10 July 2009

ಮಂಜು ..

ಮಹತ್ವಾಕಾಂಷೆಯ ಸುಮಧುರ ತಾಣಕ್ಕೆ ಲಗ್ಗೆ ಇಟ್ಟು, ಈ ತಾಣದ ಸವಿಯನ್ನು ಹೀರುವ ದುಂಬಿಗಳಲ್ಲಿ ಇಂದಿನಿಂದ ನಾನೂ ಒಬ್ಬನಾಗುತ್ತಿದ್ದೇನೆ. ಇಲ್ಲಿಯವರೆಗೂ ಕೇವಲ ಸವಿಹೀರುವ ದುಂಬಿ ಮಾತ್ರ ನಾನಾಗಿದ್ದೆ. ಇಂದಿನಿಂದ ಆ ಸವಿಯನ್ನು ಎಲ್ಲರಿಗೂ ಉಣಬಡಿಸುವ ಮನಸುಗಳಲ್ಲಿ ಒಬ್ಬನಾಗಲು ಇಚಿಸುತ್ತೇನೆ. ನನ್ನ

ಮೊದಲ ಪ್ರಯತ್ನವಾಗಿ ಈ ಕವಿತೆಯನ್ನು ( ವಿಶೇಷತೆ- ಕಂದಪದ್ಯ ಮತ್ತು ಆದಿಪ್ರಾಸ ) ಕಳಿಸುತ್ತಿದ್ದೇನೆ.

ಧನ್ಯವಾದಗಳೊಂದಿಗೆ,

ಮಂಜಪ್ಪ ಜಿ.ಆರ್.

************

ಬರಡು ಜೀವ
ಜೀವ ಜಲವು ಸೊರಗಿದೆ
ಯಾವ ಸ್ವಾರ್ಥದಿಂದಲಿ
ಸಾವೇ ಇಲ್ಲವೆಂದರೂ
ಯಾವ ನೋವಿನಿಂದಲಿ
ನರನತಿಯಾದ ದುರಾಸೆಗೆ
ಧರೆಯು ಧಗಧಗಿಸಿದೆ ಮತ್ತೆಮತ್ತೂ ದಹಿಸಿದೆ
ಮರುಗಿದರೂ ಪರಿವೆಯಿಲ್ಲ
ಮರುಜೀವ ಪಡೆದರೂ ಒಡಲು ಎಲ್ಲ ಒಣಗಿದೆ
ವಿಜ್ಞಾನವೊಂದು ಕಂಡರೂ
ಅಜ್ಞಾನವು ತುಂಬಿ ಒಡಲು ಬಿರಿಯುತ್ತಿರುವ್ರು
ಸುಜ್ಞಾನಿಯಿಂದಲರಿಯದೆ
ಅಜ್ಞಾತವಾಸವಿರುವ ಜಲವ ಬಿಡದಿರುವರು
ಮಂಕು ಕವಿದ ನರಮಾನವ
ಸುಂಕ ತೆರಬೇಕು ಭವಿಷ್ಯದಿ ಎಂಬುದ ಅರಿಯ
ಅಂಕೆಯನು ಮೀರಿ ಬೆಳೆಯುತ
ಬಿಂಕದಿ ನಾಶವ ತಂದರೆ ರಕ್ಷಿಪುದೆ ಧರೆಯು

4 comments:

sakkath sacchi.blogspot.com said...

ಮಸ್ತ್ ಮಂಜನಿಗೆ ನಮ್ಮ ಬ್ಲಾಗ್ಗಿಗೆ ಹೃತ್ಪೂರ್ವಕ ಸ್ವಾಗತ. "ಬರದು ಜೀವ"ದಂತ ಕವಿತೆಯನ್ನು ವ್ಯಕ್ಯಾನಿಸುವ ,ವಿಶ್ಲೇಷಿಸುವ ,ವಿಮರ್ಶಿಸುವಂತ ಕಾವ್ಯ ಪ್ರತಿಭೆ ನಾನಲ್ಲ .ಆದರೆ ನಾನು ಗ್ರಹಿಸಿದ್ದು ಇಷ್ಟು -ಪ್ರಕೃತಿ ಹಾಗು ಮಾನವೀಯ ಮೌಲ್ಯ (ಮನುಷ್ಯತ್ವ) ಇಂದು ಕುಸಿದು ಅವನತಿಯ ಅಂಚನ್ನು ಮುತ್ತುತಿರುವುದರ ಬಗ್ಗೆ ನೀನು ವಿಷಾದವನ್ನು ವ್ಯಕ್ತ ಪಡಿಸುವುದರ ಜೊತೆಗೆ ಎಚ್ಚರಿಕೆಯ ಗಂಟೆಯನ್ನು ಬಾರಿಸಿದ್ದೀಯ ----ಪ್ರಕೃತಿ ಉಳಿದರೆ ನಾವು ಉಳಿವೆವು .ಮಾನವೀಯತೆ ಅಳಿದರೆ ನಾವು ಅಳಿವೆವು.ಇದು ಪ್ರಸ್ತುತ ಸಂದರ್ಬಕ್ಕಷ್ಟೇ ಅಲ್ಲದೆ ಎಲ್ಲ ಸಂಧರ್ಬಕ್ಕು ಅನ್ವಯಿಸುತ್ತದೆ.

sakkath sacchi.blogspot.com said...

ಮಸ್ತ್ ಮಂಜನಿಗೆ ನಮ್ಮ ಬ್ಲಾಗ್ಗಿಗೆ ಹೃತ್ಪೂರ್ವಕ ಸ್ವಾಗತ. "ಬರಡು ಜೀವ"ದಂತ ಕವಿತೆಯನ್ನು ವ್ಯಕ್ಯಾನಿಸುವ ,ವಿಶ್ಲೇಷಿಸುವ ,ವಿಮರ್ಶಿಸುವಂತ ಕಾವ್ಯ ಪ್ರತಿಭೆ ನಾನಲ್ಲ .ಆದರೆ ನಾನು ಗ್ರಹಿಸಿದ್ದು ಇಷ್ಟು -ಪ್ರಕೃತಿ ಹಾಗು ಮಾನವೀಯ ಮೌಲ್ಯ (ಮನುಷ್ಯತ್ವ) ಇಂದು ಕುಸಿದು ಅವನತಿಯ ಅಂಚನ್ನು ಮುಟ್ಟುತ್ತಿರುವುದರ ಬಗ್ಗೆ ನೀನು ವಿಷಾದವನ್ನು ವ್ಯಕ್ತ ಪಡಿಸುವುದರ ಜೊತೆಗೆ ಎಚ್ಚರಿಕೆಯ ಗಂಟೆಯನ್ನು ಬಾರಿಸಿದ್ದೀಯ ----ಪ್ರಕೃತಿ ಉಳಿದರೆ ನಾವು ಉಳಿವೆವು .ಮಾನವೀಯತೆ ಅಳಿದರೆ ನಾವು ಅಳಿವೆವು.ಇದು ಪ್ರಸ್ತುತ ಸಂಧರ್ಬಕ್ಕಷ್ಟೇ ಅಲ್ಲದೆ ಎಲ್ಲ ಸಂಧರ್ಬಕ್ಕು ಅನ್ವಯಿಸುತ್ತದೆ.ನಿನ್ನ ಬರವಣಿಗೆಯಲ್ಲಿನ ಭಾಷಾ ಪ್ರೌಢಿಮೆ ನನಗೆ ಇಷ್ಟವಾಯಿತು .ಅಷ್ಟೇ ಇಷ್ಟವಾದದ್ದು ನಿನ್ನ ಆಲೋಚನೆ ಹಾಗು ಜೀವನ ಮೌಲ್ಯ .ನಿನ್ನಂತ ಬುದ್ಧಿಜೀವಿಗಳು ಕ್ರಿಯಾತ್ಮಕವಾಗಿ ಭಾವುಕರಾದರೆ ಈ ಧರೆಯು ಉಳಿದೀತು ನಾವು ಉಳಿದೇವು.ನಿನ್ನಿಂದ ಇನ್ನು ಹೆಚ್ಚಿನ ಬರವಣಿಗೆಯ ಜೊತೆಗೆ ಭುವಿಯ ಒಳಿತಿಗಾಗಿ ಇನ್ನು ಎಚ್ಚಿನದನ್ನು ನಿರೀಕ್ಷಿಸುತ -ಇಂತಿ ನಿನ್ನ ಭೀತಿಯ -ಸಕ್ಕತ್ ಸಚ್ಚಿ

Unknown said...

ಪ್ರಕೃತಿ ಬಗ್ಗೆ ಕಾಳಜಿ ಇರುವ ನಿಮ್ಮ ಕವಿತೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ.

yashavanth said...

ಮಂಜು.... ನಿನ್ನ ಕವಿತೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ.
ನಿನ್ನ ಮಿಕ್ಕ ಕವಿತೆಗಳ ನಿರೀಕ್ಷೆಯಲ್ಲಿ....

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago