ಮೊದಲ ಪ್ರಯತ್ನವಾಗಿ ಈ ಕವಿತೆಯನ್ನು ( ವಿಶೇಷತೆ- ಕಂದಪದ್ಯ ಮತ್ತು ಆದಿಪ್ರಾಸ ) ಕಳಿಸುತ್ತಿದ್ದೇನೆ.
ಧನ್ಯವಾದಗಳೊಂದಿಗೆ,
ಮಂಜಪ್ಪ ಜಿ.ಆರ್.
************
ಬರಡು ಜೀವ
ಜೀವ ಜಲವು ಸೊರಗಿದೆ
ಯಾವ ಸ್ವಾರ್ಥದಿಂದಲಿ
ಸಾವೇ ಇಲ್ಲವೆಂದರೂ
ಯಾವ ನೋವಿನಿಂದಲಿ
ಯಾವ ಸ್ವಾರ್ಥದಿಂದಲಿ
ಸಾವೇ ಇಲ್ಲವೆಂದರೂ
ಯಾವ ನೋವಿನಿಂದಲಿ
ನರನತಿಯಾದ ದುರಾಸೆಗೆ
ಧರೆಯು ಧಗಧಗಿಸಿದೆ ಮತ್ತೆಮತ್ತೂ ದಹಿಸಿದೆ
ಮರುಗಿದರೂ ಪರಿವೆಯಿಲ್ಲ
ಮರುಜೀವ ಪಡೆದರೂ ಒಡಲು ಎಲ್ಲ ಒಣಗಿದೆ
ಧರೆಯು ಧಗಧಗಿಸಿದೆ ಮತ್ತೆಮತ್ತೂ ದಹಿಸಿದೆ
ಮರುಗಿದರೂ ಪರಿವೆಯಿಲ್ಲ
ಮರುಜೀವ ಪಡೆದರೂ ಒಡಲು ಎಲ್ಲ ಒಣಗಿದೆ
ವಿಜ್ಞಾನವೊಂದು ಕಂಡರೂ
ಅಜ್ಞಾನವು ತುಂಬಿ ಒಡಲು ಬಿರಿಯುತ್ತಿರುವ್ರು
ಸುಜ್ಞಾನಿಯಿಂದಲರಿಯದೆ
ಅಜ್ಞಾತವಾಸವಿರುವ ಜಲವ ಬಿಡದಿರುವರು
ಅಜ್ಞಾನವು ತುಂಬಿ ಒಡಲು ಬಿರಿಯುತ್ತಿರುವ್ರು
ಸುಜ್ಞಾನಿಯಿಂದಲರಿಯದೆ
ಅಜ್ಞಾತವಾಸವಿರುವ ಜಲವ ಬಿಡದಿರುವರು
ಮಂಕು ಕವಿದ ನರಮಾನವ
ಸುಂಕ ತೆರಬೇಕು ಭವಿಷ್ಯದಿ ಎಂಬುದ ಅರಿಯ
ಅಂಕೆಯನು ಮೀರಿ ಬೆಳೆಯುತ
ಬಿಂಕದಿ ನಾಶವ ತಂದರೆ ರಕ್ಷಿಪುದೆ ಧರೆಯು
ಸುಂಕ ತೆರಬೇಕು ಭವಿಷ್ಯದಿ ಎಂಬುದ ಅರಿಯ
ಅಂಕೆಯನು ಮೀರಿ ಬೆಳೆಯುತ
ಬಿಂಕದಿ ನಾಶವ ತಂದರೆ ರಕ್ಷಿಪುದೆ ಧರೆಯು
4 comments:
ಮಸ್ತ್ ಮಂಜನಿಗೆ ನಮ್ಮ ಬ್ಲಾಗ್ಗಿಗೆ ಹೃತ್ಪೂರ್ವಕ ಸ್ವಾಗತ. "ಬರದು ಜೀವ"ದಂತ ಕವಿತೆಯನ್ನು ವ್ಯಕ್ಯಾನಿಸುವ ,ವಿಶ್ಲೇಷಿಸುವ ,ವಿಮರ್ಶಿಸುವಂತ ಕಾವ್ಯ ಪ್ರತಿಭೆ ನಾನಲ್ಲ .ಆದರೆ ನಾನು ಗ್ರಹಿಸಿದ್ದು ಇಷ್ಟು -ಪ್ರಕೃತಿ ಹಾಗು ಮಾನವೀಯ ಮೌಲ್ಯ (ಮನುಷ್ಯತ್ವ) ಇಂದು ಕುಸಿದು ಅವನತಿಯ ಅಂಚನ್ನು ಮುತ್ತುತಿರುವುದರ ಬಗ್ಗೆ ನೀನು ವಿಷಾದವನ್ನು ವ್ಯಕ್ತ ಪಡಿಸುವುದರ ಜೊತೆಗೆ ಎಚ್ಚರಿಕೆಯ ಗಂಟೆಯನ್ನು ಬಾರಿಸಿದ್ದೀಯ ----ಪ್ರಕೃತಿ ಉಳಿದರೆ ನಾವು ಉಳಿವೆವು .ಮಾನವೀಯತೆ ಅಳಿದರೆ ನಾವು ಅಳಿವೆವು.ಇದು ಪ್ರಸ್ತುತ ಸಂದರ್ಬಕ್ಕಷ್ಟೇ ಅಲ್ಲದೆ ಎಲ್ಲ ಸಂಧರ್ಬಕ್ಕು ಅನ್ವಯಿಸುತ್ತದೆ.
ಮಸ್ತ್ ಮಂಜನಿಗೆ ನಮ್ಮ ಬ್ಲಾಗ್ಗಿಗೆ ಹೃತ್ಪೂರ್ವಕ ಸ್ವಾಗತ. "ಬರಡು ಜೀವ"ದಂತ ಕವಿತೆಯನ್ನು ವ್ಯಕ್ಯಾನಿಸುವ ,ವಿಶ್ಲೇಷಿಸುವ ,ವಿಮರ್ಶಿಸುವಂತ ಕಾವ್ಯ ಪ್ರತಿಭೆ ನಾನಲ್ಲ .ಆದರೆ ನಾನು ಗ್ರಹಿಸಿದ್ದು ಇಷ್ಟು -ಪ್ರಕೃತಿ ಹಾಗು ಮಾನವೀಯ ಮೌಲ್ಯ (ಮನುಷ್ಯತ್ವ) ಇಂದು ಕುಸಿದು ಅವನತಿಯ ಅಂಚನ್ನು ಮುಟ್ಟುತ್ತಿರುವುದರ ಬಗ್ಗೆ ನೀನು ವಿಷಾದವನ್ನು ವ್ಯಕ್ತ ಪಡಿಸುವುದರ ಜೊತೆಗೆ ಎಚ್ಚರಿಕೆಯ ಗಂಟೆಯನ್ನು ಬಾರಿಸಿದ್ದೀಯ ----ಪ್ರಕೃತಿ ಉಳಿದರೆ ನಾವು ಉಳಿವೆವು .ಮಾನವೀಯತೆ ಅಳಿದರೆ ನಾವು ಅಳಿವೆವು.ಇದು ಪ್ರಸ್ತುತ ಸಂಧರ್ಬಕ್ಕಷ್ಟೇ ಅಲ್ಲದೆ ಎಲ್ಲ ಸಂಧರ್ಬಕ್ಕು ಅನ್ವಯಿಸುತ್ತದೆ.ನಿನ್ನ ಬರವಣಿಗೆಯಲ್ಲಿನ ಭಾಷಾ ಪ್ರೌಢಿಮೆ ನನಗೆ ಇಷ್ಟವಾಯಿತು .ಅಷ್ಟೇ ಇಷ್ಟವಾದದ್ದು ನಿನ್ನ ಆಲೋಚನೆ ಹಾಗು ಜೀವನ ಮೌಲ್ಯ .ನಿನ್ನಂತ ಬುದ್ಧಿಜೀವಿಗಳು ಕ್ರಿಯಾತ್ಮಕವಾಗಿ ಭಾವುಕರಾದರೆ ಈ ಧರೆಯು ಉಳಿದೀತು ನಾವು ಉಳಿದೇವು.ನಿನ್ನಿಂದ ಇನ್ನು ಹೆಚ್ಚಿನ ಬರವಣಿಗೆಯ ಜೊತೆಗೆ ಭುವಿಯ ಒಳಿತಿಗಾಗಿ ಇನ್ನು ಎಚ್ಚಿನದನ್ನು ನಿರೀಕ್ಷಿಸುತ -ಇಂತಿ ನಿನ್ನ ಭೀತಿಯ -ಸಕ್ಕತ್ ಸಚ್ಚಿ
ಪ್ರಕೃತಿ ಬಗ್ಗೆ ಕಾಳಜಿ ಇರುವ ನಿಮ್ಮ ಕವಿತೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ.
ಮಂಜು.... ನಿನ್ನ ಕವಿತೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ.
ನಿನ್ನ ಮಿಕ್ಕ ಕವಿತೆಗಳ ನಿರೀಕ್ಷೆಯಲ್ಲಿ....
Post a Comment