ಅನೇಕ ದಿನಗಳ ಮೌನ ಮುರಿದು,
ಜಾತಿ ಪದ್ದತಿಯ ಬಗ್ಗೆ ರೇವಪ್ಪ ಬರೆದ ವಿಚಾರ ಲಹರಿ ("ಸಂಶೋಧನಾ ಪ್ರಬಂಧ") ಅತಿ ವಿಶಿಷ್ಟವಾಗಿತ್ತು. ವಿಷಯವೊಂದರ ಕುರಿತು ತನ್ನ ಅನುಭವ ,ಅಭಿಪ್ರಾಯ ಮತ್ತು ತರ್ಕಗಳನ್ನು ಮೇಳೈಸಿ ಬರೆಯುವ ರೇವಪ್ಪನ ಶೈಲಿ ಅನನ್ಯವಾದದ್ದು. ಈ ಲೇಖನ ಒಂದು ವೈಚಾರಿಕತೆಯ ಅಲೆಯನ್ನು ಓದುಗರಲ್ಲಿ ಉಂಟುಮಾಡಿದೆ ಎಂದರೆ ತಪ್ಪಲ್ಲ.
ಸಮಾಜದ ಅನೇಕ ಪದ್ದತಿಗಳು (ಜಾತಿ ಪದ್ದತಿಯು ಸೇರಿದಂತೆ) ಅನಾದಿಯಿಂದಲೂ ಇವೆ. ಹಿಂದೆ ಯಾವ ಕಾರಣಕ್ಕಾಗಿ ಜಾರಿಗೆ ಬಂತು ಎನ್ನುವುದು ಖಚಿತವಾಗಿ ತಿಳಿಯಲಾಗದು. ಆದರೆ ಆಯಾ ಕಾಲದ ಅವಶ್ಯಕತೆ ,ಅನಿವಾರ್ಯತೆ ಸಾಮಾಜಿಕ ಪರಿಸ್ಥಿತಿಗಳ ಪ್ರಭಾವದಿಂದ ಇವು ಜನ್ಮ ತಳೆದವು ಎನ್ನಬಹುದು. ಅದೇನೇ ಇದ್ದರೂ ಮಾನವತೆಯನ್ನು, ಮನುಷ್ಯತ್ವವನ್ನು, ಘಾಸಿಗೊಳಿಸುವ, ನಿರಾಕರಿಸುವ ಎಲ್ಲ ಪದ್ದತಿಗಳು (ಜಾತಿ ಪದ್ಧತಿ ಸೇರಿದಂತೆ) ಅಳಿಯಬೇಕೆನ್ನುವುದೇ ನಿಜವಾದ ಮಾನವತಾವಾದ, ವಿಶ್ವ ಮಾನವತಾವಾದ.
ಜಾತಿ ಪದ್ದತಿಯ ಬಗ್ಗೆ ರೇವಪ್ಪ ಬರೆದ ವಿಚಾರ ಲಹರಿ ("ಸಂಶೋಧನಾ ಪ್ರಬಂಧ") ಅತಿ ವಿಶಿಷ್ಟವಾಗಿತ್ತು. ವಿಷಯವೊಂದರ ಕುರಿತು ತನ್ನ ಅನುಭವ ,ಅಭಿಪ್ರಾಯ ಮತ್ತು ತರ್ಕಗಳನ್ನು ಮೇಳೈಸಿ ಬರೆಯುವ ರೇವಪ್ಪನ ಶೈಲಿ ಅನನ್ಯವಾದದ್ದು. ಈ ಲೇಖನ ಒಂದು ವೈಚಾರಿಕತೆಯ ಅಲೆಯನ್ನು ಓದುಗರಲ್ಲಿ ಉಂಟುಮಾಡಿದೆ ಎಂದರೆ ತಪ್ಪಲ್ಲ.
ಸಮಾಜದ ಅನೇಕ ಪದ್ದತಿಗಳು (ಜಾತಿ ಪದ್ದತಿಯು ಸೇರಿದಂತೆ) ಅನಾದಿಯಿಂದಲೂ ಇವೆ. ಹಿಂದೆ ಯಾವ ಕಾರಣಕ್ಕಾಗಿ ಜಾರಿಗೆ ಬಂತು ಎನ್ನುವುದು ಖಚಿತವಾಗಿ ತಿಳಿಯಲಾಗದು. ಆದರೆ ಆಯಾ ಕಾಲದ ಅವಶ್ಯಕತೆ ,ಅನಿವಾರ್ಯತೆ ಸಾಮಾಜಿಕ ಪರಿಸ್ಥಿತಿಗಳ ಪ್ರಭಾವದಿಂದ ಇವು ಜನ್ಮ ತಳೆದವು ಎನ್ನಬಹುದು. ಅದೇನೇ ಇದ್ದರೂ ಮಾನವತೆಯನ್ನು, ಮನುಷ್ಯತ್ವವನ್ನು, ಘಾಸಿಗೊಳಿಸುವ, ನಿರಾಕರಿಸುವ ಎಲ್ಲ ಪದ್ದತಿಗಳು (ಜಾತಿ ಪದ್ಧತಿ ಸೇರಿದಂತೆ) ಅಳಿಯಬೇಕೆನ್ನುವುದೇ ನಿಜವಾದ ಮಾನವತಾವಾದ, ವಿಶ್ವ ಮಾನವತಾವಾದ.
ಭಾರತೀಯರು ತಮಗೆ ತಾವೇ ಆದ್ಯರ್ಪಿಸಿಕೊಂಡಿರುವ ಸಂವಿಧಾನವೇ ಸಮಾನತೆಯನ್ನು ಸಾರಿದ್ದರೂ ರಾಜಕೀಯ ಸ್ವಾರ್ಥಕ್ಕಾಗಿ ಮೀಸಲಾತಿಯ ನೆವದಲ್ಲಿ ಜಾತಿ ಪದ್ದತಿಯನ್ನು ನಮ್ಮ ರಾಜಕಾರಣಿಗಳೇ ನೀರೆರೆದು ಸಲಹಿದ್ದಾರೆ,ಸಲಹುತ್ತಿದ್ದಾರೆ. ಇಂದಿನ ಸಮಸ್ಯೆಯ ಬೇರುಗಳಿರುವುದು ರಾಜಕೀಯ ಇಚ್ಚಾಶಕ್ತಿಯ ಕೊರತೆಯಲ್ಲಿ. ಅದೇ ರೀತಿ ಆರ್ಥಿಕವಾದ ಅಸಮಾನತೆಯಿಂದ ಉಂಟಾಗುವ ತಾರತಮ್ಯವೂ ಸಹ ಕ್ರೂರ ಮತ್ತು ಘೋರ . ಅವು ಹಿಂದೆಂದಿಗಿಂತಲೂ ಪ್ರಸ್ತುತ ಸಮಾಜದ ದೊಡ್ಡ ಅನಿಷ್ಟವಾಗಿದೆ. ಸಮಾಜದ ದೋಷಗಳು ನಿವಾರಣೆಯಾಗ ಬೇಕು ಎನ್ನುವುದು ಎಷ್ಟು ಮುಖ್ಯವೋ ಉತ್ತಮ ಅಂಶಗಳು ಸ್ಥಾಪಿತವಾಗಬೇಕು ಎನ್ನುವುದು ಅದಕ್ಕಿಂತಲೂ ಮುಖ್ಯ ಎನ್ನಬಹುದು.
ಒಂದು ನದಿಯ ಹರಿವಿಗೆ ಒಂದು ಪಾತ್ರಬೇಕು (ಮಾರ್ಗ).ಅದೇ ರೀತಿ ಸಮಾಜದ ಹರಿವಿಗೂ ಒಂದು ಪಾತ್ರ,ಮಾರ್ಗ(ವ್ಯವಸ್ಥೆ)ಬೇಕು. ಒಂದು ವ್ಯವಸ್ಥೆಯನ್ನು ಒಂದು ಒಳ್ಳೆಯ ಉದ್ದೇಶಕ್ಕೆ ಮುರಿಯುವುದು ಅನಿವಾರ್ಯ, ಹೌದು. ಆದರೆ ಅಲ್ಲಿ ಮೊದಲಿಗಿಂತಲೂ ಉತ್ತಮವಾದ ಸುವ್ಯವಸ್ಥೆಯನ್ನು ಕಟ್ಟಬೇಕಾದದ್ದು ಅದಕ್ಕಿಂತಲೂ ಅನಿವಾರ್ಯ.
ಈ ಸೂತ್ರ ಸಮಾಜದ ಸುಧಾರಣೆಯ ವಿಷಯದಲ್ಲೂ ಅನ್ವಯಿಸಿ ಹೇಳುವುದಾದರೆ ನಿರ್ಮಾಣವಗಬೇಕಾಗಿರುವ ನವ ಸಮಾಜ ಉನ್ನತ ನ್ಯಾಯ, ಧ್ಯೇಯ ಮಾನವೀಯ ಮೌಲ್ಯಗಳನ್ನು ಹೊಂದಿರಬೇಕು ಎನ್ನುವುದು ಬಹು ಮುಖ್ಯ. ಅದು ಎಲ್ಲರ ಆಶಯವೂ ಹೌದು.
---------------------------------------------------
2 comments:
what u have opined is true and universally acceptable.but plz may i know whose opinion is this?
ee "innondu abhipraya" yaraddu embudannu abhipraya needidavaraagali atava blog na kartru "rev" aagali tilisidare chennagirutte. spashtate haagu paradarshakate namma blognalli bahala mukhya
Post a Comment