ಗೆಳೆಯರೇ,
ನಮ್ಮ ಬ್ಲಾಗ್ ನಲ್ಲಿ ಇನ್ನು ಮುಂದೆ ವಾರಕ್ಕೊಂದು ವಿಷಯದ ಬಗ್ಗೆ ಚರ್ಚಿಸೋಣ ಅನ್ನಿಸಿತು. ಅದಕ್ಕಾಗಿ ಈ ವಾರದಿಂದಲೇ ಅದನ್ನ ಶುರು ಮಾಡೋಣ ಅಂತನ್ನಿಸಿ ಈ ಅಂಕಣ ಪ್ರಾರಂಭಿಸುತ್ತಿದ್ದೇನೆ.
ಅಂಕಣಕ್ಕೆ ಮುನ್ನುಡಿಯಾಗಿ ನಿಮಗೊಂದು ಕಥೆ ಹೇಳುತ್ತೇನೆ ಕೇಳಿ:
ಅಮೇರಿಕಾದ ಹಿಂದಿನ ಅಧ್ಯಕ್ಷರೊಬ್ಬರು ಅವರ ಕಾರ್ಯದರ್ಶಿಗೆ ಒಂದು ಪತ್ರ ಕೊಟ್ಟು, ನಗರದ ಹೊರ ವಲಯದಲ್ಲಿ ವಾಸಿಸುತ್ತಿರುವ ಒಂದು ಬುಡಕಟ್ಟು ಜನಾಂಗದ ನಾಯಕನಿಗೆ ಪತ್ರ ತಲುಪಿಸಿ ಉತ್ತರದೊಂದಿಗೆ ಮರಳಬೇಕು ಎಂದು ತಿಳಿಸುತ್ತಾರೆ. ಕಾರ್ಯದರ್ಶಿ, ಆ ಪತ್ರವನ್ನು ತೆಗೆದುಕೊಂಡು ಹಾದಿ ತಲುಪಿ ಬುಡಕಟ್ಟು ಜನಾಂಗದ ನಾಯಕನಿಗೆ ಕೊಡುತ್ತಾನೆ. ಬುಡಕಟ್ಟು ನಾಯಕ ತನಗೆ ಓದಲು ಬರುವುದಿಲ್ಲವೆಂದು, ಪತ್ರ ತಂದ ಅಧಿಕಾರಿಯನ್ನೇ ಓದಿ ತಿಳಿಸಲು ವಿನಂತಿಸುತ್ತಾನೆ. ಪತ್ರದಲ್ಲಿ ಅಮೇರಿಕಾದ ಅಧ್ಯಕ್ಷರು ಬುಡಕಟ್ಟು ಜನಾಂಗದವರು ವಾಸಿಸುತ್ತಿರುವ ಹಾದಿಯನ್ನು ಸರ್ಕಾರ ವಾಣಿಜ್ಯ ಉದ್ದೇಶಕ್ಕಾಗಿ ಕೊಳ್ಳಲಿದ್ದು ಅದನ್ನು ನೀವು ಮಾರಬೇಕು ಎಂದೂ, ನಿಮಗೆ ಎಷ್ಟು ಹಣ ಬೇಕೋ ಅಷ್ಟು ಹಣಕೊಡುತ್ತಾರೆಂದೂ ತಿಳಿಸಿದಾಗ, ಬು ಡಕಟ್ಟು ನಾಯಕ ಅದರಿಂದ ಸ್ವಲ್ಪವೂ ವಿಚಲಿತನಾಗದೆ ಅಧಿಕಾರಿಗೆ ವಂದನೆ ತಿಳಿಸಿ, ಅಧ್ಯಕ್ಷರಿಗೆ ಒಂದು ಪತ್ರ ಬರೆಯಲು ವಿನಂತಿಸುತ್ತಾನೆ.
ಪತ್ರ ಹೀಗಿದೆ :
"ಮಾನ್ಯ ಅಧ್ಯಕ್ಷರಿಗೆ ವಂದನೆಗಳು.
ನಿಮ್ಮ ಪತ್ರವನ್ನು ಅಧಿಕಾರಿಯವರು ಓದಿ ತಿಳಿಸಿದರು. ನೀವು ಈ ಜಮೀನನ್ನು ಕೊಂಡುಕೊಳುವುದಾಗಿ ತಿಳಿಸಿದ್ದೀರಿ - ನನಗೆ ಒಂದು ಅರ್ಥವಾಗುತ್ತಿಲ್ಲ - ಕೊಂಡುಕೊಳ್ಳಲು ನೀವು ಯಾರು ? ಮತ್ತು ಅದನ್ನು ಮಾರಲು ನಾನು ಯಾರು ? ನಾನು ಹುಟ್ಟುವ ಸಾವಿರ ವರ್ಷಗಳ ಹಿಂದಿನಿಂದಲೂ ಈ ಭೂ ಮಿ ಇಲ್ಲೇ ಇದೆ. ನೀವು ಹುಟ್ಟುವ ಸಾವಿರ ವರ್ಷಗಳ ಹಿಂದಿನಿಂದಲೂ ಇದೆ, ನಾನು ಸತ್ತ ಮೇಲೂ ಇರುತ್ತೆ. ನೀವು ಸತ್ತ ಮೇಲೂ ಇರುತ್ತೆ . ಹಾಗಾಗಿ ಮಾರಲಿಕ್ಕೆ ನಾನು ಯಾರು ? ಕೊಳ್ಳಲು ನೀವು ಯಾರು ? ನನಗೆ ತಿಳಿಸಿ."
ಈ ಪತ್ರ ಇಂದಿನ ಜಾಗತಿಕ ವಿದ್ಯಮಾನಗಳಿಗೆ ಬೆಳೆಯುತ್ತಿರುವ ನಾಗರೀಕತೆಗೆ ಅತ್ಯಂತ ದೊಡ್ಡ ಚಾಟಿ ಪೆಟ್ಟು ಎಂದು ನನ್ನ ಅನ್ನಿಸಿಕೆ.
ಈಗ ಮಾತ್ತೊ೦ದು ವಿಷ್ಯ :
ಇತ್ತೀಚಿನ ೧೦ ವರ್ಷಗಳಲ್ಲಿ ನಮ್ಮ ರಾಜ್ಯದಲ್ಲಿಯೇ ೧೦,೦೦೦ಕ್ಕೂ ಹೆಚ್ಚು ಎಕರೆಯಷ್ಟು ಕೃಷಿ ಭೂಮಿಯನ್ನು ಆಕ್ರಮಿಸಿಕೊಳ್ಳಲಾಗಿದೆ. ಬೆಂಗಳೂರು ಒಂದರಲ್ಲೇ ೧೦೦೦ಕ್ಕು ಹೆಚ್ಹು ಹೆಕ್ಟೇರ್ ನಷ್ಟು ಕೆರೆ ಭೂಮಿ ಒತ್ತುವರಿಯಾಗಿದೆ.
ಇದೆಲ್ಲವನ್ನು ಮನಸಿನಲ್ಲಿರಿಸಿಕೊಂಡೇ ಈಗ ಇನ್ನೊಂದು ವಿಷ್ಯ ಕೇಳಿ :
ಇದೆಲ್ಲವನ್ನು ಮನಸಿನಲ್ಲಿರಿಸಿಕೊಂಡೇ ಈಗ ಇನ್ನೊಂದು ವಿಷ್ಯ ಕೇಳಿ :
೧೯೬೭ರಲ್ಲಿ ಪಶ್ಚಿಮ ಬಂಗಾಳದ ನಕ್ಸಲ್ ಬಾರಿ ಜಿಲ್ಲೆಯಲ್ಲಿ ಜಮೀನ್ದಾರರು ನಡೆಸಿದ ದಬ್ಬಾಳಿಕೆ ಮತ್ತು ಹಿಂಸೆಯ ವಿರುದ್ಧ ಕೂಲಿಗಳು ಬಂಡೆದ್ದರು. ಆಗ ಚಾರು ಮುಜುಮ್ದಾರ್ ನಾಯಕತ್ವದಲ್ಲಿ ಪ್ರಾರ೦ಭವಾದ 'ನಕ್ಸಲ್' ಚಟುವಟಿಕೆ ೪೦ ವರ್ಷಗಳಲ್ಲಿ ಅತ್ಯಂತ ಹಿಂಸಾತ್ಮಕವಾಗಿ ರೂಪಂತರಗೊಂಡಿರುವುದು ಅಣಕು ರೂಪವೇ ಸರಿ. ಮೊನ್ನೆ ಛತ್ತೀಸ್ಗಡ್ ದಲ್ಲಿ ನಡೆದ ಸಿ.ಆರ್.ಪಿ.ಎಫ್. ನರಮೇಧ ನೋಡಿದರೆ ನಿಜಕ್ಕೂ ನಕ್ಸಲರು ಯಾವ ದಿಕ್ಕಿನಲ್ಲಿ ಸಾಗುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ. ಆತಂಕವಾದಿಗಳಿಗೂ ನಕ್ಸಲರಿಗೂ ಬಹಳ ವ್ಯತ್ಯಾಸವಿದೆ ಎಂದು ನಾನು ಅನೇಕ ಚರ್ಚೆಗಳಲ್ಲಿ ಸಮರ್ಥಿಸಿಕೊಂಡಿದ್ದೆ. ಆದರೆ ನನ್ನ ಅನಿಸಿಕೆ ಇತ್ತೀಚಿಗೆ ಸುಳ್ಳು ಮಾಡುತ್ತಿದ್ದಾರೆ, ಈ ನಕ್ಸಲರು. ಅದರ ಹಿಂದಿನ ಉದ್ದೇಶ ಒಳ್ಳೆಯದೇ ಆದರು ಅದರ ಮಾರ್ಗವನ್ನು ಎಲ್ಲರು ಖಂಡಿಸುತ್ತಿದ್ದಾರೆ. ವಿನೋ ಬಾ ಭಾವೆ ಅವರ ಭೂಮಿ ನೀತಿ, ನಮಗಿರುವುದು ಒಂದೇ ಕಲ್ಚರ್ ಅದು ಅಗ್ರಿಕಲ್ಚರ್ ಎಂದು ನಾವು ಭಾವಿಸಿರುವಗಲೇ ಉಳುಮೆಗೆ ಭೂಮಿ ಸಿಗದೇ ಒಕ್ಕಲೆದ್ದಿರುವ ಅನ್ನದಾತರು, ಭೂಮಿ ನಮ್ಮದು ಎಂದು ಅದನ್ನು ದಕ್ಕಿಸಿಕೊಳ್ಳಲು ಬಂದೂಕು ಹಿಡಿಯಲು ರೆಡಿ ಎಂದು ಟೊಂಕ ಕಟ್ಟಿರುವವರು, ಇವರ ನಡುವೆ ನಾಜೂಕಾಗಿ ಪ್ರಜಾತಂತ್ರ ವ್ಯವಸ್ತೆಯ ದಾಳ ನಡೆಸಿ ಸಾವಿರ ಎಕರೆ ಜಮೀನು ಮಾಡುತ್ತಿರುವ ಸೋಗಲಾಡಿಗಳು!,ಇವರಿಗೆ ಅಂಬೇಡ್ಕರ್ ಅವರ 'ಎಲ್ಲರಿಗು ಸಮಬಾಳು ಎಲ್ಲರಿಗು ಸಮಪಾಲು' ಎನ್ನುವ ಮನುಷ್ಯ ನೀತಿ ಸಹಜ ಪ್ರಾಕೃತಿಕ ನೀತಿ ಅರ್ಥವಾಗದೇ ತಾನಷ್ಟೇ ಅವನತಿಯ ಅಂಚಿಗೆ ಸಾಗುತ್ತಿಲ್ಲ ಬದಲಿಗೆ ಇಡಿ ಪ್ರಕೃತಿಯ ಜೀವಿಗಳನ್ನೇ ವಿನಾಶಕ್ಕೆ ತಳ್ಳುತ್ತಿದ್ದಾನೆ. ನಮ್ಮ ಯಾವುದೇ ಆವಿಷ್ಕಾರಗಳು, ತಂತ್ರಜ್ಞಾನಗಳು ಜೀವಿಗಳ ಹಸಿವನ್ನು ನೀಗಿಸುವಲ್ಲಿ ವಿಫಲವಾಗಿರುವುದೇ ದು ರಂತ. ದೇಶ ತಮ್ಮ ಗಡಿಗಳನ್ನು ರಕ್ಷಿ ಸಲೆಂದೇ ಪ್ರತಿ ವರ್ಷ ೧೦೦೦೦ ಕೋಟಿ ಹಣ ವ್ಯಯಿಸುತ್ತಿದೆ. ಅದೇ ಅನ್ನ ಸಿಗದೇ ಸಾಯುವವರ ಸಂಖ್ಯೆ ೧೦೦೦೦ ಕ್ಕೂ ಹೆಚ್ಚಿದೆ. ಪ್ರತಿ ದಿನ ಮಿನೆರಲ್ ಯುಕ್ತ ನೀರು ಕುಡಿಯುವವರೂ ಇದ್ದಾರೆ ನೀರು ಸಿಗದೇ ಸಾಯುವವರೂ ಇದ್ದಾರೆ. ಈ ತಾರತಮ್ಯ ನೀತಿ ಯಾವ ಜೀವಿಗೂ ಸಲ್ಲದು ಎಂಬುದು ಎಲ್ಲರು ತಿಳಿದಿರುವ ಸಂಗತಿ. ಈ ಎಲ್ಲ ವಿಚಾರಗಳ ಬಗೆಗಿನ ನಿರ್ಣಯಗಳನ್ನು ನಿಮಗೆ ಬಿಡುತ್ತೇನೆ .
ಒಟ್ಟಿನಲ್ಲಿ ನನಗೆ
ಗಾಂಧೀಜಿಯವರ
'ನಾಗರೀಕತೆ ವಾಸಿಯಾಗದ ರೋಗವಲ್ಲ' ಎಂಬ ಮಾತು
ಮತ್ತು
ಸಿದ್ದಲಿಂಗಯ್ಯನವರ
ಗಾಂಧೀಜಿಯವರ
'ನಾಗರೀಕತೆ ವಾಸಿಯಾಗದ ರೋಗವಲ್ಲ' ಎಂಬ ಮಾತು
ಮತ್ತು
ಸಿದ್ದಲಿಂಗಯ್ಯನವರ
"ಬೆಟ್ಟಗಳ ಒಡೆದೆವು ಬಂಡೆಗಳ ಕುಟ್ಟಿದೆವುನಮ್ಮ ರಕ್ತ ಜಲ್ಲಿ ಮಾಡಿ ಪ್ರಾಜೆಕ್ಟು ಕಟ್ಟಿದೆವುಶ್ರಮವು ಯಾರದೋ , ಫಲವು ಯಾರದೋ "
ಎಂಬ ಹಾಡು ಯಾವಾಗಲೂ ಕಾಡುತ್ತಿರುತ್ತದೆ.
ಈ ತಾರತಮ್ಯ ನೀತಿಯನ್ನು ಅತ್ಯಂತ ಯಶಸ್ವಿಯಾಗಿ ಜಾರಿಗೊಳಿಸುತ್ತಿರುವ ನಮ್ಮ ನಾಗರೀಕ ಪ್ರಜ್ಞೆಗೆ ಮತ್ತು ನಮ್ಮ ಬುದ್ದಿವ೦ತಿಕೆಗೆ ಧಿಕ್ಕಾರವಿರಲಿ.
ಮಂಜುನಾಥ. ಎಸ್
2 comments:
ನನ್ನ ಪ್ರತಿಕ್ರಿಯೆ / ನನ್ನ ಅನಿಸಿಕೆಯನ್ನ ಗುರುವಾರ ಬರೀತಿನಿ.
ರೇವಪ್ಪ
ಮಂಜುನಾಥ್ ನೀವು ಚಚೆಯ ಪೀಠಿಕೆಯಲ್ಲಿ ಪ್ರಸ್ತಾಪಿಸಿರುವ ವಿಷಯಗಳೆಲ್ಲವೂ ನಿಜಕ್ಕೂ ಗಂಭೀರವಾಗಿ ಚಿಂತನೆ ಮಾಡುವಂತಹವು.
ನಕ್ಸಲೇಟ್ಸ್ ಗಳಿಂದ ಚತ್ತೀಸ್ ಘಡ್ ದ ರಾಯಪುರದಲ್ಲಿ ನಡೆದ CRPF ನರಮೇಧವಂತೂ ನಿಜಕ್ಕೂ ಅಮಾನವೀಯ. ನಕ್ಸಲೇಟ್ಸ್ ಗಳ ಉದ್ದೇಶ ಏನೇ ಆಗಿರಲಿ, ಆದರೆ ಅವರು ಅನುಸರಿಸುತ್ತಿರುವ ಮಾಗವಂತೂ ನಿಜಕ್ಕೂ ಖಂಡನೀಯ.
"ತಾರತಮ್ಯ ನೀತಿಯನ್ನು ಯಶಸ್ವಿಯಾಗಿ ನಿವಹಿಸುತ್ತಿರುವ ನಮ್ಮ ನಾಗರೀಕ ಪ್ರಜ್ಞೆ ಮತ್ತು ಬುದ್ದಿವಂತಿಕೆಗೆ ನೀವು ಹೇಳಿರುವ ಧಿಕ್ಕಾರ ನಿಜಕ್ಕೂ ಅಥಪೂಣ."
ಈ ತಾರತಮ್ಯ ನೀತಿಯನ್ನು ಅಳಿಸಿ, ಎಲ್ಲರಿಗೂ ಸಮಬಾಳು ಎಲ್ಲರಿಗೂ ಸಮಪಾಲು ಸಿಗುವಂತಾಗಬೇಕಾದರೆ ನಮ್ಮ ನಾಗರೀಕ ಪ್ರಜ್ಞೆ ಎಚ್ಚೆತ್ತುಕೊಳ್ಳಬೇಕು, ನಮ್ಮಲ್ಲಿನ ವಿವೇಕ ವಿವೇಚನೆ ಜಾಗ್ೃತಗೊಳ್ಳಬೇಕು. ಈ ಸಮಾಜದ ವ್ಯವಸ್ಥೆಯನ್ನು ಒಟ್ಟಾರೆ ಬದಲಾಯಿಸಲು ಹೋಗುವ ಮುಂಚೆ ಪ್ರತಿಯೊಬ್ಬರು ತಮ್ಮನ್ನು ತಾವು ಈ ನಿಟ್ಟಿನಲ್ಲಿ ಬದಲಾಯಿಸಿಕೊಳ್ಳಬೇಕು.
ಮಹಾತ್ಮ ಗಾಂಧೀಜಿಯವರು ಹೇಳಿರುವಂತೆ "ನೀವು ಬಯಸುವ ಬದಲಾವಣೆ ಸಮಾಜದಲ್ಲಿ ಆಗಬೇಕಾದರೆ ಮೊದಲು ಆ ಬದಲಾವಣೆಯನ್ನು ನಿಮ್ಮಲ್ಲಿ ತನ್ನಿ" ಎಂಬ ಮಾತು ನಿಜಕ್ಜೂ ಅಥಗಭಿತ. ಈ ರೀತಿಯ ಪ್ರಾಮಾಣಿಕ ಪ್ರಯತ್ನಗಳು ಅಂತಿಮ ಘಟ್ಟ(ನಮ್ಮ ಗುರಿ) ತಲುಪುವವರೆಗೂ ನಿರಂತರವಾಗಿ ನಡೆಯುತ್ತಲೇ ಇರಬೇಕು. ಬರಿಯ ಪ್ರಯತ್ನಗಳಷ್ಟೇ ಸಾಲದು ನಾವು ಮುಟ್ಟಬೇಕಾದ ಗುರಿಯ ಬಗ್ಗೆ ನಮ್ಮ ನಿಲುವು ಅಚಲವಾಗಿರಬೇಕು.
NOTE: ಮತ್ತೊಂದು ವಿಷಯ ಮಂಜುನಾಥ್ ನಿಮ್ಮ ಲೇಖನದ ಮುನ್ನುಡಿಯ ಕಥೆಯಲ್ಲಿ ಕಂಡುಬರುವ ಅನಕ್ಷರತೆ ಕುರಿತಂತೆ ನನ್ನೊಂದು ಸಣ್ಣ ಮಾಹಿತಿ. ಈ ಹಿಂದೆ ಅಮೇರಿಕಾದಂತಹ ದೇಶದಲ್ಲೂ ಬುಡಕಟ್ಟು ಜನಾಂಗದವರಲ್ಲಿ ಕಂಡುಬಂದ ಅನಕ್ಷರತೆ, ನಮ್ಮಂತಹ ಮುಂದುವರಿಯುತ್ತಿರುವ ದೇಶದಲ್ಲಿ ಹೇಗೆ ಹಂತ ಹಂತವಾಗಿ ಬದಲಾಗುತ್ತಿದೆ ಎಂಬುದಕ್ಕೆ ನಮ್ಮ ದೇಶದ ಒರಿಸ್ಸಾ ರಾಜ್ಯದ ಭುವನೇಶ್ವರದಲ್ಲಿ Kalinga Institute of Social Science ಎಂಬ ಸಂಸ್ಥೆ ವಿದ್ಯಾಭ್ಯಾಸ ಕುರಿತಂತೆ ಹೇಗೆ ಕೆಲಸ ನಿವಹಿಸುತ್ತಿದೆ ಎಂಬುದಕ್ಕೆ ಅಲ್ಲಿನ ಬುಡಕಟ್ಟು ಮಕ್ಕಳಲ್ಲಿ ಕಂಡುಬಂದಿರುವ transformation ನಿಜಕ್ಕೂ ಜೀವಂತ ಸಾಕ್ಷಿ. ಈ ಕುರಿತು March 28, 2010, The Week ನಲ್ಲಿ Article ಬಂದಿದೆ. ಅವಕಾಶ ಸಿಕ್ಕರೆ ಖಂಡಿತಾ ಓದಿ.
ಸುಧಾ.
Post a Comment