ಹಾಯ್ ರೇವ್,
'ಸಾಯೋ ಟೇಮಿಗೆ ಮಾಳಪ್ಪ ಮೀನ್ ತಿಂದ್ ಸತ್ನಂತೆ' ಬಹಳ ಚೆನ್ನಾಗಿ ಮೂಡಿಬಂದಿದೆ.ಮೇಲ್ನೋಟಕ್ಕೆ ಇದು ಕಾಡ
ಹರಟೆಯಂತಿದ್ದರು ಅದು ಸಾರ್ವಕಾಲಿಕ ಸತ್ಯವೊಂದನ್ನು ನೀತಿಕತೆಯ ರೂಪದಲ್ಲಿ ನಿರೂಪಿಸುವುದು
ವಿಶಿಷ್ಟವೆನಿಸುತ್ತದೆ.ಮುಂದಾಲೋಚನೆ ಇಲ್ಲದೆ ತೆಗೆದು ಕೊಳ್ಳುವ ನಿರ್ಧಾರಗಳಿರಲಿ ಇಲ್ಲವೇ ಇಚ್ಚಾಶಕ್ತಿಯ
ಕೊರತೆಯಿದ್ದು ಮಾಡಿಕೊಳ್ಳುವ ದುಡುಕಿನ "ಕ್ರಾಂತಿಕಾರೀ" ಬದಲಾವಣೆಗಳಾಗಲಿ ಅಥವಾ "ಸುಧಾರಣೆಗಳಾಗಲಿ
ಯಾವತ್ತಿಗೂ ಫಲಕಾರಿಯಾಗುವುದಿಲ್ಲವೆಂಬುದನ್ನು ಚೆನ್ನಾಗಿ ತಿಲಿಸಿದ್ದೀಯ .ಹಳ್ಳಿಯನ್ನು ಬಿಟ್ಟು ಪಟ್ಟಣವನ್ನು
ಸೇರುವುದಕ್ಕೂ ಮಾಳಪ್ಪ ಮೀನು ತಿಂದು ಸಾಯುವುದಕ್ಕೂ ಇರುವ ನಂಟನ್ನು ;"ಸಕಾಲದಲ್ಲಿ ಸರಿಯಾಗಿ
ನಿರ್ಧಾರಗಳನ್ನು ತೆಗೆದುಕೊಳ್ಳದೆ -ಸಾಯೋಕಾಲದಲ್ಲಿ ಏನೇನೋ ನಿರ್ಧಾರಗಳನ್ನು ತೆಗೆದುಕೊಳ್ಳುವುದು
ಸರಿಯಲ್ಲ" ಎನ್ನುವ ನೀತಿಯನ್ನು ಹೇಳಿರುವ ರೀತಿ ಚೆನ್ನಾಗಿದೆ ."ಭಾಷೆಯಲ್ಲಿರುವ ದೇಸಿ ಸೊಗಡು ಹಾಗು
ಸಂಭಾಷಣೆಯಲ್ಲಿರುವ ಸಹಜತೆ ಕಟ್ಟೆ ಮೇಲಿನ ಮಾತಿಗೆ ಸರಿವೊಂದುವಂತಿದೆ ಹಾಗು ನಮ್ಮ ಹಳ್ಳಿಗಳ ನೈಜ
ಚಿತ್ರಣವನ್ನು ನೀಡುತ್ತದೆ.''ನಾವು ತಿಳಿದವರು ಎಂಬ ಭಾವನೆಯನ್ನು ತುಳಿದು ;ನಾವು ತಳಿರುಗಳು ಎಂಬ
ಭಾವನೆಯನ್ನು ತಳೆದು ;ತಿಳುವಳಿಕೆಯ ತಿಳಿಗೊಳದಲ್ಲಿ ತೇಲಲು;ತೇಲಿ ಮುಳುಗಿ ತಳವ ಮುಟ್ಟಿ ಮೇಲೇಳಲು
ಮುಂದಾದರೆ ಯಾವ ಕತೆಯು ಬಾಲೀಶವೆಂದೋ,ಬಾಲಮಿತ್ರ ಚಂದಾಮಾಮನ ಕತೆಯೆಂದೋ ಅನಿಸುವುದಿಲ್ಲ
.ನಿನ್ನ ಈ ಸರಳ ಸುಂದರ ಪ್ರಯೋಗ ಹಾಗು ಪ್ರಯತ್ನ ಪ್ರಶಂಸನೀಯ. ಹಿಂದಿನ ಬಾರಿಯಂತೆ ಈ ಬಾರಿಯೂ ನಿನ್ನ
ಕತೆಯ "CLIMAX SCENE" [CLIMAX LINE] ದಿಟ್ಟತನದಿಂದ ಕೂಡಿದೆ.ಮೊದಲಿನಿಂದ ಕೂಲಾಗಿ
ಮಾತಾಡಿಕೊಂಡು ಬಂದು ಕೊನೆಯಲ್ಲಿ ಜ್ವಾಲಾಮುಖಿಯಂತೆ ಸ್ಪೋಟಿಸುವುದು ಬಹುಷಃ "ರೇವ್ STYLE"
ಇರಬಹುದೇನೋ.ನೇರವಾಗಿ ರಾಜಕೀಯ ವಿಚಾರಗಳನ್ನು ಉಲ್ಲೇಖಿಸಿದ "ದಿಲ್" ನನಗೆ ಇಷ್ಟವಾಯಿತು .ಈ
ಕತೆ ಹೇಳುವ ; 'ಕಟ್ಟೆ ಮೇಲೆ ಮಾತಾಡುವ ' ನಿನ್ನ ಕಾಯಕವು ನಿರಂತರವಾಗಿ ಸಾಗಲಿ ,ನಿನಗೆ ಶುಭವಾಗಲಿ
-ಎಂದೂ ನಿಮ್ಮವ
-ಸಕ್ಕತ್ ಸಚ್ಚಿ
[ ಇಂದು (ಜುಲೈ 7-ಮಂಗಳವಾರ )ಮನೋಹರನ (ಸಂಸದೀಯ ವ್ಯವಹಾರ ಹಾಗು ಶಾಸನ ರಚನೆ ಇಲಾಖೆ )ಹುಟ್ಟುಹಬ್ಬ. ಈ ಸಂತೋಷದ ಸಂದರ್ಭದಂದು ನಮ್ಮ ಗೆಳೆಯ ಮನೋಹರನಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ -ನಿಮ್ಮ -ಜೋಗಿ ಜಂಗಮ -ಸಕ್ಕತ್ ಸಚ್ಚಿ ]
'ಸಾಯೋ ಟೇಮಿಗೆ ಮಾಳಪ್ಪ ಮೀನ್ ತಿಂದ್ ಸತ್ನಂತೆ' ಬಹಳ ಚೆನ್ನಾಗಿ ಮೂಡಿಬಂದಿದೆ.ಮೇಲ್ನೋಟಕ್ಕೆ ಇದು ಕಾಡ
ಹರಟೆಯಂತಿದ್ದರು ಅದು ಸಾರ್ವಕಾಲಿಕ ಸತ್ಯವೊಂದನ್ನು ನೀತಿಕತೆಯ ರೂಪದಲ್ಲಿ ನಿರೂಪಿಸುವುದು
ವಿಶಿಷ್ಟವೆನಿಸುತ್ತದೆ.ಮುಂದಾಲೋಚನೆ ಇಲ್ಲದೆ ತೆಗೆದು ಕೊಳ್ಳುವ ನಿರ್ಧಾರಗಳಿರಲಿ ಇಲ್ಲವೇ ಇಚ್ಚಾಶಕ್ತಿಯ
ಕೊರತೆಯಿದ್ದು ಮಾಡಿಕೊಳ್ಳುವ ದುಡುಕಿನ "ಕ್ರಾಂತಿಕಾರೀ" ಬದಲಾವಣೆಗಳಾಗಲಿ ಅಥವಾ "ಸುಧಾರಣೆಗಳಾಗಲಿ
ಯಾವತ್ತಿಗೂ ಫಲಕಾರಿಯಾಗುವುದಿಲ್ಲವೆಂಬುದನ್ನು ಚೆನ್ನಾಗಿ ತಿಲಿಸಿದ್ದೀಯ .ಹಳ್ಳಿಯನ್ನು ಬಿಟ್ಟು ಪಟ್ಟಣವನ್ನು
ಸೇರುವುದಕ್ಕೂ ಮಾಳಪ್ಪ ಮೀನು ತಿಂದು ಸಾಯುವುದಕ್ಕೂ ಇರುವ ನಂಟನ್ನು ;"ಸಕಾಲದಲ್ಲಿ ಸರಿಯಾಗಿ
ನಿರ್ಧಾರಗಳನ್ನು ತೆಗೆದುಕೊಳ್ಳದೆ -ಸಾಯೋಕಾಲದಲ್ಲಿ ಏನೇನೋ ನಿರ್ಧಾರಗಳನ್ನು ತೆಗೆದುಕೊಳ್ಳುವುದು
ಸರಿಯಲ್ಲ" ಎನ್ನುವ ನೀತಿಯನ್ನು ಹೇಳಿರುವ ರೀತಿ ಚೆನ್ನಾಗಿದೆ ."ಭಾಷೆಯಲ್ಲಿರುವ ದೇಸಿ ಸೊಗಡು ಹಾಗು
ಸಂಭಾಷಣೆಯಲ್ಲಿರುವ ಸಹಜತೆ ಕಟ್ಟೆ ಮೇಲಿನ ಮಾತಿಗೆ ಸರಿವೊಂದುವಂತಿದೆ ಹಾಗು ನಮ್ಮ ಹಳ್ಳಿಗಳ ನೈಜ
ಚಿತ್ರಣವನ್ನು ನೀಡುತ್ತದೆ.''ನಾವು ತಿಳಿದವರು ಎಂಬ ಭಾವನೆಯನ್ನು ತುಳಿದು ;ನಾವು ತಳಿರುಗಳು ಎಂಬ
ಭಾವನೆಯನ್ನು ತಳೆದು ;ತಿಳುವಳಿಕೆಯ ತಿಳಿಗೊಳದಲ್ಲಿ ತೇಲಲು;ತೇಲಿ ಮುಳುಗಿ ತಳವ ಮುಟ್ಟಿ ಮೇಲೇಳಲು
ಮುಂದಾದರೆ ಯಾವ ಕತೆಯು ಬಾಲೀಶವೆಂದೋ,ಬಾಲಮಿತ್ರ ಚಂದಾಮಾಮನ ಕತೆಯೆಂದೋ ಅನಿಸುವುದಿಲ್ಲ
.ನಿನ್ನ ಈ ಸರಳ ಸುಂದರ ಪ್ರಯೋಗ ಹಾಗು ಪ್ರಯತ್ನ ಪ್ರಶಂಸನೀಯ. ಹಿಂದಿನ ಬಾರಿಯಂತೆ ಈ ಬಾರಿಯೂ ನಿನ್ನ
ಕತೆಯ "CLIMAX SCENE" [CLIMAX LINE] ದಿಟ್ಟತನದಿಂದ ಕೂಡಿದೆ.ಮೊದಲಿನಿಂದ ಕೂಲಾಗಿ
ಮಾತಾಡಿಕೊಂಡು ಬಂದು ಕೊನೆಯಲ್ಲಿ ಜ್ವಾಲಾಮುಖಿಯಂತೆ ಸ್ಪೋಟಿಸುವುದು ಬಹುಷಃ "ರೇವ್ STYLE"
ಇರಬಹುದೇನೋ.ನೇರವಾಗಿ ರಾಜಕೀಯ ವಿಚಾರಗಳನ್ನು ಉಲ್ಲೇಖಿಸಿದ "ದಿಲ್" ನನಗೆ ಇಷ್ಟವಾಯಿತು .ಈ
ಕತೆ ಹೇಳುವ ; 'ಕಟ್ಟೆ ಮೇಲೆ ಮಾತಾಡುವ ' ನಿನ್ನ ಕಾಯಕವು ನಿರಂತರವಾಗಿ ಸಾಗಲಿ ,ನಿನಗೆ ಶುಭವಾಗಲಿ
-ಎಂದೂ ನಿಮ್ಮವ
-ಸಕ್ಕತ್ ಸಚ್ಚಿ
[ ಇಂದು (ಜುಲೈ 7-ಮಂಗಳವಾರ )ಮನೋಹರನ (ಸಂಸದೀಯ ವ್ಯವಹಾರ ಹಾಗು ಶಾಸನ ರಚನೆ ಇಲಾಖೆ )ಹುಟ್ಟುಹಬ್ಬ. ಈ ಸಂತೋಷದ ಸಂದರ್ಭದಂದು ನಮ್ಮ ಗೆಳೆಯ ಮನೋಹರನಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ -ನಿಮ್ಮ -ಜೋಗಿ ಜಂಗಮ -ಸಕ್ಕತ್ ಸಚ್ಚಿ ]
No comments:
Post a Comment