05 August 2009

ಮನಸೇ ಕಾಡದಿರು




ಮನಸೇ ಕಾಡದಿರು
ಮನಸೇ...................
..............ಮಾತಾಡು|
ಒಲವೇ....................
..............ಕೃಪೆತೋರು||

ಆ ನಿನ್ನ ಕುಡಿಗಣ್ಣ ನೋಟ
ಕೊಲ್ಲುತಿದೆ ಎನ್ನ ಹೃದಯ |
ಸಹಿಸುತಿದೆ ಏನೋ ನೋವನು
ಏರುತಿದೆ ಎದೆಯ ಬಡಿತ ||

ಎನ್ನ ಹೃದಯವನು ಕೆಲ ದಿನವು
ಚುಂಬಿಸಿದ ವಸಂತವು ನೀ |
ಎನ್ನ ಜೊತೆಗೆ ಕೀಟಲೆಯ
ಮಾಡಿರುವ ಎಲ್ಲಿಹುದು ನಿನ್ನಯ ದನಿ ||

ಆ ಅಲ್ಪ ದಿನವು ನಿನ್ನನು
ನನ್ನಲಿ ತುಂಬಿಕೊಂಡೆ |
ಈ ಕಲ್ಪಿಸೋ ದಿನದಲಿ ನೀನು
ನನಗೇಕೆ ನೋವ ತಂದೆ ||

ನಾ ಕಂಡದ್ದೆಲ್ಲಾ ಕನಸಾಯಿತೆ?
ಈ ಒಲವು ನಿನ್ನಲಿ ಕೊನೆಯಾಯಿತೇ ?|
ನನ್ನ ನೋವು ನಿನಗೆ ಅರಿವಾಗದೆ ?
ಕಣ್ಣ ಮಾತು ಮುನಿದಾಯಿತೆ?||

ಎನ್ನ ನಯನವ ನೀ ನೋಡೇ
ಒಲವಿನ ಮಾತಾಡೆ |
ಎನ್ನ ಹೃದಯದ ಗುಡಿ ನೋಡೆ
ಮನಸಿನ ಜೊತೆ ಕೂಡೆ ||

ಓ ಮನಸೇ ಕಾಡದಿರು
ನನ್ನ ಹೀಗೆ |
ಕರುಣೆತೋರು ನನ್ನಲಿ
ಒಲವಿನ ಹಾಗೆ ||



4 comments:

sakkath sacchi.blogspot.com said...

ಹಾಯ್! ಮಸ್ತ್ ಮಂಜ, ನೀನು ಈ ರೀತಿ ಸುಸ್ತಾದರೆ ಹೇಗೆ? ವಿರಹದಿಂದ ನೀನು ಹೀಗೆ ಬಳಲುವುದು ತರವೇ? ಅಥವಾ ವಿರಹವೆಂಬುದು ಪ್ರೀತಿಯು ನೀಡುವ ಮುಸುಕಿನ ವರವೇ? ನಿನಗೆ loveಅನ್ನು ( ಹಿತವಾದ ನೋವನ್ನು ) ನೀಡಿದ ಆ ಪೋರಿ ಯಾರು ?
ಕವಿತೆ ಚೆನ್ನಾಗಿ ಮೂಡಿ ಬಂದಿದೆ ಕಣೋ ಮಂಜ
ನಾನು ಕೇಳಿರುವ ಕೊನೆಯ ಪ್ರಶ್ನೆಯ ಉತ್ತರದ ನಿರೀಕ್ಷೆಯಲ್ಲಿ ----ಸಕ್ಕತ್ ಸಚ್ಚಿ

Unknown said...

ಕವಿತ್ವದ ಸವಿಯನ್ನು ಸವಿದರೆ ಸಾಕು ಸಚ್ಚಿ, ನಿನ್ನ ಹಾಗೆ ನಾನೇನೂ ಹಲವಾರು ಹುಡುಗೀರ್ ಹಿಂದೆ ಹೋಗಿ-ಹೋಗಿ ಚುಡಾಯ್ಸೋನ್ ಅಲ್ವೋ!. ಈ ಕವಿತ್ವದ ಸ್ಫೂರ್ತಿಗೆ ಒಂದು ವಸ್ತು ಅಥವಾ ಪ್ರಕೃತಿ ಕಾರಣವಾಗಿರಬಹುದಲ್ಲವೇ? ನಿನ್ನ ಪ್ರತಿಕ್ರಿಯೆಗೆ ಧನ್ಯವಾದಗಳು ಸಚ್ಚಿ.

ಸಂತೋಷ್ ಸಿಹಿಮೊಗೆ said...

ಮಂಜು, ಕವನ ಒಳ್ಳೆಯ ಚಿತ್ರಗೀತೆಯಂತಿದೆ. ಚೆನ್ನಾಗಿದೆ. ನೀವು ಗೀತೆ ರಚಿಸಲು ಪ್ರಯತ್ನಿಸಿದ್ದಿರೇ...?

Unknown said...

ಸಂತು, ನಾನು ಗೀತೆ ರಚಿಸೋದಕ್ಕೆ ಪ್ರಯತ್ನಿಸಿಲ್ಲ. ನಿನಗೇ ತಿಳಿದಿರೋ ಹಾಗೆ ಒಂದು ಕವಿತೆ ರಚನೆಯಾಗಬೇಕಾದರೆ ಅದಕ್ಕೆ ಅನುಭವ ಎಷ್ಟು ಮುಖ್ಯಾನೋ ಅಷ್ಟೇ ಭಾವನೆಯು ಕೂಡ ಮುಖ್ಯ. ನಮ್ಮ ಮನಸಲ್ಲಿ ಮನೆ ಮಾಡಿರೋದು ಕವಿತೆಯಾಗಿ ಹೊರಗೆ ಬರೋವರ್ಗು ಮನಸಲ್ಲಿ ತಳಮಳ ಆಗ್ತಾ ಇರುತ್ತೆ ಅಲ್ವಾ, ಎಲ್ಲಾ ಸಮಯದಲ್ಲೂ ಕವಿತೇನ ಬರೆಯೋಕೆ ಆಗಲ್ಲ, ಅದಕೆ ಮನಸು ಪಕ್ವ ಆಗಿರಬೇಕು. ನಿನ್ನ ಹಾಗೆ ನಾನೂ ಕೂಡ ಮನಸಲ್ಲಿ ಮೂಡಿದ, ಅನುಭವಿಸಿದ ಬಗೆಯನ್ನು ಕವಿತೆ ರೂಪದಲ್ಲಿ ಬರೀತೀನಿ ಅಷ್ಟೇ. ಅದು ಯಾವುದೇ ವಿಷಯಕ್ಕೆ ಸಂಬಂಧಿಸಿರಬಹುದು, ಏನಂತೀಯ.................

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    10 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    10 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದ...
    12 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    14 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    14 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    14 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    15 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    15 years ago