ನಮಸ್ತೆ...
ಮಂಜುನಾಥ ಅವರು ಬರೆದಿರುವ ಚರ್ಚೆಯ ಪೀಠಿಕೆಗೆ ನನ್ನದೊಂದು ಅನಿಸಿಕೆಯುಕ್ತ ಬರಹ ಇಲ್ಲಿದೆ. ಇದು ಅನಿಸಿಕೆ ಮಾತ್ರ. ಪ್ರತಿಕ್ರಿಯೆ ಅಲ್ಲ.
So It Goes Like This...
ಒಂದು ದೇಶವನ್ನ ಒಬ್ಬ ಮನುಷ್ಯನಿಗೆ ಹೋಲಿಸೋಣ. ಆಗ, ನಾವಲ್ಲಿ ಗುರುತಿಸಬಹುದಾದ ಅಂಶಗಳು ಅಂದ್ರೆ : ಅವನ ವ್ಯಕ್ತಿತ್ವ / ಸ್ವಭಾವ, ಅವನ ಗೆಳೆಯರು, ಅವನ ಶತ್ರುಗಳು, .... ಇಂಥ ಅನೇಕ ಅಂಶಗಳ ಸಾಲಿಗೆ ಅವನಿಗೆ ಕಾಡುವ ರೋಗ ರುಜಿನಗಳನ್ನೂ ಸೇರಿಸಬಹುದು ಅಲ್ವಾ ?
ಅಂಥ ರೋಗ ರುಜಿನಗಳ ಸಾಲಿಗೆ ಸೇರಿಸಬೇಕು , ಈ ಪ್ರಸ್ತುತ ಚರ್ಚೆಯಲ್ಲಿರುವ ಸಮಸ್ಯೆಗಳನ್ನ. ಈ ರೋಗ ಖಂಡಿತ ಅವನ ಬೇಜವಾಬ್ದಾರಿ / ಅಲಕ್ಷ್ಯದ ಪರಿಣಾಮವಾಗಿ ಹುಟ್ಟಿಕೊಂಡಿರುವಂಥದು. ಅದನ್ನ ಸರಿಪಡಿಸಲು ಯಾವ ವೈದ್ಯರ ಸಹಾಯವೂ ಬೇಕಿಲ್ಲ. ಬದಲಿಗೆ ಆ ಮನುಷ್ಯನ ವಿಚಾರವಂತಿಕೆ ಕೆಲಸ ಮಾಡಲಿಕ್ಕೆ ಶುರು ಮಾಡಿ, ಆ ರೋಗ ಜನಿಸಲಿಕ್ಕೆ ಕಾರಣವಾದ ತನ್ನ ಅಸಡ್ಡೆಯ ಗುಣವನ್ನ ನಿವಾರಿಸಿಕೊಂಡು ತಾನು ಮರೆತಿದ್ದ ಆ ಕೆಲವು ಕರ್ತವ್ಯಗಳನ್ನ ಸರಿಯಾಗಿ ಪೂರೈಸಿದರೆ ಈ ಸಮಸ್ಯೆ ಹಿಡಿತಕ್ಕೆ ಬಂದೀತು ಅನ್ನೋದು ನನ್ನ ಅನಿಸಿಕೆ.
ಪ್ರಸ್ತುತ ಸಮಸ್ಯೆಗಳಿಗೆ ಕಾರಣವನ್ನ ಪಾಠಕರಿಗೆ ವಿವರಿಸುವ ಅಗತ್ಯವಿಲ್ಲ. ಅವು ಎಲ್ಲ ಮನೋಪ್ರಬುದ್ಧರಿಗೆ ತಿಳಿದಿರುವ ವಿಷಯಗಳು.
" ಆದರೆ, ಆ ಕಾರಣಗಳಿಗೆ ಸಮಾಧಾನ ಗುರುತಿಸಿ, ಸಮಾಜದಲ್ಲಿ ಅಳವಡಿಸೋ ಕೆಲಸ ಇಲ್ಲೀವರೆಗೆ ಆಗಿಲ್ಲ. ಸಮಸ್ಯೆಯ ಮೂಲ ಮರೆತು, ಆ ಸಮಸ್ಯೆಯನ್ನ ಮುಂದಿಟ್ಟುಕೊಂಡು ಗೋಳಾಡುವುದು ಸಲ್ಲ...." ಅಂತ ಭಾಷಣ ಬಿಗಿಯುವ ಬದಲು
ಅಂತ ಮಂಜು ಹೇಳಿದ ಈ ವಾಕ್ಯದ ಬಗ್ಗೆ ಚಿಂತಿಸಿದಲ್ಲಿ, ನಾವೂ ಕೂಡ ಪ್ರಸ್ತುತ ಸಮಸ್ಯೆ ಬೆಳೆಯಲಿಕ್ಕೆ ಕಾರಣೀಭೂತರಾಗಿರುವುದು ಸತ್ಯ ಅನಿಸುತ್ತೆ. ಈಗ ನಾನು - ನೀವು, ಅಂದ್ರೆ ದೇಶದ ಸಾಮಾನ್ಯ ಪ್ರಜೆಗಳು ಮಾಡಲಿಕ್ಕಿರುವುದೇನು ಅಂದ್ರೆ :
ಈ ಸಮಸ್ಯೆಯ ಮೂಲ ಹಾಗೂ ಬೆಳೆವಣಿಗೆಗೆ ನೀರೆರೆದ ಕಾರಣಗಳನ್ನು ಜನಸಾಮಾನ್ಯರಿಗೆ ಮನದಟ್ಟು ಮಾಡಿಸಿ, ಅವರು ಇನ್ನು ಮುಂದೆ ಆ ಸಮಸ್ಯೆಗೆ ನೀರೆರೆಯುವ ಕೆಲಸ ಮಾಡುವುದನ್ನ ತಪ್ಪಿಸುವುದು.
ನಾವು ತಿಳಿದೋ ತಿಳಿಯದೆಯೋ ಈ ಸಮಾಜದ ಪ್ರತಿ ಚಟುವಟಿಕೆಯ ಭಾಗವಾಗ್ತಿರಬೇಕಾದ್ರೆ, ಸಮಸ್ಯೆಗಳ ಭಾಗವಾಗುವುದೇಕೆ ? ಪರಿಹಾರಗಳ ಭಾಗವಾಗೋಣ . ಅಲ್ವಾ ?
" ಆದರೆ, ಆ ಕಾರಣಗಳಿಗೆ ಸಮಾಧಾನ ಗುರುತಿಸಿ, ಸಮಾಜದಲ್ಲಿ ಅಳವಡಿಸೋ ಕೆಲಸ ಇಲ್ಲೀವರೆಗೆ ಆಗಿಲ್ಲ. ಸಮಸ್ಯೆಯ ಮೂಲ ಮರೆತು, ಆ ಸಮಸ್ಯೆಯನ್ನ ಮುಂದಿಟ್ಟುಕೊಂಡು ಗೋಳಾಡುವುದು ಸಲ್ಲ...." ಅಂತ ಭಾಷಣ ಬಿಗಿಯುವ ಬದಲು
" ಈ ತಾರತಮ್ಯ ನೀತಿಯನ್ನು ಅತ್ಯಂತ ಯಶಸ್ವಿಯಾಗಿ ಜಾರಿಗೊಳಿಸುತ್ತಿರುವ ನಮ್ಮ ನಾಗರೀಕ ಪ್ರಜ್ಞೆಗೆ ಮತ್ತು ನಮ್ಮ ಬುದ್ದಿವ೦ತಿಕೆಗೆ ಧಿಕ್ಕಾರವಿರಲಿ. "
ಅಂತ ಮಂಜು ಹೇಳಿದ ಈ ವಾಕ್ಯದ ಬಗ್ಗೆ ಚಿಂತಿಸಿದಲ್ಲಿ, ನಾವೂ ಕೂಡ ಪ್ರಸ್ತುತ ಸಮಸ್ಯೆ ಬೆಳೆಯಲಿಕ್ಕೆ ಕಾರಣೀಭೂತರಾಗಿರುವುದು ಸತ್ಯ ಅನಿಸುತ್ತೆ. ಈಗ ನಾನು - ನೀವು, ಅಂದ್ರೆ ದೇಶದ ಸಾಮಾನ್ಯ ಪ್ರಜೆಗಳು ಮಾಡಲಿಕ್ಕಿರುವುದೇನು ಅಂದ್ರೆ :
ಈ ಸಮಸ್ಯೆಯ ಮೂಲ ಹಾಗೂ ಬೆಳೆವಣಿಗೆಗೆ ನೀರೆರೆದ ಕಾರಣಗಳನ್ನು ಜನಸಾಮಾನ್ಯರಿಗೆ ಮನದಟ್ಟು ಮಾಡಿಸಿ, ಅವರು ಇನ್ನು ಮುಂದೆ ಆ ಸಮಸ್ಯೆಗೆ ನೀರೆರೆಯುವ ಕೆಲಸ ಮಾಡುವುದನ್ನ ತಪ್ಪಿಸುವುದು.
ಜೊತೆಗೆ
ಸಮಸ್ಯೆಯ ಪರಿಹಾರಗಳಲ್ಲಿ ಪ್ರಮುಖಾಂಶವಾದ ಶಿಕ್ಷಣವನ್ನ ಎಲ್ಲರಿಗೂ ತಲುಪಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನ ಕೈಗೊಳ್ಳುವುದು.ನಾವು ತಿಳಿದೋ ತಿಳಿಯದೆಯೋ ಈ ಸಮಾಜದ ಪ್ರತಿ ಚಟುವಟಿಕೆಯ ಭಾಗವಾಗ್ತಿರಬೇಕಾದ್ರೆ, ಸಮಸ್ಯೆಗಳ ಭಾಗವಾಗುವುದೇಕೆ ? ಪರಿಹಾರಗಳ ಭಾಗವಾಗೋಣ . ಅಲ್ವಾ ?
Cheers,
Revappa
No comments:
Post a Comment