:: ವಾರಕ್ಕೊಂದು ವಿಷಯ ಮಾಲಿಕೆ 2 ::
ನಮ್ಮ ಇಸ್ರೋದವರು ಉಡಾಯಿಸಿದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಪಥ ಬದಲಾಯಿಸಿ ವಿಫಲವಾದ ಸಂತೋಷದ ಬೆನ್ನಲ್ಲೇ ಯುರೋಪ್ನಲ್ಲಾದ ಜ್ವಾಲಾಮುಖಿಯ ಸ್ಫೋಟ ಜೀವಸೆಲೆಯ ಭೂಮಿಯನ್ನು ಕಂಗೆಡಿಸಿದ್ದು ನಮ್ಮ ತಾಂತ್ರಿಕ ಆವಿಷ್ಕಾರಗಳಿಗೆ ಚಾಟಿ ಪೆಟ್ಟು ನೀಡುತ್ತಿದೆ. ಪ್ರಕೃತಿ ವಿಕೋಪಕ್ಕಿಂತಲೂ ನಮ್ಮೊಳಗೇ ಆಗುತ್ತಿರುವ ವಿಕೋಪಗಳು ಹೆಚ್ಚು ಅಪಾಯಕಾರಿಯಾಗಿ ಕಾಣುವುದು ಇಂದಿನ ಸ್ಥಿತಿಗೆ ಕಾರಣವಾಗಿದೆ. ಕನ್ನಡದ ಯುವ ಬರಹಗಾರ ಕವಿ ಎನ್.ಕೆ. ಹನುಮಂತಯ್ಯ ನಿಧನ ಹೊಂದಿದ್ದು ನಿಜಕ್ಕೂ ಬೇಸರದ ಸಂಗತಿ. ಕವಿಯಾಗಿ ಅತ್ಯಂತ ಭರವಸೆ ನೀಡಿದ್ದ ಎನ್.ಕೆ. ರವರು ಕಿರಿ ವಯಸಿನಲ್ಲೇ ನಮ್ಮಿಂದ ದೂರವಾಗಿದ್ದು ದುರಂತ. ಈ ಎಲ್ಲ ವಿಷಯಗಳನ್ನು ಮನಸ್ಸಿನಲ್ಲಿ ತುಂಬಿಕೊಂಡೇ, ನಾನು ಒಂದು ಪದ್ಯದೊಂದಿಗೆಯೇ ಈ ವಾರದ ವಿಷಯವನ್ನು ವಿಸ್ತರಿಸಲು ಪ್ರಯತ್ನಿಸುತ್ತೇನೆ.
ಗೈಡ್
ಬುಗುಬುಗನೆ ಉದ್ಗಮಿಸುತ್ತಿದೆ ದುಮ್ಮು
ಪದರಗಳಂತೆ ಮಸುಕಾದ ಸಮಸ್ಟಿ
ದಿಟ್ಟಿ ನೆತ್ತಿದಷ್ಟು ಟಿಸಿಲೊಂದಿ ಲ್ಲ
ಅಡಿಯಳಕ್ಕಿಳಿದರು ಹನಿ ಜಿನುಗುತ್ತಿಲ್ಲ.
ನಾನೊಬ್ಬ ಗೈಡ್
ಬನ್ನಿ, ನಿಮಗೆ ಗತವೈಭವವನ್ನು
ಬಣ್ಣಿಸುವುದಕ್ಕಿಂತಲೂ ರಂಜನೀಯವಾಗಿ
ಸಮರ ಕತೆಯನ್ನು ಹೇಳುತ್ತೇನೆ.
ಇಗೋ ಇದೆ ಜಾಗದಲ್ಲಿ
ಹೂ ಬಿರಿದಂತೆ ಬಿರಿಯಿತು!
ಅಹ! ಎಂತ ರಭಸ ಆ ಬಾ೦ಬನದ್ದು.
ಜೇನಿನ ರೆಕ್ಕೆ ಬದಿತಕ್ಕಿಂತಲೂ ವೇಗ!
ಗಮ್ಮಲಿನ ತೀವ್ರತೆ ಎಷ್ಟೆಂದರೆ
ಉಸಿರೇ ಕಟ್ಟುತ್ತದೆ.
ಎಷ್ಟೇ ಆಗಲಿ ಇಂಪೋರ್ಟೆಡ್ ಅಲ್ಲವೇ
ಘಾಟು ಜಾಸ್ತಿ!
ತ್ರಾಣವಿಲ್ಲ ನಡೆಯಲು
ಪಾದಗಳು ಸುಂಡುತ್ತಿವೆ.
ಉಸುಕಿನೊಳಗೆ ದೇಹವೇ ಉಳುಕಿದೆ.
'ಈ ಪಾದ ಪುಟ್ಟ ಪಾದ'
ಕಾಲ್ಗೆಜ್ಜೆ ಸುತ್ತು ಕರಕಲಾಗಿದೆ
ಕೂಸಿನ ಕುಲಾವಿ ಬಿಳಿಯಿಂದ
ಕೆಂಪಿಗೆ ತಿರುಗಿದ್ದು
ಜಗದ ವರ್ಣ ಭೇದದ 'ಸನ್ನಿಯಿಂದೇನೋ?
ಜಿರಳೆ, ಗೆದ್ದಲು ವಾಂತಿ ಮಾಡುತ್ತಿವೆ!
ವಿಷಪೂರಿತ ದೇಹಗಳ ತಿಂದು
'ಫುಡ್ ಪಾಯ್ಸನ್' ಆಗಿವೆ ಅವಕ್ಕೆ.
ನೋಡಿ ಸ್ವಾಮಿ ನಿನ್ನೆಯಷ್ಟೇ
ಇಲ್ಲಿ ಬಡುಕುಗಳಿದ್ದವು
ನಾನು, ನೀನು, ಅವಳು, ಇವಳು- ಹೀಗೆ
ಜನವೋ ಜನ.
ಗೂಡಿನೂಳು ಹಕ್ಕಿಗಳ ಗಾನ
ನಮ್ಮ ನಿಮ್ಮೊಳಗಿನ ಗದ್ದಲಕ್ಕೆ
ಅಲ್ಲಲ್ಲೇ ಸಂಧಾನ!
ನನಗೆ ಗೊತ್ತಿದೆ ನಾನು ಹೇಳುತ್ತಿರುವುದು
ನಿಮಗೀಗ ಕೇಳಿಸುತ್ತಿಲ್ಲ ಎಂದು!
ಸುಯ್ ಎಂದು ಛೇದಿಸುತ್ತ ಬಂದ
'ಬುಲೆಟ್' ಗಾಳಿಯ ಗಂಟಲನ್ನು ಚಿದ್ರಗೊಳಿಸಿದೆ!
ಶಬ್ದವಿಲ್ಲ ಈಗ ಎಲ್ಲಿಯು.
ಕಣ್ಣುಗಳಿಗೆ ಎವೆಯಿಕ್ಕಿದಷ್ಟು ನಿತ್ರಾಣ.
ದೊರಗು ಎಷ್ಟೆಂದರೆ ಬಿರುಕೋ ಬಿರುಕು.
ಹಣ ಕೊಡಿ ಪ್ಲೀಸ್ ಹಣ
ಮಣಿ ಪ್ಲೀಸ್..
ಮೊದ್ಲೇ ಹೇಳಿದ್ನಲ್ಲ ಸಾರ್
ತಲೆಗಿಷ್ಟು ಅಂತ ಕೊಟ್ಬಿಡಿ
money per head..!
ಮಂಜು
4 comments:
ಕನ್ನಡದ ಯುವ ಬರಹಗಾರ ಕವಿ ಎನ್.ಕೆ. ಹನುಮಂತಯ್ಯ ರವರ ನಿಧನಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ನಿಮ್ಮ ಗೈಡ್ ಕವಿತೆಯನ್ನು ಈ ಹಿಂದೆ ಸಹ ಓದಿದ್ದೇನೆ. ಈಗಿನ ವಾಸ್ತವಾಂಶಗಳನ್ನ symbolic ಆಗಿ ಹೇಳಿರುವುದು ಚೆನ್ನಾಗಿದೆ.
ಸುಧಾ.
toynk!....
Modalne pyaara nanaga tilililla....
PSLV haalaagiddakka 'santoshaa?'...andhanga adu PSLV alla GSLV.
ನಮ್ಮಂಥ ಹೊಸಬರಿಗೆ ಹನುಮಂತಯ್ಯನವರ ಪರಿಚಯ ಇಲ್ಲ. ಹೀಗಾಗಿ ಮಂಜು ಅವರು ಸದರಿ ಕವಿಗಳ ಒಂದೆರಡು ರಚನೆಗಳನ್ನ ಎಲ್ಲರಿಗೂ mail ನಲ್ಲಿ Forward ಮಾಡಿದರೆ ಚೆನ್ನಾಗಿದ್ದೀತು. ( Blog ನಲ್ಲಿ Publish ಮಾಡೋದು ಬೇಡ. ಯಾಕಂದ್ರೆ ಅನುಮತಿ ಇಲ್ಲದೇ ಇನ್ನೊಬ್ಬರ ಇಡೀ ರಚನೆ Publish ಮಾಡೋದು ತಪ್ಪಾದೀತು )
ಆದರೆ ಬ್ಲಾಸ್ಟ್ ತಲೆಬರಹಕ್ಕೂ GSLV ( PSLV ??? ) ಹಾಳಾದ ಸಂತೋಷ (?)ದ ಸಮಾಚಾರಕ್ಕೂ , ಕವನಕ್ಕೂ ... ಸಂಬಂಧ ಕಲ್ಪಿಸಿದ ಮಂಜು ಅವರ ಬಗೆ ತಿಳಿಯುತ್ತಿಲ್ಲ. ಅದನ್ನ ತಿಳಿಗೊಳಿಸಿದಲ್ಲಿ ಮುಂದೆ ಅಭಿಪ್ರಾಯ ನೀಡಲು ಅನುಕೂಲವಾಗುತ್ತದೆ.
- ರೇವಪ್ಪ
ಹಾಯ್ ಮಂಜುನಾಥ್
ಹನುಮಂತಯ್ಯನವರ ಸಾವಿಗೆ ಬೇಸರಪಟ್ಟಿರುವುದು ಸಹಜವೇ ಆದರೆ ನಮ್ಮ ವಿಜ್ಞಾನಿಗಳ ಹದಿನೆಂಟು ವರ್ಷಗಳ ಪರಿಶ್ರಮದ ಕ್ರಯೋಜನಿಕ್ ಎಂಜಿನ್ ವಿಫಲವಾದ ಬಗ್ಗೆ
"ನಮ್ಮ ಇಸ್ರೋದವರು ಉಡಾಯಿಸಿದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಪಥ ಬದಲಾಯಿಸಿ ವಿಫಲವಾದ ಸಂತೋಷದ ಬೆನ್ನಲ್ಲೇ...." ಅಂತ ನೀವು ಬರೆದಿದ್ದೇಕೋ ಅರ್ಥವಾಗಲಿಲ್ಲ.... ಸ್ವಲ್ಪ ವಿವರಿಸಿ ಬರೆದರೆ ಚೆನ್ನಾಗಿತ್ತು...
Post a Comment