್ತವೆ (ಶುಭ ಸಮಾರಂಭದಲ್ಲಿ ಹಬ್ಬಗಳಲ್ಲಿ ವಿಶೇಷವಾಗಿ ಪೂಜಿಸಲ್ಪಡುತ್ತವೆ) ಅಷ್ಟೇ ಅಲ್ಲದೇ ಅವುಗಳ ಸಗಣಿ ಮತ್ತು ಗೋಮೂತ್ರ ಪವಿತ್ರ ಅಷ್ಟೇ ಅಲ್ಲ  ಅವುಗಳನ್ನು ಆಯುರ್ವೇದಿಕ್ ಔಷಧಿಯ ತಯಾರಿಕೆಯಲ್ಲಿ ಹಾಗೂ ಸಗಣಿಯನ್ನು ಗೊಬ್ಬರವಾಗಿ ಬಳಸಲಾಗುತ್ತಿದೆ. ಇಂತಹ ಗೋವುಗಳನ್ನು ಹತ್ಯೆ ಮಾಡುವುದು ನಿಜಕ್ಕೂ ಹೇಯ ಕೃತ್ಯ. It is a brutal activity.

ಹೀಗೆ ಪ್ರತಿಯೊಂದು ವಿಷಯದಲ್ಲೂ ನಾನಾ ರೀತಿಯಾಗಿ ಉಪಯೋಗಕ್ಕೆ ಬರುತ್ತಿರುವ ಗೋವುಗಳನ್ನು ಸಂರಕ್ಷಿಸುವುದರ ಮೂಲಕ ನಮ್ಮ ಸಾಂಸ್ಕೃತಿಕ ಮೌಲ್ಯಗಳನ್ನು ಉನ್ನತ ಮಟ್ಟಕ್ಕೆ ಏರಿಸುವುದಲ್ಲದೇ ಅವುಗಳಿಗೆ ಪುನರ್ಜೀವ ಕೊಟ್ಟಂತಾಗುತ್ತದೆ.

ನಮ್ಮ ಹಿಂದೂಶಾಸ್ತ್ರದಲ್ಲಿ:

ಗೋಬ್ರಾಹ್ಮಣ ಹಿತಾಯಚ, ಜಗದ್ದಿತಾಯ ಕೃಷ್ಣಾಯ, ಗೋವಿಂದಾಯ ನಮೋ ನಮ: ||
ಗೋಬ್ರಾಹ್ಮಣೇಭ್ಯ: ಶುಭಮಸ್ತು ನಿತ್ರ ಲೋಕಸಮಸ್ತಾ ಸುಖಿನೋ ಭವಂತು:||

ಎಂದು ಹೇಳುತ್ತಾರೆ, ಅಂದರೆ ಎಲ್ಲಿ ಗೋವುಗಳನ್ನು ಸಂರಕ್ಷಿಸಿ ಪೂಜಿಸಲಾಗುತ್ತದೋ ಅದು ಸಾಕ್ಷಾತ್ ಭಗವಂತನ ಸ್ಮರಣೆ ಮಾಡಿದಂತಾಗಿ ಲೋಕ ಕಲ್ಯಾಣವಾಗುತ್ತದೆ ಎಂದು.

Finally, 
forget about the constitution : forget about the anti-slaughter bill : forget about the conspiracy.

ಮನುಷ್ಯರಾದ ನಾವೆಲ್ಲರೂ ಒಮ್ಮೆ ಮಾನವೀಯತೆ ದೃಷ್ಟಿಯಿಂದ, ಮಾನವೀಯ ಹಾಗೂ ಸಾಂಸ್ಕೃತಿಕ ಮೌಲ್ಯಗಳಿಗೆ ಬೆಲೆ ಕೊಟ್ಟು ಯೋಚಿಸುವುದಾದರೆ,    ಹುಲ್ಲು ತಿಂದು ಹಾಲು ನೀಡಿ ಕಾಪಾಡುವ ಮುಗ್ಧ ಮೂಕ ಪ್ರಾಣಿಯಾದ ಗೋವುಗಳನ್ನು ಹತ್ಯೆ ಮಾಡುವುದು ಎಷ್ಟು ಸರಿ?? ಮನುಷ್ಯರಾಗಿ ನಮಗೆ ನಾವು ಮಾಡುವ ಕೆಲಸದಿಂದ retire ಆಗಬೇಕು ಎಂದು ಅನ್ನಿಸುವಾಗ ಸಾಧು ಪ್ರಾಣಿಯಾದ ಗೋವುಗಳು ನಿರಂತರವಾಗಿ ದುಡಿಯುತ್ತಿರಬೇಕು,  ಅವುಗಳು ಬಳಲಿ ಬೆಂಡಾದಾಗ ಪ್ರಯೋಜನಕ್ಕೆ ಬಾರದು ಎಂದಾಗ ಅವುಗಳನ್ನು ಹತ್ಯೆ ಮಾಡಬೇಕು ಎನ್ನುವುದು ಎಲ್ಲಿಯ ನ್ಯಾಯ???

ಹಾಗಾಗಿ ಯಾವುದೇ ಪಕ್ಷ/ಜಾತಿ, ಕೋಮು/ಧರ್ಮ ಭೇದವನ್ನು ಮರೆತು ಗೋವುಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎನ್ನುವುದು ನನ್ನ ಭಾವನೆ.




 - Spandana






PS : Images : As It's Horrible Seen To See Our Mother Cow Slaughtered I Cant Publish The Images Here ... But Those Who Want To Witness The Brutality Can Clik Here
The Human Cattle Ratio Graph For Who Boast of Sufficient Livestock in India Clik Here 

{ ಕ್ಯೂಬಾದಲ್ಲಿ ಗೋವುಗಳಿಗೆ ಬೇಕಾದ ಹುಲ್ಲನ್ನು ಕೊಳ್ಳುವ ಶಕ್ತಿಯೂ ಇಲ್ಲ ಹಾಗಾಗಿ ಗೋವುಗಳ ಸಾವು ವಿಪರೀತ, ಇದರ ಜೊತೆಗೆ ಬರ ಸಹಾ ಗೋ ಸಂಖ್ಯೆಯ ಮೇಲೆ ತೀವ್ರ ಪರಿಣಾಮ ಬೀರಿತು. ಈ ಹಿನ್ನೆಲೆಯಲ್ಲಿ ಹಾಲಿನ ತೀವ್ರ ಬರ. ಅಲ್ಲಿನ ಜನಸಂಖ್ಯೆಗೆ ಹೋಲಿಸಿದರೆ ತೀರಾ ತೀರಾ ಕಡಿಮೆ. ಈ ಕಾರಣದ ಹಿನ್ನೆಲೆಯಲ್ಲಿ ಗೋ ಹತ್ಯೆಯನ್ನು ನಿಷೇಧಿಸಲಾಗಿತ್ತು.

ಅಷ್ಟೇ ಅಲ್ಲ ಕ್ಯೂಬಾದಲ್ಲಿ ಆರ್ಥಿಕ ನಿಷೇಧ ಹೇರಿ ಅವರ ಉಸಿರುಗಟ್ಟಿಸಲು ಪ್ರಯತ್ನಿಸಿದಾಗೆಲ್ಲ ಅವರು ಜೀವತಂತ್ರಜ್ಞಾನದ ಮೊರೆ ಹೊಕ್ಕು ತಮ್ಮನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಗೋವಿನ ಸಂಖ್ಯೆ ಕಳವಳ ಹುಟ್ಟಿಸುವಷ್ಟು ಕಡಿಮೆ ಆದಾಗ ಬಯೋ ಟೆಕ್ನಾಲಜಿ ಮೂಲಕ ಮನೆಯೊಳಗೇ ಸಾಕಬಹುದಾದ ಹಸುವನ್ನು ಸೃಷ್ಟಿಸುವ ಕಲ್ಪನೆಯೂ ಕ್ಯೂಬಾಕ್ಕಿತ್ತು. - Add On From ಮಂಜುನಾಥ್ ಎಸ್.  - Varify Yourself    }
 

16 May 2010

ಮಾನಿನಿ

ಮಾನಿನಿ ::

ಈ  ಹೆಸರಿನಲ್ಲೇ ಗೌರವವಿದೆ. "ಮಾನಿ" ಎಂದರೆ ಗೌರವಸ್ಥ, ಮರ್ಯಾದಸ್ಥ ಎಂದು. ಸ್ತ್ರೀ ಎಂದರೆ ಗೌರವ, ಗೌರವ ಎಂದರೆ  ಸ್ತ್ರೀ  ಎಂಬಷ್ಟರ ಮಟ್ಟಿಗೆ ಆಕೆ ತನ್ನ ಜೊತೆಗೆ ಗೌರವವನ್ನೂ ಅಂಟಿಸಿಕೊಂಡೇ ಬಂದಿದ್ದಾಳೆ ಎಂಬುದಕ್ಕೆ ಈ ಮೇಲಿನ ಮಾನಿನಿ ಪದ ಒಂದು ಸಣ್ಣ ಉದಾಹರಣೆ ಅಷ್ಟೆ.  

ಇದಕ್ಕೆ ಪೂರಕವಾಗಿ ಹೇಳುವುದಾದರೆ, ನಮ್ಮದು ಪುರುಷ ಪ್ರಧಾನ, patriarchal ಸಮಾಜವೇ ಆದರೂ ಸ್ತ್ರೀ ಗೆ ಒಂದು ವಿಶೇಷ ಸ್ಥಾನ, ಗೌರವ, ಪೂಜ್ಯನೀಯ ಭಾವನೆ ನೀಡಿ  "ಯತ್ರ ನಾರ್ಯಸ್ತು ಪೂಜ್ಯಂತೆ, ರಮಂತೆ ತತ್ರ ದೇವತಾ:" ಎಂದು ಹೇಳಲಾಗಿದೆ.  ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ವಾಸವಾಗಿರುತ್ತಾರೆ ಎಂಬುದು ಈ ಶ್ಲೋಕದ ಅರ್ಥ.  ನಮ್ಮ ಪುರಾಣಗಳಲ್ಲಿ ಇದಕ್ಕೆ ಸಾಕಷ್ಟು ನಿದರ್ಶನಗಳು  ಸಿಗುತ್ತವೆ.

ನಮ್ಮ Typical Indian Woman ಹೇಗೆ ಪಾಶ್ವಿಮಾತ್ಯ  ಮಹಿಳೆಯರಿಗಿಂತ ಭಿನ್ನವಾಗುತ್ತಾಳೆ ಎಂಬುದಕ್ಕೆ ಅವಳಲ್ಲಿ ಕಂಡುಬರುವ ಈ ಕೆಳಕಂಡ ಗುಣಗಳು/ಹೋಲಿಕೆಗಳಿಂದ ಎಂದು ನಮ್ಮ ಸನಾತನ ಧರ್ಮ ಹೇಳುತ್ತದೆ.  ಅದೇ "ಕಾರ್ಯೇಷು ದಾಸಿ, ಕರಣೇಷು ಮಂತ್ರಿ, ಪೂಜ್ಯೇಷು ಮಾತಾ, ಭೋಗೇಷು ಲಕ್ಷ್ಮೀ, ಕ್ಷಮಯಾಧರಿತ್ರಿ, ಶಯನೇಷು ರಂಭಾ"  ಎಂದು. 

ಈ ರೀತಿ ನಮ್ಮ ಸಮಾಜ ಸ್ತ್ರೀಯನ್ನು ಒಂದು ಕಡೆ ವಿಶೇಷವಾಗಿ ಕಾಣುತ್ತಾ, ಗೌರವ ಪೂಜ್ಯ ಭಾವನೆ ತೋರುತ್ತಿದ್ದರೆ, ಮತ್ತೊಂದೆಡೆ ಅದೇ ಸಮಾಜ ಸ್ತ್ರೀಯನ್ನು  ನಿಕೃಷ್ಟವಾಗಿ ಕಾಣುತ್ತಾ, ದೌರ್ಜನ್ಯ, ಶೋಷಣೆಗೆ ಒಳಪಡಿಸುತ್ತಿದೆ.  ಸ್ತ್ರೀ ಕುರಿತಂತೆ,   ಸ್ತ್ರೀ ಸ್ವಾತಂತ್ಯ್ರ ಹಾಗೂ ಸ್ತ್ರೀ ದೌರ್ಜನ್ಯ  ಈ ಎರಡೂ ಧೋರಣೆಗಳನ್ನು ನಮ್ಮ ಸಮಾಜದಲ್ಲಿ ಕಾಣುತ್ತಿದ್ದೇವೆ.  ಹಾಗಾಗಿ ಈ ಲೇಖನ  ಸ್ತ್ರೀಯ ಪರವಾಗಿಯೋ, ಅಥವಾ ಪುರುಷ ವಿರೋಧಿಯಾಗಿಯೋ ಹೇಳುವುದಕ್ಕೆ ಬದಲಾಗಿ "Socialist Realism" ಬಗ್ಗೆ ಹೇಳುವ  ಒಂದು ಸಣ್ಣ ಪ್ರಾಮಾಣಿಕ ಪ್ರಯತ್ನವಷ್ಟೇ. 

ಗಂಡ ಮನೆಗೆ ಬಂದಾಗ ಬಾಗಿಲ ಮರೆಮಾಡಿಕೊಳ್ಳುವ ಹೆಣ್ಣು, ಇಂದು ಗಂಡನಿಗೆ ಸರಿಸಮಾನವಾಗಿ ಹೊರಗೆ ದುಡಿಯುವಷ್ಟು ಮಟ್ಟಿಗೆ  Self dependent ಆಗಿದ್ದಾಳೆ.  ಅಷ್ಟೇ ಅಲ್ಲ ಅವಲಂಭಿತರನ್ನು ಸಾಕುವ ಮಟ್ಟಕ್ಕೂ ಆರ್ಥಿಕವಾಗಿ ಸಬಲಳಾಗಿದ್ದಾಳೆ.   ಸ್ತ್ರೀ ರಕ್ಷಣೆ ಕುರಿತಂತೆ ನಮ್ಮ "ಮನುಸ್ಮೃತಿ"ಯಲ್ಲಿ ಈ ರೀತಿ ಹೇಳಲಾಗಿದೆ. "ಪಿತಾ ರಕ್ಷತಿ ಕೌಮಾರ್ಯೇ, ಭರ್ತಾ ರಕ್ಷತಿ ಯೌವನೇ, ಪುತ್ರಾಸ್ತು ಸ್ಥವಿರೇ ತಸ್ಮಾತ್ ನ ಸ್ತ್ರೀ ಸ್ವಾತಂತ್ಯ್ರ ಮರ್ಹತಿ"  ಈ ಹೇಳಿಕೆಯನುಸಾರ, ಸ್ತ್ರೀಯ ರಕ್ಷಣೆಯ ಜವಾಬ್ದಾರಿಯನ್ನು ಆಕೆಯ ಬಾಲ್ದದಲ್ಲಿ ಆಕೆಯ ತಂದೆಗೆ, ಯೌವನದಲ್ಲಿ ಪತಿಗೆ ಮತ್ತು ವೃದ್ದಾಪ್ಯದಲ್ಲಿ ಪುತ್ರರಿಗೆ ವಹಿಸಲಾಗಿದೆ.   ಮಹಾತ್ಮ ಗಾಂಧೀಜಿಯವರು ಹೇಳುತ್ತಿದ್ದಂತೆ ನಮ್ಮ ದೇಶಕ್ಕೆ ನಿಜವಾದ  ಅರ್ಥದಲ್ಲಿ  ಸ್ವಾತಂತ್ರ್ಯ ಸಿಗುವುದು, ರಾಮರಾಜ್ಯದ ಕನಸು ನನಸಾಗುವುದು ಒಂದು ಹೆಣ್ಣು ಅರ್ಧರಾತ್ರಿಯಲ್ಲಿ ಯಾವುದೇ ರಕ್ಷಣೆ ಇಲ್ಲದೆ ಸುರಕ್ಷಿತವಾಗಿ ತಲುಪುವಂತಾದಾಗ. ಆದರೆ, ಇಂದು ಹಗಲಿನಲ್ಲೂ ಮಹಿಳೆ ಸುರಕ್ಷಿತಳಲ್ಲ ಎಂಬುದಕ್ಕೆ ಹಾಡುಹಗಲೇ ಅವಳ ಮೇಲೆ ನಡೆಯುತ್ತಿರುವ ಅತ್ಯಾಚಾರ, ಹತ್ಯೆ, ದೌರ್ಜನ್ಯ, ಶೋಷಣೆ ಇವುಗಳ ಬಗ್ಗೆ ಪ್ರತಿನಿತ್ಯ ಮಾಧ್ಯಮದಲ್ಲಿ ಸಾಕಷ್ಟು ನೋಡುತ್ತಲೇ ಇದ್ದೇವೆ.  ಹೊರಗೆ ದುಡಿಯುವ ಮಹಿಳೆಯ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. Yes. It is "a bed of thorns".  ಅವಳು ಕೆಲಸ ನಿರ್ವಹಿಸುವ ಸ್ಥಳದಲ್ಲಿ ನಡೆಯುವ sexual harassment ಆಗಿರಬಹುದು, ಅಥವಾ ಇನ್ನಾವುದೋ ತರಹದ ದೌರ್ಜನ್ಯಗಳಾಗಿರಬಹುದು,  ಇಂತಹ ಅನೇಕ ಘಟನೆಗಳು ಆಕೆ ಎಷ್ಟು ಸುರಕ್ಷಿತಳು ? ಎಂಬ ಭಾವನೆಯನ್ನು ನಮ್ಮಲ್ಲಿ ಮೂಡಿಸದೇ ಇರಲಾರವು.  ಕೆಲವೊಂದು ಸಂದರ್ಭದಲ್ಲಂತೂ ಅವಳ ಸ್ಥಿತಿ  between two menacing dangers  ಅನ್ನೋ ಹಾಗೆ  "ಇತ್ತ ದರಿ ಅತ್ತ ಪುಲಿ"  ಅನ್ನೋ ರೀತಿ ಇರುತ್ತದೆ.  ಇಂಥಹ ಪ್ರಕರಣಗಳು ಹೆಚ್ಚಾಗಿ ಜನಬಲ, ಹಣಬಲ ಇನ್ಯಾವುದೋ ಬಲಗಳ ಪಾಶಕ್ಕೆ  ಸಿಲುಕಿ ಬೆರಳಣಿಕೆಯಷ್ಞು ಪ್ರಕರಣಗಳು ಮಾತ್ರ ಬೆಳಕಿಗೆ ಬರುತ್ತಿವೆ ಅಷ್ಟೇ.  ಮಹಿಳೆ ಇಂತಹ ದೌರ್ಜನ್ಯಗಳ ವಿರುದ್ದ ಎಷ್ಟೇ ದಿಟ್ಟತನ ತೋರುತ್ತಾ ಬಂದಿದ್ದರೂ, She is not free from the difficulties yet.  ಅವಳ ಪರವಾಗಿ ಅನುಕಂಪದಿಂದ ಎಲ್ಲರೂ ಪುಟಗಟ್ಟಲೇ ಬರೆಯಬಹುದು, ಭಾಷಣ ನೀಡಬಹುದು.  ಆದರೆ, " The wearer know where the shoe pinches" ಅನ್ನೋ ಹಾಗೆ ವಾಸ್ತವವಾಗಿ ಕಷ್ಟ ಎಲ್ಲಿದೆ ಎಂಬುದು ಅವುಗಳನ್ನು ಅನುಭವಿಸುವವರಿಗೆ ಮಾತ್ರ ಗೊತ್ತು.

ಇನ್ನೂ ಕಳೆದ ಮಾರ್ಚ್ ನಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ ಕುರಿತಂತೆ, ಸಂಸತ್ತಿನಲ್ಲಿ ಹಕ್ಕು ವಿಧೇಯಕ ಮಂಡನೆಯಾಗಿರುವುದು ಸರಿಯಷ್ಟೇ. ಆದರೆ ಈ ಮೀಸಲಾತಿಯ  ಪರ, ವಿರೋಧಗಳೆಷ್ಟು  ಎಂಬುದನ್ನೂ ಈಗಲೂ ನೋಡುತ್ತಿದ್ದೇವೆ. Its a moot point. ಈ ಕುರಿತಂತೆ ಸಾಕಷ್ಟು ಭಿನ್ನಾಭಿಪ್ರಾಯಗಳನ್ನು ಕಾಣುತ್ತಿದ್ದೇವೆ. ಇದು ಇನ್ನೂ ಇತ್ಯರ್ಥವಾಗಬೇಕಾಗಿರುವ ವಿಷಯವಾಗಿದೆ. Yes. It is "an open Question".

ಹೀಗೆ ಸ್ತೀ ಯನ್ನು ಒಂದು ಕಡೆ ಪೂಜ್ಯನೀಯ/ಗೌರವವಿಂದ ಕಾಣುತ್ತಿರುವುದು, ಇನ್ನೊಂದು ಕಡೆ ಅವಳ ಮೇಲೆ ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಿರುವುದು ಇವೆರಡೂ ನಮ್ಮ ಸಮಾಜದಲ್ಲಿ ಒಟ್ಟೊಟ್ಟಿಗೆ Parallel ಆಗಿ ಸಾಗುತ್ತಿವೆ. 

ಮತ್ತೊಂದು ಕಡೆ   " A feather in one`s cap"  ಅನ್ನೋ ರೀತಿ ನಮ್ಮ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ, ಖ್ಯಾತಿ ಪಡೆದು ನಾವೆಲ್ಲರೂ ಹೆಮ್ಮೆ ಪಡುವ ರೀತಿ ನಮ್ಮ ರಾಷ್ಟ್ರ ಪತಾಕೆಯನ್ನು ಬಾನೆತ್ತರಕ್ಕೆ  ಹಾರಿಸುತ್ತಿರುವುದಕ್ಕೆ ಉದಾಹರಣೆಯಾಗಿ highest paid CEO ಎಂಬ ಖ್ಯಾತಿಗೆ ಒಳಗಾಗಿರುವ PEPSICO ಅಧ್ಯಕ್ಷೆ ಇಂದ್ರಾನೂಯಿ,  Biocon  ಮುಖ್ಯಸ್ಥೆ ಕಿರಣ್ ಮಜುಂದಾರ್,  ಸುನೀತಾ ವಿಲಿಯಮ್ಸ್, ಕಲ್ಷನಾ ಚಾವ್ಲಾ, ನಿರುಪಮಾ ರಾಯ್,  ಇವರಂಥ ಅಸಮಾನ್ಯ ಮಹಿಳೆಯರನ್ನು ಕಾಣುತ್ತಿದ್ದೇವೆ.  

ಒಟ್ಟಿನಲ್ಲಿ ಹೇಳುವುದಾದರೆ ಈ ರೀತಿಯ ದೌರ್ಜನ್ಯಗಳು ಅಂತ್ಯಗೊಳ್ಳಬೇಕಾದರೆ ಮನುಷ್ಯರಲ್ಲಿ  ಪರಿವರ್ತನೆ  ಆಗಬೇಕಾಗಿರುವುದು ಬಹಳ ಮುಖ್ಯ. ಅದು ಅವರು ಯೋಚಿಸುವ ರೀತಿಯಲ್ಲಾಗಿರಬಹುದು, ನೋಡುವ ರೀತಿಯಲ್ಲಾಗಿರಬಹುದು. ಮೇಲು ಕೀಳೆಂಬ ತಾರತಮ್ಯ ತೋರದೇ ವಿಶಾಲಮನೋಭಾವ ಮೂಡುವಂತಾಗಬೇಕು.  ಇದು ಕಷ್ಟದ ವಿಷಯವೇನಲ್ಲ.
 
ಆದರೆ, ಅನ್ಯೋದ್ದೇಶವಾಗಲೀ, ಅಳಿಸಿಹಾಕಲು ಸಾಧ್ಯವೇ ಇಲ್ಲದಂಥ ಪೂರ್ವಗ್ರಹವಾಗಲೀ  ಇದ್ದರೆ ಮಾತ್ರ ಅಂಥವರಲ್ಲಿ ಪರಿವರ್ತನೆ ಕಷ್ಟಸಾಧ್ಯ.

ಸುಧಾ.

20 April 2010

ಕ್ರೌರ್ಯ!!


:: ಕ್ರೌರ್ಯ!! ::


ಅಬ್ಬಾ ಈ ಹೆಸರೇ ಎಷ್ಟೊಂದು ಭಯಾನಕ! ಈ ಪದ ಕಿವಿ ಮೇಲೆ ಬಿದ್ದ ತಕ್ಷಣವೇ ನಮ್ಮ ಸ್ಮೃತಿ ಪಟಲದಲ್ಲಿ ನಿರ್ದಯಿ, ಕ್ರೂರ, ಹಿಂಸೆ ಅನ್ನೋ synonymous ಪದಗಳೊಂದಿಗೆ ಅವುಗಳ ಚಿತ್ರಣಗಳು ಹಾಗೆ ನಮ್ಮ ಕಣ್ಣ ಮುಂದೆ ಹಾದು ಹೋಗುತ್ತವೆ ಅಲ್ಲವೇ...ಈ ಕ್ರೌರ್ಯವನ್ನು  ಸಣ್ಣ ಪ್ರಮಾಣದಲ್ಲಿ ಮಾಡಿದರೂ ಅಥವಾ ದೊಡ್ಡ ಪ್ರಮಾಣದಲ್ಲಿ ಮಾಡಿದರೂ  ಅದು ಕ್ರೌರ್ಯವೇ.



ನಮ್ಮ ದೇಶಕ್ಕೆ ಎಷ್ಟೋ ವರ್ಷಗಳ ಇತಿಹಾಸವಿದೆ. ಇದನ್ನು  ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ನಂತರ ಹೀಗೆ ಎರಡು ವಿಧಗಳಾಗಿ ವಿಂಗಡಿಸಬಹುದು.  ಈ ಹಿಂದಿನಿಂದಲೂ ನಮ್ಮ ದೇಶದಲ್ಲಿ ಈ ಅಸಮಾನತೆ, ದೌರ್ಜನ್ಯ, ಶೋಷಣೆ  ಹಾಗೂ ತಾರತಮ್ಯ ನೀತಿಗಳು ನಮ್ಮ ಸಮಾಜದ ಒಂದು ಭಾಗವೇನೋ ಎಂಬ ಮಟ್ಟಿಗೆ ಅಂಟಿಕೊಂಡೇ ಬರುತ್ತಿವೆ. ನಾವು ಪ್ರಜಾಪ್ರಭತ್ವ ವ್ಯವಸ್ಥೆಯಲ್ಲೂ ಇಂತಹ ಅಸಮಾನತೆಯೊಂದಿಗೇ ಬದುಕುತ್ತಿರುವುದು ನಮ್ಮ ದೌರ್ಭಾಗ್ಯವೇ ಸರಿ.

ಈ ನಿಟ್ಟಿನಲ್ಲಿ ಕೆಲವರು ತಮಗೆ ಅನ್ಯಾಯವಾದಾಗ, ತುಳಿತ/ದೌರ್ಜನ್ಯಕ್ಕೊಳಪಟ್ಟಾಗ ನ್ಯಾಯದ ಮೊರೆ ಹೋಗುವುದು ಸಹಜ. ಈ ನ್ಯಾಯ ದೊರಕಿಸಿಕೊಳ್ಳುವ ವಿಷಯದಲ್ಲಿ  ನಾನಾ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ.ನ್ಯಾಯಾಲಯದಲ್ಲಿ legal ಆಗಿ ಹೋರಾಡಿ ನ್ಯಾಯ ಪಡೆಯುವುದು ಒಂದು ರೀತಿಯಾದರೆ, ತಮ್ಮಂತೆ ದೌರ್ಜನ್ಯಕ್ಕೊಳಗಾದವರ ಜೊತೆ ಸೇರಿ ತಮ್ಮದೇ ಆದ ಸಂಘ-ಸಂಸ್ಥೆ ಕಟ್ಟಿಕೊಂಡು ಕಾನೂನಿನ ಚೌಕಟ್ಟಿನಲ್ಲಿ ಹೋರಾಡುವುದು ಇನ್ನೊಂದು ರೀತಿ. ಇವಲ್ಲದೆ ಇನ್ನೊಂದು ವರ್ಗದ ಜನರಿದ್ದಾರೆ ಅವರು ತಮ್ಮ ಕೈಗೇ ಕಾನೂನನ್ನು  ತೆಗೆದುಕೊಂಡು "ದುಷ್ಟ ಶಿಕ್ಷಕ-ಶಿಷ್ಟ ರಕ್ಷಕ"  ಅನ್ನೋ ಮಂತ್ರದಲ್ಲಿ ನಂಬಿಕೆಯಿಟ್ಟವರಂತೆ ವರ್ತಿಸುತ್ತಿರುವವರು. ಇಂತಹ ಸಾಲಿಗೆ ಸೇರುವವರು ಈ ನಕ್ಸಲೇಟ್ಸ್(ಅವರ ಪ್ರಕಾರ).  ನಾನಿಲ್ಲಿ ಹೇಳೊಕೆ ಹೊರಟಿರೋದು ಈ ನಕ್ಸಲೇಟ್ಸ್, ಟೆರರಿಸ್ಟ್ ಅನ್ನೊದಕ್ಕಿಂತ ಅವರುಗಳು ಆಯ್ದುಕೊಂಡಿರುವ ಮಾರ್ಗಗಳು, ಅನುಸರಿಸುತ್ತಿರುವ ಹೋರಾಟದ ರೀತಿಗಳು ಅನ್ನೊದು ಮಾತ್ರ. ಈ ಹೋರಾಟದ ರೂಪವೇ "ಕ್ರೌರ್ಯ".  ಇದು ನಿಜಕ್ಕೂ ಖಂಡನೀಯ.  ನಾನು ಇಲ್ಲಿ ಹೇಳುತ್ತಿರುವ ವಿಷಯಗಳು ನನ್ನ ಅನಿಸಿಕೆಯುಳ್ಳ ಬರಹವೇ ಹೊರತು ಯಾವುದೇ ವಾದ-ವಿವಾದ ನಡೆಸುವ ಉದ್ದೇಶದೊಂದಿಗೆ ಬರೆದ ಲೇಖನವಲ್ಲ.


ಈ ನಕ್ಸಲೇಟ್ಸ್ ಗಳ ಉಗಮ ಯಾವುದೇ ಕಾರಣಕ್ಕಾದರೂ ಆಗಿರಬಹುದು. ಆದರೆ ಮುಖ್ಯವಾಗಿ ಕಂಡುಬರುವ ಸಾಮಾನ್ಯವಾದ ಒಂದು ಕಾರಣವೆಂದರೆ "ಅನ್ಯಾಯ".  ಈ ಅನ್ಯಾಯದ ವಿರುದ್ದ ಹೋರಾಡೋ ನಿಟ್ಟಿನಲ್ಲಿ ಅವರು ತಮ್ಮದೇ ಆದ ಮಾರ್ಗಗಳನ್ನು  ಅನುಸರಿಸುತ್ತಾ, ಸಮಾಜದಿಂದ/ನಾಡಿನಿಂದ, ಜನ ಸಂಪರ್ಕದಿಂದ ದೂರ ಉಳಿದು ಎಲ್ಲೋ ವಾಸ್ತವ್ಯ ಪಡೆದು ತಲೆಮರಿಸಿಕೊಂಡು ಕಾನೂನಿನ ದೃಷ್ಟಿಯಲ್ಲಿ ಅಪರಾಧಿಗಳಾಗಿ  ಇಷ್ಟೆಲ್ಲಾ ಕಷ್ಟ-ಕಾರ್ಪಣ್ಯಗಳನ್ನು ಅನುಭವಿಸುತ್ತಿರುವುದು ಯಾವುದಕ್ಕಾಗಿ? ತಮಗಾಗಿರೋ ಅನ್ಯಾಯ/ತಮ್ಮಂತೆ ಅನ್ಯಾಯಕ್ಕೊಳಗಾಗುವವರಿಗೆ ನ್ಯಾಯ ಸಿಗಬೇಕು ಎಂಬ ಮನೋಭಾವದಿಂದ ತಾನೇ?(ಅವರ ಪ್ರಕಾರ) ಆದರೆ........ ಅದು ಅವರಿಗೆ ಸಿಕ್ಕಿದೆಯೇ? ಈ ಶೋಷಣೆ ದೌರ್ಜನ್ಯ ಸಂಪೂರ್ಣವಾಗಿ ನಿಂತಿದೆಯೇ? ಅವರು ಅಂದುಕೊಂಡ ಉದ್ದೇಶಗಳೆಲ್ಲವೂ ಕೈಗೂಡಿದೆಯೇ??   ಇಂತಹ ಪ್ರಶ್ನೆಗಳಿಗೆ ಉತ್ತರ ಬಹುಷ:  ಅವರಿಗೆ ಗೊತ್ತಿರಬೇಕು.   ಆದರೆ ಗೊತ್ತಿರುವ ಸತ್ಯ ಎಂದರೆ ಅವರಾರೂ ಇನ್ನೂ ಕಷ್ಟದಿಂದ ಪಾರಾಗಿಲ್ಲ. Yes. They are "Not out of the woods yet".

ಜನರು ತಮ್ಮ ಶ್ರಮಕ್ಕೆ ತಕ್ಕ ಬೆಲೆ(ಕೆಲವೊಮ್ಮೆ ಅದಕ್ಕಿಂತಲೂ ಕಡಿಮೆ) ಕೇಳಿದಾಗ,  ಬಲವಂತವಾಗಿ ಸಜೀವವಾಗಿ ದಹನ ಮಾಡೋದಾಗಿರಬಹುದು/ಇನ್ಯಾವುದೋ ಬಲವಾದ ಕಾರಣಗಳು ಇವರುಗಳನ್ನು ಇಂಥ ಹೋರಾಟಕ್ಕೆ ಪ್ರೇರೆಪಿಸಿರಬಹುದು ( ಈ ವಿಷಯದಲ್ಲಿ ಎಂಥ ಮನ್ನುಷ್ಯನಿಗೂ ಸಿಡಿದೇಳಬೇಕು ಅನ್ನೋ ಮನೋಭಾವ ಉಂಟಾಗುವುದು ಸಹಜ. ಇಂತಹ ಘಟನೆಗಳನ್ನು ಖಂಡಿಸುವುದು ಮನೋಧರ್ಮ). ಆದರೆ...ನಮ್ಮ ಕಡೆಯವರನ್ನು ಸುಟ್ಟರು/ಅಥವಾ ಕೊಲೆ ಮಾಡಿದ್ರೂ ಅಂತ ನಾವು ಅದೇ ಮಾರ್ಗ ಅನುಸರಿಸುವುದು ಎಷ್ಟು ಸರಿ? ಕ್ರೌರ್ಯಕ್ಕೆ ಕ್ರೌರ್ಯವೇ ಮದ್ದೇ?  " Pay one back in his own coin" ಅನ್ನೋ ರೀತಿ ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳಲು ಮಾರಣಹೋಮ ಮಾಡುವುದು ಎಲ್ಲದಕ್ಕೂ ಪರಿಹಾರವೇ?  ಇಂತಹ ಹೋರಾಟದಲ್ಲಿ ತಮ್ಮ ಪ್ರಾಣವನ್ನೂ ಪಣಕ್ಕಿಟ್ಟು ಎದುರಾಳಿಗಳ ರುಂಡವನ್ನು ಚೆಂಡಾಡುವುದು ಎಂತಹ ಹೇಯ ಕೃತ್ಯವೆಂದು ಯಾರಿಗಾದರೂ ಅನ್ನಿಸದೇ ಇರದು... 

ಇಂತಹ ಮನೋಭಾವವನ್ನು Nip in the bud ಅನ್ನೋ ರೀತಿ ಆರಂಭದಲ್ಲೇ ಚಿವುಟು ಹಾಕೋ ಪ್ರಯತ್ನ ಮಾಡಬೇಕಾಗಿತ್ತು. ಆದರೆ, Better late than never ಅನ್ನೋ ರೀತಿ ಇನ್ನು ಮುಂದೆಯಾದರು ಚಿವುಟಿ ಹಾಕುವ ಪ್ರಯತ್ನ ಮಾಡಬೇಕಾಗುತ್ತದೆ. ಇಲ್ಲದಿದ್ದಲ್ಲಿ, ಆತಂಕದ ದಿನಗಳನ್ನು ಎದುರುನೋಡುತ್ತಾ ಬದುಕುವ ಸ್ಥಿತಿ ನಿರ್ಮಾಣವಾಗಬಹುದು.  ಶಾಂತಿ, ಅಹಿಂಸೆಗಾಗಿ ಹೋರಾಡಿ ಮಡಿದ ಮಹಾತ್ಮರು ಜನಿಸಿದ ನಾಡಲ್ಲಿ ಇಂತಹ ಹಿಂಸಾತ್ಮಕ ಕೃತ್ಯಗಳು ಎಡೆಬಿಡದೆ ಎಲ್ಲೆಡೆಯೂ ನಡೆಯುತ್ತಿರುವುದು ನಿಜಕ್ಕೂ ಶೋಚನೀಯವಲ್ಲವೇ.....ಇವುಗಳ ಬಗ್ಗೆ ನಾವೆಲ್ಲರೂ ನಮ್ಮನ್ನೇ ನಾವು ಪ್ರಶ್ನೆ ಮಾಡಿಕೊಂಡು ಯೋಚಿಸಬೇಕಾದ ವಿಷಯ... ಉತ್ತರ ನಿಮಗೆ ಬಿಟ್ಟಿದು. 

ಇನ್ನೊಂದು ವಿಷಯ ನಾವು ಯಾವುದೇ ಕೆಲಸ ಮಾಡಿದರೂ ನಮಗೆ ಆತ್ಮ ತೃಪ್ತಿ, ಸಮಾಧಾನ ಸಿಗಬೇಕು. ಕಡೆಪಕ್ಷ ನಮ್ಮ ಕಷ್ಟಕ್ಕೆ ತಕ್ಕ ಬೆಲೆಯಾದರೂ ಸಿಗಬೇಕು.

ಭಗವತ್ಗೀತೆಯ ಎರಡನೇ ಅಧ್ಯಾಯದಲ್ಲಿ ಒಂದು ಶ್ಲೋಕ ಈ ರೀತಿ ಹೇಳುತ್ತದೆ.

ಕ್ರೋಧಾದ್ಭವತಿ ಸಂಮೋಹ, ಸಂಮೋಹಾತ್ ಸ್ಮೃ ತಿ ವಿಭ್ರಮ:!
ಸ್ಮೃತಿ ಭ್ರಂಶಾದ್ಭುದ್ದಿನಾಶೋ, ಬುದ್ದಿನಾಶಾದ್ ವಿನಶ್ಯತಿ!!

ಇದರರ್ಥ ಹೀಗಿದೆ : "ಸಿಟ್ಟಿನ ಮರಿ ಅವಿವೇಕ. ಅವಿವೇಕದಿಂದ ಧರ್ಮ- ಅಧರ್ಮಗಳ ಮರೆವು. ಇಂಥ ಮರೆವಿನಿಂದ ಬುದ್ದಿ ಕೆಡುತ್ತದೆ. ಬುದ್ದಿ ಕೆಡುವುದೇ ಎಲ್ಲ ಅನರ್ಥದ  ಮೂಲ. "


ಸುಧಾ

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    11 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    11 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದ...
    13 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    15 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    15 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    15 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    16 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    16 years ago