೧೭.೪.೨೦೧೦ರ 'ಮನನ' ತಂಡದ ಸಭೆ ಅತ್ಯಂತ ಅರ್ಥಪೂರ್ಣವಾಗಿತ್ತು.
ಸದಸ್ಯರ ಸಂಖ್ಯೆ ಕಡಿಮೆ ಇದ್ದರೂ ಸಹ ವಿಷಯ ಗ೦ಭೀರವಾಗಿತ್ತು. ಮೊದಲಿಗೆ ಹೊಸದಾಗಿ ಬಂದ ಇಬ್ಬರು ಸದಸ್ಯರನ್ನ ಸ್ವಾಗತಿಸಿ ಚರ್ಚೆ ಮುಂದುವರೆಸಿದೆವು . ಹಿಂದಿನ ಸಭೆಯಲ್ಲಿ ತಿಳಿಸಿದಂತೆ ಮಾಸ್ತಿಯವರ ಕಥೆಗಳ ಬಗ್ಗೆಯೇ ಚರ್ಚೆ ಮುಂದುವರೆಯಿತು.
ಇಂದು ಮಾತನಾಡಿದ ದತ್ತರಾಜ್ ಮತ್ತು ರಮೇಶ್ ಇಬ್ಬರೂ ತಾವು ಓದಿದ ಕಥೆಯ ಬಗ್ಗೆ ವಿವರಣೆ ನೀಡಿದರು. ದತ್ತರಾಜ್ ಹೇಳಿದ 'ಸುಶೀಲ' ಕಥೆಯಲ್ಲಿ ಅವರು ಪ್ರಸ್ತಾಪಿಸಿದ ಸ್ವಾತಂತ್ರ್ಯಕ್ಕೆ ಸಂಭ೦ದಪಟ್ಟ ವಿಷಯ ನಿಜಕ್ಕೂ ಹೆಚ್ಚು ಚರ್ಚೆಗೆ ಅವಕಾಶ ನೀಡಿತು. ಅವರು ಸ್ವಾತಂತ್ರ್ಯ, ಗಡಿ, ಅಭಿವ್ಯಕ್ತಿತನದ ಬಗ್ಗೆ ಮಾತನಾಡುತ್ತ ಮಾನವೀಯ ಮುಲ್ಯಗಳ ಬಗ್ಗೆಯೂ ಸಹ ತಮಗಿರುವ ಕಳಕಳಿಯನ್ನು ವ್ಯಕ್ತಪಡಿಸಿದರು. ಮೊದಲ ಬಾರಿಗೆ ಮಾತನಾಡುತ್ತಿರುವುದಾಗಿ ತಿಳಿಸಿದ ದತ್ತರಾಜ್ ಅವರ ಶೈಲಿ ಮೆಚ್ಚುವಂತಿದೆ. ಕಥೆಯಲ್ಲಿನ ವಿಷಯ ತೀವ್ರತೆಯನ್ನು ದತ್ತರಾಜ್ ಚೆನ್ನಾಗಿ ಗ್ರಹಿಸಿರುವುದು ತಿಳಿಯಿತು. ನಿಜಕ್ಕೂ ನಾವು ಸ್ವಾತಂತ್ರ್ಯರಾದ ಇಷ್ಟು ವರ್ಷಗಳ ಮೇಲೆ ಈ ಬಗ್ಗೆ ಅವಲೋಕಿಸುವ ಸ್ಥಿತಿ ಒಮ್ಮೆ ಮನುಷ್ಯನ ಅಭಿವ್ಯಕ್ತಿತನದ ಕುರಿತು ಯೋಚಿಸುವ ಕೆಲಸ ನಮ್ಮ ಸದಸ್ಯರು ನಿಭಾಯಿಸುತ್ತಾರೆ ಎಂಬುದು ಮನನದ ಆಶಯ.
ನಂತರ ಮಾತನಾಡಿದ ರಮೇಶ್ ಅವರು ತಾವು ಓದಿದ ಕತೆಯಲ್ಲಿ ವ್ಯಕ್ತವಾಗಿರುವ ಮನುಜ ಮನಸ್ಥಿತಿ, ಮಿಥ್, ನಾವು ಭ್ರಮಿಸುವ ಲೋಕಕ್ಕಿಂತ ವಾಸ್ತವವಾಗಿ ಇರುವ ಪ್ರಾಕೃತಿಕ ಸಹಜ ಸ್ಥಿತಿ ಮತ್ತು ನಾವು ಪರಿಸರಕ್ಕೆ ಅದರ ಸೌಂದರ್ಯಕ್ಕೆ ಲೀನವಾಗುವ ಜೀವಪರ ಕಾಳಜಿಯನ್ನು ವಿಶ್ಲೇಷಿಸಿದ್ದು ಚರ್ಚೆ ಕುತೂಹಲವಾಗಿರುವುದಕ್ಕೆ ಸಾಧ್ಯವಾಯಿತು.
ಈ ಎರಡು ವಿಷಯಗಳ ಬಗ್ಗೆ ಪ್ರತಿಕ್ರಿಯೆ ವ್ಯಕ್ತವಾಗುತ್ತಲೇ ಸ್ವಾತಂತ್ರ್ಯಕ್ಕಾಗಿ ಪರಿತಪಿಸುತ್ತಿರುವ, ಅಭಿವ್ಯಕ್ತಿಗೆ ಹಾತೊರೆಯುತ್ತಿರುವವರ ಬಗ್ಗೆ ಮಾತುಗಳು ಸಾಗಿ 'ನಕ್ಸಲಿಸಂ' ಬಗ್ಗೆ ವಾದ ಪ್ರತಿವಾದಗಳು ಬೆಳೆದು ಚರ್ಚೆ ಅತ್ಯಂತ ಪ್ರಸ್ತುತ ಮತ್ತು ನಾವು ಅರ್ಥೈಸಲೇ ಬೇಕಾದ ವಿಷಯದ ಬಗ್ಗೆ ಹೊರಳಿತು. ವಿಷಯದ ಸಂಕೀರ್ಣತೆಯು ವಿಸ್ತಾರವಾದಂತೆ ಸಂಕಿರಣವಾಗಿ ಒಟ್ಟಾರೆ ನಾವೆಲ್ಲರೂ ಹೆಚ್ಚು ತಿಳಿಯಲು ಪ್ರೇರೇಪಿಸಿತು.
ಅಷ್ಟರಲ್ಲೇ ಸಮಯ ಮೀರಿದ್ದರಿಂದ ಎಲ್ಲರಿಗೂ ವಂದನೆ ತಿಳಿಸಿ ಸಭೆಯನ್ನ ಮುಕ್ತಾಯಗೊಳಿಸಿದೆವು.
ಚರ್ಚೆಯಲ್ಲಿ ಭಾಗವಹಿಸಿದವರು : ಜಯಸುಧ, ಲಾವಣ್ಯ, ಮಂಜುನಾಥ್, ಮಂಜು, ದತ್ತರಾಜ್, ರಮೇಶ್, ಬಿರಾದರ್, ಮುನಿ ಆ೦ಜನಪ್ಪ, ಸೀನು, ಮಹಾಲಕ್ಷ್ಮಿ, ಜ್ಯೋತಿಶ್ರೀ.
ಚರ್ಚೆಯಲ್ಲಿ ಭಾಗವಹಿಸಿದವರು : ಜಯಸುಧ, ಲಾವಣ್ಯ, ಮಂಜುನಾಥ್, ಮಂಜು, ದತ್ತರಾಜ್, ರಮೇಶ್, ಬಿರಾದರ್, ಮುನಿ ಆ೦ಜನಪ್ಪ, ಸೀನು, ಮಹಾಲಕ್ಷ್ಮಿ, ಜ್ಯೋತಿಶ್ರೀ.
ಮುಂದಿನ ವಾರದ ವಿಷಯ :
' META PHYSICS ' ತತ್ವಶಾಸ್ತ್ರಕ್ಕೆ ಸಂಭಂದಿಸಿದ್ದು.
ಎಲ್ಲರೂ ಓದಿ : Subject is Really Exciting.
-ಮಂಜು
No comments:
Post a Comment