ಮಂಜುನಾಥ್ ನೀವು ಚರ್ಚೆಯ ಪೀಠಿಕೆಯಲ್ಲಿ ಪ್ರಸ್ತಾಪಿಸಿರುವ ವಿಷಯಗಳೆಲ್ಲವೂ ನಿಜಕ್ಕೂ ಗಂಭೀರವಾಗಿ ಚಿಂತನೆ ಮಾಡುವಂತಹವು.
ನಕ್ಸಲೈಟ್ಸ್ ಗಳಿಂದ ಚತ್ತೀಸ್ ಘಡದ ರಾಯಪುರದಲ್ಲಿ ನಡೆದ CRPF ನರಮೇಧವಂತೂ ನಿಜಕ್ಕೂ ಅಮಾನವೀಯ. ನಕ್ಸಲೇಟ್ಸ್ ಗಳ ಉದ್ದೇಶ ಏನೇ ಆಗಿರಲಿ, ಆದರೆ ಅವರು ಅನುಸರಿಸುತ್ತಿರುವ ಮಾರ್ಗವಂತೂ ನಿಜಕ್ಕೂ ಖಂಡನೀಯ.
ಈ ತಾರತಮ್ಯ ನೀತಿಯನ್ನು ಅಳಿಸಿ, ಎಲ್ಲರಿಗೂ ಸಮಬಾಳು - ಎಲ್ಲರಿಗೂ ಸಮಪಾಲು ಸಿಗುವಂತಾಗಬೇಕಾದರೆ ನಮ್ಮ ನಾಗರೀಕ ಪ್ರಜ್ಞೆ ಎಚ್ಚೆತ್ತುಕೊಳ್ಳಬೇಕು. ನಮ್ಮಲ್ಲಿನ ವಿವೇಕ ,ವಿವೇಚನೆ ಜಾಗೃತಗೊಳ್ಳಬೇಕು. ಈ ಸಮಾಜದ ವ್ಯವಸ್ಥೆಯನ್ನು ಒಟ್ಟಾರೆ ಬದಲಾಯಿಸಲು ಹೋಗುವ ಮುಂಚೆ ಪ್ರತಿಯೊಬ್ಬರು ತಮ್ಮನ್ನು ತಾವು ಈ ನಿಟ್ಟಿನಲ್ಲಿ ಬದಲಾಯಿಸಿಕೊಳ್ಳಬೇಕು.
ಮಹಾತ್ಮ ಗಾಂಧೀಜಿಯವರು ಹೇಳಿರುವಂತೆ "ನೀವು ಬಯಸುವ ಬದಲಾವಣೆ ಸಮಾಜದಲ್ಲಿ ಆಗಬೇಕಾದರೆ ಮೊದಲು ಆ ಬದಲಾವಣೆಯನ್ನು ನಿಮ್ಮಲ್ಲಿ ತನ್ನಿ" ಎಂಬ ಮಾತು ನಿಜಕ್ಕೂ ಅರ್ಥಗರ್ಭಿತ. ಈ ರೀತಿಯ ಪ್ರಾಮಾಣಿಕ ಪ್ರಯತ್ನಗಳು ಅಂತಿಮ ಘಟ್ಟ(ನಮ್ಮ ಗುರಿ) ತಲುಪುವವರೆಗೂ ನಿರಂತರವಾಗಿ ನಡೆಯುತ್ತಲೇ ಇರಬೇಕು. ಬರಿಯ ಪ್ರಯತ್ನಗಳಷ್ಟೇ ಸಾಲದು. ನಾವು ಮುಟ್ಟಬೇಕಾದ ಗುರಿಯ ಬಗ್ಗೆ ನಮ್ಮ ನಿಲುವು ಅಚಲವಾಗಿರಬೇಕು.
NOTE : ಮತ್ತೊಂದು ವಿಷಯ. ಮಂಜುನಾಥ್ ನಿಮ್ಮ ಲೇಖನದ ಮುನ್ನುಡಿಯ ಕಥೆಯಲ್ಲಿ ಕಂಡುಬರುವ ಅನಕ್ಷರತೆ ಕುರಿತಂತೆ ನನ್ನೊಂದು ಸಣ್ಣ ಮಾಹಿತಿ. ಈ ಹಿಂದೆ ಅಮೇರಿಕಾದಂತಹ ದೇಶದಲ್ಲೂ ಬುಡಕಟ್ಟು ಜನಾಂಗದವರಲ್ಲಿ ಕಂಡುಬಂದ ಅನಕ್ಷರತೆ, ನಮ್ಮಂತಹ ಮುಂದುವರಿಯುತ್ತಿರುವ ದೇಶದಲ್ಲಿ ಹೇಗೆ ಹಂತ ಹಂತವಾಗಿ ಬದಲಾಗುತ್ತಿದೆ ಎಂಬುದಕ್ಕೆ ನಮ್ಮ ದೇಶದ ಒರಿಸ್ಸಾ ರಾಜ್ಯದ ಭುವನೇಶ್ವರದಲ್ಲಿ Kalinga Institute of Social Science ಎಂಬ ಸಂಸ್ಥೆ ವಿದ್ಯಾಭ್ಯಾಸ ಕುರಿತಂತೆ ಹೇಗೆ ಕೆಲಸ ನಿರ್ವಹಿಸುತ್ತಿದೆ ಎಂಬುದಕ್ಕೆ ಅಲ್ಲಿನ ಬುಡಕಟ್ಟು ಮಕ್ಕಳಲ್ಲಿ ಕಂಡುಬಂದಿರುವ transformation ನಿಜಕ್ಕೂ ಜೀವಂತ ಸಾಕ್ಷಿ. ಈ ಕುರಿತು March 28, 2010, The Week ನಲ್ಲಿ Article ಬಂದಿದೆ. ಅವಕಾಶ ಸಿಕ್ಕರೆ ಖಂಡಿತಾ ಓದಿ.
ಸುಧಾ.
ನಕ್ಸಲೈಟ್ಸ್ ಗಳಿಂದ ಚತ್ತೀಸ್ ಘಡದ ರಾಯಪುರದಲ್ಲಿ ನಡೆದ CRPF ನರಮೇಧವಂತೂ ನಿಜಕ್ಕೂ ಅಮಾನವೀಯ. ನಕ್ಸಲೇಟ್ಸ್ ಗಳ ಉದ್ದೇಶ ಏನೇ ಆಗಿರಲಿ, ಆದರೆ ಅವರು ಅನುಸರಿಸುತ್ತಿರುವ ಮಾರ್ಗವಂತೂ ನಿಜಕ್ಕೂ ಖಂಡನೀಯ.
"ತಾರತಮ್ಯ ನೀತಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವ ನಮ್ಮ ನಾಗರೀಕ ಪ್ರಜ್ಞೆ ಮತ್ತು ಬುದ್ದಿವಂತಿಕೆಗೆ ನೀವು ಹೇಳಿರುವ ಧಿಕ್ಕಾರ ನಿಜಕ್ಕೂ ಅರ್ಥಪೂರ್ಣ."
ಈ ತಾರತಮ್ಯ ನೀತಿಯನ್ನು ಅಳಿಸಿ, ಎಲ್ಲರಿಗೂ ಸಮಬಾಳು - ಎಲ್ಲರಿಗೂ ಸಮಪಾಲು ಸಿಗುವಂತಾಗಬೇಕಾದರೆ ನಮ್ಮ ನಾಗರೀಕ ಪ್ರಜ್ಞೆ ಎಚ್ಚೆತ್ತುಕೊಳ್ಳಬೇಕು. ನಮ್ಮಲ್ಲಿನ ವಿವೇಕ ,ವಿವೇಚನೆ ಜಾಗೃತಗೊಳ್ಳಬೇಕು. ಈ ಸಮಾಜದ ವ್ಯವಸ್ಥೆಯನ್ನು ಒಟ್ಟಾರೆ ಬದಲಾಯಿಸಲು ಹೋಗುವ ಮುಂಚೆ ಪ್ರತಿಯೊಬ್ಬರು ತಮ್ಮನ್ನು ತಾವು ಈ ನಿಟ್ಟಿನಲ್ಲಿ ಬದಲಾಯಿಸಿಕೊಳ್ಳಬೇಕು.
ಮಹಾತ್ಮ ಗಾಂಧೀಜಿಯವರು ಹೇಳಿರುವಂತೆ "ನೀವು ಬಯಸುವ ಬದಲಾವಣೆ ಸಮಾಜದಲ್ಲಿ ಆಗಬೇಕಾದರೆ ಮೊದಲು ಆ ಬದಲಾವಣೆಯನ್ನು ನಿಮ್ಮಲ್ಲಿ ತನ್ನಿ" ಎಂಬ ಮಾತು ನಿಜಕ್ಕೂ ಅರ್ಥಗರ್ಭಿತ. ಈ ರೀತಿಯ ಪ್ರಾಮಾಣಿಕ ಪ್ರಯತ್ನಗಳು ಅಂತಿಮ ಘಟ್ಟ(ನಮ್ಮ ಗುರಿ) ತಲುಪುವವರೆಗೂ ನಿರಂತರವಾಗಿ ನಡೆಯುತ್ತಲೇ ಇರಬೇಕು. ಬರಿಯ ಪ್ರಯತ್ನಗಳಷ್ಟೇ ಸಾಲದು. ನಾವು ಮುಟ್ಟಬೇಕಾದ ಗುರಿಯ ಬಗ್ಗೆ ನಮ್ಮ ನಿಲುವು ಅಚಲವಾಗಿರಬೇಕು.
NOTE : ಮತ್ತೊಂದು ವಿಷಯ. ಮಂಜುನಾಥ್ ನಿಮ್ಮ ಲೇಖನದ ಮುನ್ನುಡಿಯ ಕಥೆಯಲ್ಲಿ ಕಂಡುಬರುವ ಅನಕ್ಷರತೆ ಕುರಿತಂತೆ ನನ್ನೊಂದು ಸಣ್ಣ ಮಾಹಿತಿ. ಈ ಹಿಂದೆ ಅಮೇರಿಕಾದಂತಹ ದೇಶದಲ್ಲೂ ಬುಡಕಟ್ಟು ಜನಾಂಗದವರಲ್ಲಿ ಕಂಡುಬಂದ ಅನಕ್ಷರತೆ, ನಮ್ಮಂತಹ ಮುಂದುವರಿಯುತ್ತಿರುವ ದೇಶದಲ್ಲಿ ಹೇಗೆ ಹಂತ ಹಂತವಾಗಿ ಬದಲಾಗುತ್ತಿದೆ ಎಂಬುದಕ್ಕೆ ನಮ್ಮ ದೇಶದ ಒರಿಸ್ಸಾ ರಾಜ್ಯದ ಭುವನೇಶ್ವರದಲ್ಲಿ Kalinga Institute of Social Science ಎಂಬ ಸಂಸ್ಥೆ ವಿದ್ಯಾಭ್ಯಾಸ ಕುರಿತಂತೆ ಹೇಗೆ ಕೆಲಸ ನಿರ್ವಹಿಸುತ್ತಿದೆ ಎಂಬುದಕ್ಕೆ ಅಲ್ಲಿನ ಬುಡಕಟ್ಟು ಮಕ್ಕಳಲ್ಲಿ ಕಂಡುಬಂದಿರುವ transformation ನಿಜಕ್ಕೂ ಜೀವಂತ ಸಾಕ್ಷಿ. ಈ ಕುರಿತು March 28, 2010, The Week ನಲ್ಲಿ Article ಬಂದಿದೆ. ಅವಕಾಶ ಸಿಕ್ಕರೆ ಖಂಡಿತಾ ಓದಿ.
ಸುಧಾ.
1 comment:
ಧನ್ಯವಾದಗಳು :
ಈ ವಿಷಯದ ಬಗ್ಗೆ ನೀವು ಸ್ಪಂದಿಸಿದ್ದಕ್ಕೆ ಮಾತು ಇದರ ಬಗ್ಗೆ ನಿಮ್ಮ ಅನಿಸಿಕೆ ನೀಡಿದ್ದಕ್ಕೆ ನಮಸ್ಕಾರ.
ಪ್ರತಿವಾರ ಒಂದು ವಿಷಯದ ಬಗ್ಗೆ ಚರ್ಚೆಯಲ್ಲಿ ನಿಮಗೆ ಪ್ರಸ್ತುತ / ಪ್ರಮುಖ ವಿಷಯಗಳ ಬಗ್ಗೆ ನೀವು ಬರೆಯಿರಿ
ಒಂದಷ್ಟು "ತಿಳಿದು ತಿಳಿಯಾಗೋಣ"
-ಮಂಜು
Post a Comment