ಮಾನ್ಯ ಸದಸ್ಯರಿಗೆ
ದಿನಾಂಕ: 4.12.2010ರಂದು ನಡೆದ ಮನನ ಸಭೆಯಲ್ಲಿ ಬಿ.ಎಸ್.ಲಕ್ಷ್ಮಣ, ಗೋಪಾಲ.ಜಿ.ಕೃಷ್ಣಾಜಿ, ಹರಿಪ್ರಸಾದ್ ಹಾಗೂ ಕೆ.ಪದ್ಮನಿದೇವಿ ಇವರುಗಳು ಹೊಸದಾಗಿ ತಂಡಕ್ಕೆ ಸೇರ್ಪಡೆಯಾಗಿದ್ದು, ಅವರಿಗೆ ನಮ್ಮ ಮೊದಲಿಗೆ ಸ್ವಾಗತ ಕೋರಲಾಯಿತು.
ಅಂದಿನ ಸಭೆಯಲ್ಲಿ ಪ್ರಮುಖವಾಗಿ 'ಮನನ ಮಾಸಿಕ ಪತ್ರಿಕೆ'ಯನ್ನು ಹೊರತರುವ ಬಗ್ಗೆ ಚರ್ಚಿಸಲಾಯಿತು. ಈ ಕುರಿತು ಅನೇಕ ಉಪಯುಕ್ತ ಸಲಹೆಗಳನ್ನು ತಂಡದ ಸದಸ್ಯರಾದ ರೇವಪ್ಪ, ನಾಗರತ್ನ, ಬಿ.ಎಸ್.ಲಕ್ಷ್ಮಣ, ಶಾಂತರಾಮ್, ಸೀನು, ರಮೇಶ್, ಹರಿಪ್ರಸಾದ್, ಗೋಪಾಲ್ ಇವರುಗಳು ನೀಡುತ್ತಾ, ಪತ್ರಿಕೆಯ ವಿನ್ಯಾಸ, ಆಕಾರ, ಪತ್ರಿಕೆ ಒಳಗೊಳ್ಳುವ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಬೆಲೆ ನಿಗಧಿಪಡಿಸುವ ಬಗ್ಗೆ ಹಾಗೂ ಪತ್ರಿಕೆಯ ಪುಟಗಳನ್ನು ಹೆಚ್ಚಿಸುವ ಬಗ್ಗೆಯೂ ಸಹ ಇವರುಗಳು ತಮ್ಮ ಸಲಹೆಗಳನ್ನು ನೀಡಿದರು. ಅವರೆಲ್ಲರ ಸಲಹೆ ಮತ್ತು ಸೂಚನೆಯ ಮೇರೆಗೆ ಪತ್ರಿಕೆಯ ವಿನ್ಯಾಸ ಮತ್ತು ವಿಷಯಗಳನ್ನು ಈ ಮುಂಚೆಯೇ ಚರ್ಚಿಸಿದಂತೆ ಹೆಚ್ಚು ಪ್ರಸಕ್ತ ವಿದ್ಯಮಾನಗಳಿಗೆ ಗಮನ ಕೊಟ್ಟು ಉತ್ತಮ ರೀತಿಯಲ್ಲಿ ಹೊರತರಲು ಒಮ್ಮತಿಸಿದರು. ಪ್ರಸ್ತುತ ಒಂದು ವರ್ಷದ ಕಾಲ ಹಿಂದಿನ ಸಭೆಯಲ್ಲಿ ಚರ್ಚಿಸಿದಂತೆ ಹಾಗೂ ಈ ಸಭೆಯಲ್ಲಿ ಒಮ್ಮತ ನಿರ್ಣಯಕ್ಕೆ ಬಂದಂತೆ ಪತ್ರಿಕೆಯನ್ನು ಮಾಸಿಕವಾಗಿಯೇ ಹಾಗೂ ಈಗಾಗಲೇ ತಮಗೆ ತಿಳಿಸಿರುವ ಮಾದರಿಯಲ್ಲಿಯೇ ಹೊರತರುವ ಅಭಿಪ್ರಾಯಕ್ಕೆ ಬರಲಾಯಿತು.
ಸಭೆಯಲ್ಲಿ ಉಪಯುಕ್ತ ಸಲಹೆಗಳನ್ನು ನೀಡಿದ ರೇವಪ್ಪ, ಲಕ್ಷ್ಮಣ, ನಾಗರತ್ನ, ಜಿ.ಎಸ್.ಪ್ರಕಾಶ್, ಮುನಿಆಂಜಿನಪ್ಪ, ರೇವಪ್ಪ, ಶಾಂತಾರಾಂ, ಗೋಪಾಲ್, ರಮೇಶ್, ಪಿ.ಸೀನು, ಪದ್ಮಿನಿ ಹಾಗೂ ಮಂಜು ಇವರುಗಳಿಗೆ ಮತ್ತೊಮ್ಮೆ ವಂದನೆಗಳನ್ನು ತಿಳಿಸಿ ಸಭೆಯನ್ನು ಮುಕ್ತಾಯಗೊಳಿಸಲಾಯಿತು.
-ಮನನ ತಂಡದ ಪರವಾಗಿ
No comments:
Post a Comment