Showing posts with label ಮನನ : NOTICES. Show all posts
Showing posts with label ಮನನ : NOTICES. Show all posts

03 June 2011

ಮನನ ಅಧ್ಯಯನ ಸಭೆ


ಮಾನ್ಯ ಸದಸ್ಯರೆ,

ಈಗಾಗಲೇ ತಿಳಿಸಿರುವ ಕ್ರಿಯಾ ಯೋಜನೆಗಳ ಬಗ್ಗೆ ಚರ್ಚಿಸಲು ದಿನಾಂಕ: 04.06.2011 ರಂದು ಶನಿವಾರ ಮಧ್ಯಾಹ್ನ 1:30ಕ್ಕೆ ಕೆ.ಜಿ.ಎಸ್.ಕ್ಲಬ್ ಗ್ರಂಥಾಲಯದಲ್ಲಿ ಮನನ ಅಧ್ಯಯನ ಸಭೆ ಕರೆಯಲಾಗಿದೆ.
ತಪ್ಪದೆ ಟಿಪ್ಪಣಿಯೊಂದಿಗೆ ಬನ್ನಿ..

-ಮನನ ಪರವಾಗಿ

31 May 2011

ಮನನ : NOTICE

ಮಾನ್ಯ ಸದಸ್ಯರೆ,
'ಮನನ' ಅಧ್ಯಯನ ತಂಡವು ಇನ್ನಷ್ಟು ವಿಸ್ತಾರವಾಗಿ ವಿವಿಧ ವಿಷಯಗಳ ಅಧ್ಯಯನ ನಡೆಸಲು ಹಾಗೂ ಹೆಚ್ಚು ಕ್ರಿಯಾವಂತಿಕೆಯಿಂದ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅನುವಾಗುವಂತೆ ಮನನ ತಂಡವನ್ನು ನವೀಕರಣಗೊಳಿಸಿ, ಆಸಕ್ತ ಹೊಸ ಸದಸ್ಯರನ್ನು ಬರಮಾಡಿಕೊಂಡು ಸಮಿತಿಗಳನ್ನು ರಚಿಸಿ ನಮ್ಮ ಬುದ್ಧಿಮತ್ತೆಯನ್ನು ನೈಸರ್ಗಿಕವಾಗಿ ರೂಪಿಸಿಕೊಳ್ಳುವ ಹಂಬಲ / ಉದ್ದೇಶವನ್ನ ಹೊಂದಿದೆ.
ಈ ನಿಟ್ಟಿನಲ್ಲಿ ಇದರೊಂದಿಗೆ ಲಗತ್ತಿಸಿರುವ ನಮೂನೆಯನ್ನು ಭರ್ತಿ ಮಾಡಿ ಇನ್ನು ಮೂರು ದಿನಗಳ ಒಳಗಾಗಿ ಇ-ತಂತಿಯ ಮೂಲಕ ರವಾನಿಸುವಂತೆ ಕೋರಿದೆ.
ಮನನ ಅಧ್ಯಯನ ಸಭೆಯನ್ನು ಇನ್ನುಮುಂದೆ ತಿಂಗಳ 1ನೇ ಮತ್ತು 3ನೇ ಶನಿವಾರಗಳಂದು ನಡೆಸಲು ಉದ್ದೇಶಿಸಿದ್ದು, ಅದರಲ್ಲಿ ಎಲ್ಲರೂ ಭಾಗವಹಿಸಿ ಅನಿಸಿಕೆ / ಅಭಿಪ್ರಾಯಗಳನ್ನು / ವಿಷಯ ಕುರಿತ ಚರ್ಚೆಗಳನ್ನು ನಡೆಸುವಂತೆ ಮತ್ತೊಮ್ಮೆ ಮನವಿ ಮಾಡಿದೆ.
ಈ ವಾರಾಂತ್ಯದಲ್ಲಿ ಎಲ್ಲಾ ಆಸಕ್ತ ಸದಸ್ಯರುಗಳನ್ನೊಳಗೊಂಡ ಸಮಿತಿಗಳನ್ನು ರಚಿಸಲು ಉದ್ದೇಶಿಸಿದ್ದು, ಅದರಂತೆ ನಮೂನೆಯಲ್ಲಿ ತಮ್ಮ ಆಸಕ್ತ ವಲಯವನ್ನು ತಿಳಿಸುವಂತೆ ಸಹ ಕೋರಿದೆ.
ಉದಾಹರಣೆಗೆ:
1. ಮನನ ತಂಡದಿಂದ ಸಣ್ಣ ವಿಷಯಗಳ ಅಧ್ಯಯನ (small things study) ಮಾಡಲು ಉದ್ದೇಶಿಸಿದ್ದು, ಅದರಲ್ಲಿ ಮೂರು ತಿಂಗಳ ಅವಧಿಯಲ್ಲಿ ಪ್ರಸಕ್ತ ವಿದ್ಯಮಾನಗಳು, ವಿಜ್ಞಾನ, ಕಲೆ, ಕ್ರೀಡೆ ಹೀಗೆ ಒಂದು ವಿಷಯದ ಕುರಿತು
ಅಧ್ಯಯನ ನಡೆಸಿ ಒಂದು ಟಿಪ್ಪಣಿಯನ್ನು ಸಿದ್ಧಪಡಿಸುವುದು.
2. ಕ್ರಿಯಾವಂತಿಕೆಯಿಂದ ನಮ್ಮ ಕಾರ್ಯವಲಯದಲ್ಲಿನ ಇಲಾಖೆಗಳ ಕುರಿತು, ಸೇವಾ ವಿಷಯದ ಕುರಿತು, ನೀರಿನ, ವಿದ್ಯುತ್, ಕಾಗದ ಪತ್ರಗಳ ಸದ್ಬಳಕೆ.... ಹೀಗೆ ಹಲವು ವಿಷಯಗಳ ಬಗ್ಗೆ ಅಧ್ಯಯನಗಳನ್ನು ತಂಡಗಳಾಗಿ ಅಧ್ಯಯನ
ನಡೆಸುವುದು.
3. ಕ್ರಿಯಾಸಮಿತಿ, ಸಲಹಾಸಮಿತಿ, ಅಧ್ಯಯನ ಸಮಿತಿಗಳನ್ನು ರಚಿಸಿ ಇನ್ನಷ್ಟು ವಿಸ್ತಾರವಾಗಿ ನಮ್ಮ ಆಸಕ್ತ ಕ್ಷೇತ್ರಗಳನ್ನು ತಿಳಿಯಲು ಅಧ್ಯಯನ ಮಾಡಲು ಮುಂದಾಗುವುದು.
ಈ ಎಲ್ಲಾ ಅಂಶಗಳನ್ವಯ ತಾವುಗಳು ಇದರೊಂದಿಗೆ ಲಗತ್ತಿಸಿರುವ ನಮೂನೆಯನ್ನು ತಪ್ಪದೆ ಭರ್ತಿ ಮಾಡಿ ಸಲ್ಲಿಸುವಂತೆ ಕೋರಿದೆ ಹಾಗೂ ನಿಮ್ಮ ಗೆಳೆಯರು ಆಸಕ್ತರಿದ್ದಲ್ಲಿ ಅವರಿಗೂ ಸಹ ನಮೂನೆ ನೀಡಿ ಭರ್ತಿ ಮಾಡಿ ಸಲ್ಲಿಸುವಂತೆ ಕೋರಿದೆ.





-: ಮನನ ಸದಸ್ಯತ್ವ ನಮೂನೆ :-

ಪೂರ್ಣ ಹೆಸರು :



ಪದನಾಮ :



ಕೆಲಸ ಮಾಡುತ್ತಿರುವ ಇಲಾಖೆ/ ಶಾಖೆ :




ದೂರವಾಣಿ ಸಂಖ್ಯೆ
ಸ್ಥಿರ :
ಸಂಚಾರಿ:




ಇ-ಮೇಯ್ಲ್ ವಿಳಾಸ :
 

ಆಸಕ್ತ ಕ್ಷೇತ್ರಗಳು :






ಮನನ ತಂಡದಲ್ಲಿ ತಾವು ಭಾಗವಹಿಸಲಿಚ್ಚಿಸುವ ಸಮಿತಿ :

(ಉದಾ: ಸಲಹಾ ಸಮಿತಿ, ಕ್ರಿಯಾ ಸಮಿತಿ, ಅಧ್ಯಯನ ಸಮಿತಿ ಅಥವಾ ಇನ್ನಾವುದೇ ರೀತಿಯನ್ನು ನಮೂದಿಸಬಹುದು)

 

29 April 2011

ಮನನ ಅಧ್ಯಯನ ಸಭೆ

ಮಾನ್ಯ ಸದಸ್ಯರೆ,

ದಿನಾಂಕ: 30/04/2011 ರಂದು ನಡೆಯಬೇಕಿದ್ದ ಮನನ ಅಧ್ಯಯನ ತಂಡದ ಸಭೆಯನ್ನು 'ಸಚಿವಾಲಯ ಕ್ಲಬ್ ನಲ್ಲಿನ ನಾಟಕ' ಹಾಗೂ 'ನಿವೃತ್ತ ಅಧಿಕಾರಿಗಳ ಬೀಳ್ಕೊಡುಗೆ ಸಮಾರಂಭದ' ಕಾರಣ ಮುಂದಿನ ವಾರಕ್ಕೆ ಅಂದರೆ ದಿನಾಂಕ: 07.05.2011ಕ್ಕೆ ಮುಂದೂಡಲ್ಪಟ್ಟಿದೆ. ಸದಸ್ಯರು ಸಹಕರಿಸಲು ಕೋರಿದೆ.

-
ಮನನ ಅಧ್ಯಯನ ತಂಡದ ಪರವಾಗಿ

29 March 2011

ನೆನಪೋಲೆ

ಪ್ರಿಯ ಮನನದ ಸದಸ್ಯರೇ...

ಹಿಂದಿನ ಮನನದ ಸಭೆಯಲ್ಲಿ 'ಕಂಪನ' ವಿಚಾರವಾಗಿ ಒಂದು ಉತ್ತಮ ಚರ್ಚೆ ನಡೆಸಲಾಗಿತ್ತು.  ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ  ಚರ್ಚೆಯ  ಮುಂದುವರೆದ ಭಾಗವಾಗಿ ಎಲ್ಲಾ ಸದಸ್ಯರೂ ತಮ್ಮತಮ್ಮ ಅಭಿಪ್ರಾಯಗಳನ್ನು ಟಿಪ್ಪಣಿ ರೂಪದಲ್ಲಿ  ರವಾನಿಸುವಂತೆ ಕೋರಲಾಗಿತ್ತು. ಆದರೆ  ಯಾರಿಗೆ, ಹೇಗೆ ಕಳುಹಿಸಬೇಕು ಎಂಬ ಗೊಂದಲ ಸದಸ್ಯರಲ್ಲಿ ಉಂಟಾಯಿತೋ  ಏನೋ ಇದುವರೆಗೂ ಯಾವುದೇ ಟಿಪ್ಪಣಿಗಳೂ ನಮ್ಮನ್ನು ತಲುಪಿಲ್ಲ.  ಆದುದರಿಂದ 'ಮನನ' ಅಧ್ಯಯನ ಸಭೆಯ ಅನುಕೂಲಕ್ಕಾಗಿಯೇ manana.studycircle@gmail.com ಎಂಬ ಇ-ಮೇಲ್ ವಿಳಾಸವನ್ನು ಹೊಸದಾಗಿ ಸೃಜಿಸಿ ನೀಡುತ್ತಿದ್ದೇವೆ. ತಪ್ಪದೇ ನಿಮ್ಮ ಅಭಿಪ್ರಾಯಗಳನ್ನು ಕಳುಹಿಸಿಕೊಡಿ. 'ಮನನ'ದೊಂದಿಗೆ ಸದಾ ಕ್ರಿಯಾಶೀಲರಾಗಿರಿ.


'ಮನನ'ದ ಪರವಾಗಿ
ಪರಶು..,

15 March 2011

'ಮನನ'ದಲ್ಲಿ ಈ ವಾರದ ಚರ್ಚೆಯ ವಿಷಯ : ಕಂಪನ

ಸದಸ್ಯರೆ, 
ಈ ವಾರದ ವಿಷಯ ತಮಗೆ ತಿಳಿದಿದೆ: 

ಕಂಪಿಸುತ್ತದೆಂದಾದರೊಮ್ಮೆ ಭೂಮಿ
ಇದು ಪ್ರಕೃತಿ ವಿಕೋಪ 
ದಿನಾಲು ಕಂಪಿಸುತ್ತಿವೆ ಮನಸ್ಸುಗಳು 
ಇದು ನಮ್ಮೊಳಗಿನದೇ ಕುರೂಪ!

ಖ್ಯಾತ ಕವಿ ಮಂಜುರವರ ಈ ಪದ್ಯವನ್ನು ನೆನಪು ಮಾಡಿಕೊಳ್ಳುತ್ತಾ, ವೈಜ್ಞಾನಿಕವಾಗಿ, ವೈಚಾರಿಕವಾಗಿ ಮತ್ತು ವಿಶೇಷವಾಗಿ ಜೀವದ್ರವ್ಯ ಪ್ರಜ್ಞೆಯಿಂದ ಈ ವಿಷಯವನ್ನು ಚರ್ಚಿಸುವುದು ಅವಶ್ಯಕವಾಗಿದೆ. ಎಲ್ಲರೂ ಟಿಪ್ಪಣಿಗಳೊಂದಿಗೆ ಅಭಿಪ್ರಾಯಗಳನ್ನು ತಿಳಿಸ ಬನ್ನಿ, ಒಂದು ಒಮ್ಮತದ ಸತ್ಯ ನಿರ್ಧಾರವನ್ನು ತೆಗೆದುಕೊಳ್ಳಲು ಸಹಕರಿಸಿ. 

ಮನನ ಪರವಾಗಿ

ಮಂಜು..,

14 March 2011

'ಮನನ'ದಲ್ಲಿ ಈ ವಾರದ ಚರ್ಚೆಯ ವಿಷಯ

ಸ್ನೇಹಿತರೇ..,

ಮೊನ್ನೆ  ಶುಕ್ರವಾರ ಜಪಾನ್  ಎಂಬ ಸಿರಿವಂತ ದೇಶ  ಭೀಕರ ಭೂಕಂಪ ಮತ್ತು ಸುನಾಮಿಯ ರುದ್ರನರ್ತನಕ್ಕೆ  ಬಲಿಯಾಗಿದೆ. 
ಸುಮಾರು 33 ಅಡಿಗಳಷ್ಟು ಎತ್ತರದ ದೈತ್ಯ ಸುನಾಮಿ ಅಲೆಗಳು ಜಪಾನಿನ ಪ್ರಮುಖ ಪಟ್ಟಣಗಳನ್ನು ಅಹುತಿ ತೆಗೆದುಕೊಂಡಿವೆ.
ಸಾವಿರಾರು ಮಂದಿ ಪ್ರಾಣ ತೆತ್ತಿದ್ದಾರೆ, ಸಾವಿನ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.  
ಇಂತಹ ಒಂದು ಘಟನೆ ಮಾರ್ಚ್-2011 ರಲ್ಲಿ  ನಡೆಯಲಿದೆ ಎಂದು ಸಾವಿರಾರು  ವರ್ಷಗಳ ಹಿಂದೆಯೇ ನ್ಯಾಸ್ಟ್ರೋಡಾಮಸ್ ಎಂಬ ಭವಿಷ್ಯತ್ಕಾರ ಬರೆದಿಟ್ಟಿದ್ದ ಎಂಬ ಮಾತಿಗೊಂದು ಪುಷ್ಟಿ ಬಂದಿದೆ.
ಅಲ್ಲದೆ ಇದೇ ಮಾರ್ಚ್ ತಿಂಗಳ 19ನೇ ತಾರೀಖಿನ ಶನಿವಾರದಂದು ಮತ್ತೆ ಇಂತಹ ಘಟನೆ ವಿಶ್ವದಲ್ಲಿ ಸಂಭವಿಸಲಿದೆ ಎಂದೂ ಹೇಳಲಾಗುತ್ತಿದೆ !
ಈ ಎಲ್ಲಾ ಘಟನೆಗಳೂ  2012ರಲ್ಲಿ ಸಂಭವಿಸಲಿದೆ ಎಂದು ನಂಬಿರುವ 'ವಿಶ್ವ ಪ್ರಳಯ'ದ ಆರಂಭ ಎಂದೂ ಸಹ ಬಣ್ಣಿಸಲಾಗುತ್ತಿದೆ.

ಪ್ರಿಯ ಮನನದ ಸದಸ್ಯರೇ... ನಿಮ್ಮ  ಅಭಿಪ್ರಾಯವೇನು.?

>  ಜಪಾನಿನ ಭೂ ಕಂಪವು ವಿಶ್ವ ಪ್ರಳಯಕ್ಕೆ  ನಾಂದಿಯೇ ?
> ಇಂತಹ ಘಟನೆಗಳ ಹಿಂದೆ ಯಾವುದೋ ದೈವದ, ದೆವ್ವದ ಕೈವಾಡವಿದೆವಿರಬಹುದೇ !?
> ಇಂತಹ ಪ್ರಕೃತಿ ವಿಕೋಪಗಳ ಸುತ್ತಮುತ್ತಲಿನ ಸತ್ಯ-ಮಿಥ್ಯ ನಂಬಿಕೆಗಳ ಕುರಿತು ಮನನದ ಸಭೆಯಲ್ಲಿ
ಚರ್ಚೆ ಮಾಡೊಣ ಬನ್ನಿ...

  ಇದೇ ಶನಿವಾರ 19ನೇ ತಾರೀಖು ಮಧ್ಯಾಹ್ನ 1.45ಕ್ಕೆ ಸಚಿವಾಲಯದ ಕ್ಲಬ್ ನಲ್ಲಿ. 


ತಪ್ಪದೇ ಭಾಗವಹಿಸಿ... ನಿಮ್ಮ ನಿಮ್ಮ ಅಭಿಪ್ರಯಗಳನ್ನು ಮಂಡಿಸಲು ಅಣಿಯಾಗಿ.
                 



            ಪರಶು..,

'ಮನನ'ದ ಪರವಾಗಿ

11 November 2010

ಮನನ ತಂಡದ ಮಾನ್ಯ ಸದಸ್ಯರ ಗಮನಕ್ಕೆ

ಮನನ ತಂಡದ ಮಾನ್ಯ ಸದಸ್ಯರ ಗಮನಕ್ಕೆ

ದಿನಾಂಕ: 11.11.2010ರಂದು ಕರೆಯಲಾಗಿದ್ದ 'ಮನನ ತಂಡದ ಸಭೆ'ಯನ್ನು ಸಚಿವಾಲಯ ಸಹಕಾರ ಸಂಘದ ಕಾರ್ಯಕ್ರಮದ ಪ್ರಯುಕ್ತ ಮುಂದೂಡಲಾಗಿದ್ದು ಮುಂದಿನ ದಿನಾಂಕವನ್ನು ನಿಗದಿಪಡಿಸಿ ತಮಗೆ ತಿಳಿಸಲಾಗುವುದು.

ಈ ಹಂತದಲ್ಲಿ ನಾವು ಈಗಾಗಲೇ ಚರ್ಚಿಸಿ ತಮ್ಮ ಗಮನಕ್ಕೆ ತಂದಿರುವ 'ಮಾಸಿಕ ಪತ್ರಿಕೆ'ಯ ಬಗ್ಗೆ ಸಲಹೆ ಹಾಗೂ ಲೇಖನಗಳನ್ನು ದಿನಾಂಕ: 18.11.2010ರ ಒಳಗೆ ರೇವಪ್ಪ, ಸಿಆಸುಇಲಾಖೆ (ಆಡಳಿತ-ಡಿ), ಮಂಜುನಾಥ.ಎಸ್. ಇವರಿಗೆ ಇ-ತಂತಿಯ ಮೂಲಕ ಅಥವಾ ಖುದ್ದು ತಲುಪಿಸುವಂತೆ ಕೋರಿದೆ.

ವಂದನೆಗಳೊಂದಿಗೆ

-ಮನನ ತಂಡದ ಪರವಾಗಿ

19 August 2010

ನಾಳೆ ಶನಿವಾರ ಮನನ ತಂಡದ ಸಭೆ

ನಾಳೆ ಶನಿವಾರ ಮನನ ತಂಡದ ಸಭೆ
 
ವಿಷಯ : ಕಾವ್ಯ ವಿಶೇಷ
 
* ಕಿ.ರಂ. ಮೇಷ್ಟ್ರಿಗೆ ಶ್ರದ್ಧಾಂಜಲಿ
* ಕಾವ್ಯ ವ್ಯಾಖ್ಯಾನ
* ಪ್ರತಿ ತಂಡದಿಂದ ಒಂದು ಕಾವ್ಯ ವಾಚನ / ಕವಿಯ ಪರಿಚಯ
* ವಿಶ್ಲೇಷಣೆ
* ಗೀತ ಗಾಯನ
 
ಪ್ರತಿಯೊಬ್ಬರೂ ತಮ್ಮ ತಂಡದ ಸದಸ್ಯರೊಂದಿಗೆ ತಪ್ಪದೆ ಹಾಜರಾಗುವಂತೆ ಕೋರಿದೆ.
ಬನ್ನಿ ಕಾವ್ಯಕ್ಕೆ ದನಿಯಾಗೋಣ
 
-ಮನನ ತಂಡದ ಪರವಾಗಿ

02 August 2010

ಮುಂದಿನ ಮನನ

ಸದಸ್ಯರೆ,
ಕಳೆದ ಮೂರು ವಾರಗಳಿಂದ ರಜೆ ಸೌಲಭ್ಯ ಮತ್ತು ಗೋ ಹತ್ಯೆ ನಿಷೇಧದ ಕಾಯ್ದೆಯ ಬಗೆಗಿನ ಚರ್ಚೆಯಲ್ಲಿ ತಾವೆಲ್ಲರೂ ಭಾಗವಹಿಸಿ ತಮ್ಮ ನಿಲುವುಗಳನ್ನು ಸ್ಪಷ್ಟಪಡಿಸಿದ್ದಕ್ಕೆ ಮತ್ತು ಮಾಹಿತಿಯನ್ನು ನೀಡಿದ್ದಕ್ಕೆ ಮನನ ತಂಡ ಅಭಿನಂದನೆಗಳನ್ನು ಸಲ್ಲಿಸುತ್ತದೆ. ಮುಖ್ಯವಾಗಿ 'ರಜೆ ಸೌಲಭ್ಯ' ಮಂಡಿಸಿದ ಸ್ಪಂದನ ತಂಡ ಮತ್ತು 'ಗೋಹತ್ಯೆ ನಿಷೇಧ ಕಾಯ್ದೆ'ಯನ್ನು ಮಂಡಿಸಿದ 'ಬಿ' ತಂಡಕ್ಕೆ ಮನನ ಆಭಾರಿಯಾಗಿದೆ. ಮುಂದುವರೆದು..
 
ದಿನಾಂಕ: 7.8.2010ರ ಮನನ ಅಧ್ಯಯನ ಸಭೆಯ ವಿಷಯ: 'ಕಾವ್ಯ ವಿಶೇಷ'
 
ಅಂದರೆ ಪ್ರತಿಯೊಂದು ತಂಡವು ಒಂದೊಂದು ಕವನವನ್ನು ವಾಚಿಸಿ ಅದರ ವಿಶ್ಲೇಷಣೆ ಮಾಡುವುದು. ಹಾಗಾಗಿ ಪ್ರತಿ ತಂಡವು ತಮಗೆ ಇಷ್ಟವಾದ ಕನ್ನಡದ ಕವಿಯೋರ್ವರ ಕವನವನ್ನು ಅಥವಾ ಸ್ವರಚಿತ ಕವನವನ್ನು ವಾಚಿಸುವುದು ಮತ್ತು ಅದನ್ನು ವಿಶ್ಲೇಷಿಸುವುದು.
 
ತಪ್ಪದೆ ತಮ್ಮ ತಂಡಗಳಿಗೆ ಹೆಸರನ್ನು ಸೂಚಿಸುವುದರೊಂದಿಗೆ ಕಾವ್ಯ ವಾಚನಕ್ಕೆ ಸಿದ್ಧರಾಗಿ ಪೂರ್ಣ ಹಾಜರಾತಿ ನೀಡುವಂತೆ ಮನನ ತಂಡ ಕೋರಿದೆ.
 
-ಮನನ ಪರವಾಗಿ

16 April 2010

I Apprciate...

ಕಳೆದ ಶನಿವಾರದಂದು 

" ಆಯ್ತು ಬಾಸ್ ! ಬರೆದ್ರಾಯ್ತು. ಎಲ್ರೂ ಇಷ್ಟು ಕೆಲಸ ಮಾಡೋಣ. ಬ್ಲಾಗಲ್ಲಿ ಬರೆಯೋಣ. ಕ್ಲಬ್ ಅಲ್ಲಿ ಮಾತಾಡೋಣ. Allround ಚಟುಚಟಿಕೆ ಆಗುತ್ತೆ ಆವಾಗ. ಒಳ್ಳೆ ಐಡಿಯಾ "

ಅಂತ ಒಮ್ಮತ ಸೂಚಿಸಿದಾಗ ಇದ್ದ ಉತ್ಸಾಹ ಮರುದಿನ ಬಂದ ರವಿವಾರದಂದೇ ಬತ್ತಿ ಹೋಗಿ 12 ದಿನವಾದರೂ ಯಾವ ಆಶಾದಾಯಕ ಮುನ್ಸೂಚನೆ ಇಲ್ಲದಿರುವುದಕ್ಕೆ ಕಾರಣ ಕೇಳಬಹುದಾ ?

ಈ ಶನಿವಾರ ಮತ್ತೆ ಎಲ್ಲರೂ ಸೇರೋ ಪ್ರೋಗ್ರಾಮ್ ಇದೆ ಅನ್ನೋದನ್ನ ಜ್ಞಾಪಕದಲ್ಲಿಟ್ಟುಕೊಂಡು ಅಲ್ಲಿ ಬರಲಿರುವ ವಿಷಯವನ್ನಾದರೂ ಓದಿಕೊಂಡು ಬರಲು ವಿನಂತಿಸಿದೆ.

ಇಂತಿ,
ಮನನ

31 March 2010

ನಾಡಿದ್ದು ಶನಿವಾರ...

ನಾಡಿದ್ದು ಶನಿವಾರ STUDY CIRCLE ಮಿತ್ರರಿಗೊಂದು ತುರ್ತು ಸಭೆ ಕರೆಯಲಾಗಿದೆ...

ಎಲ್ಲರೂ ಸರಿಯಾಗಿ 1.45 PM ಗೆ ಸರಿಯಾಗಿ ಯಥಾ ಸ್ಥಳದಲ್ಲಿ ಹಾಜರಿರಬೇಕು...

1.45 ಅಂತ ಹೇಳಿರೋದು ಸೀರಿಯಸ್ಸಾಗಿ... ಜೋಕಲ್ಲಾ ..!!

ಬೇಗ ಊಟ ಮುಗಿಸಿ ಬನ್ನಿ...

1.45ಕ್ಕೆ ಮಾತು ಶುರುವಾಗಬೇಕು ಅನ್ನೋದು ನನ್ನಾಸೆ...ನಿಮ್ಮಾಸೆಯೂ ಅದೇ ಅನ್ಕೋತೀನಿ



ಇಂತಿ,
ಮನನ ತಂಡ

17 March 2010

study Circle Reminder

ನಾಡಿದ್ದು ಶನಿವಾರ study Circle ಸ್ನೇಹಿತರು Club ನ Library ಯಲ್ಲಿ ಒಟ್ಟುಗೂಡೋದನ್ನ ಮರೀಬೇಡಿ .....

1 ದಿವಸ ಅಡ್ಡ ಅಷ್ಟೇ ...

ವಿಷಯ ನೆನಪಿದೆ ತಾನೆ ?

ಹಾಗಾದ್ರೆ ಶನಿವಾರ ಸಿಗೋಣ ...

ರೇವಪ್ಪ

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    11 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    11 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದ...
    13 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    15 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    15 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    15 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    16 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    16 years ago