ಇಂದಿನ ಸಭೆಯಲ್ಲಿ ಈಗಾಗಲೇ ತಿಳಿಸಲಾದಂತೆ ಮನನ ಸದಸ್ಯರನ್ನು ಇನ್ನಷ್ಟು ಹೆಚ್ಚು ಮಾಡಿಕೊಂಡು ವಿವಿಧ ಸಮಿತಿಗಳನ್ನು ರಚಿಸಿ 'ವಿಶೇಷ ಅಧ್ಯಯನಗಳು' ಹಾಗೂ 'ಸಣ್ಣ ವಿಷಯಗಳ ಅಧ್ಯಯನ' ಅಂದರೆ small things study ಕೈಗೊಳ್ಳುವ ಬಗ್ಗೆ ಚರ್ಚಿಸಲು ವಿಷಯವನ್ನು ಮಂಜುರವರು ಪ್ರಸ್ತಾಪಿಸಿ ನಾವು ಈ ಹಿಂದೆ ಅಧ್ಯಯನ ಕೈಗೊಂಡಿದ್ದ 'ನೀರಿನ ಸದ್ಬಳಕೆ' ಕುರಿತು ತಯಾರಿಸಿದ ಟಿಪ್ಪಣಿ ಹೆಚ್ಚು ಜನರನ್ನು ತಲುಪಿ ಮನನ ತಂಡದ ಅಧ್ಯಯನ ಕ್ರಿಯೆಯನ್ನು ಇನ್ನಷ್ಟು ಉಲ್ಲಸಿತಗೊಳಿಸಿದೆ ಎಂಬುದನ್ನು ಹೇಳಿದರು.
ಅದೇ ರೀತಿಯ ವಿಷಯಗಳ ಬಗ್ಗೆ ಅಧ್ಯಯನ ನಡೆಸಿ ಟಿಪ್ಪಣಿಗಳನ್ನು ಸಿದ್ಧಪಡಿಸಲು ಸಲಹೆಗಳು ಬಂದಿದ್ದು ಆ ರೀತಿಯ ಅಭಿಪ್ರಾಯಗಳಂತೆ ಇನ್ನು ಮುಂದೆ 'ಇಂಧನ / ವಿದ್ಯುತ್' ಹಾಗೂ ಕಚೇರಿಯಲ್ಲಿ ಬಳಸುವ ಕಾಗದ ಪತ್ರಗಳ ಬಗ್ಗೆ ಒಂದು ತಿಂಗಳ ಅವಧಿಯ ಅಧ್ಯಯನವನ್ನು ಕೈಗೊಳ್ಳುವಂತೆ ಹಾಗೂ ಇಂದಿನ ಪ್ರಸಕ್ತ ವಿದ್ಯಮಾನಗಳು, ಚರಿತ್ರೆ, ವಿಜ್ಞಾನ, ಸಂಘಟನೆ ಹಾಗೂ ಇನ್ನಿತರ ಜ್ವಲಂತ ಸಮಸ್ಯೆಗಳ ಬಗ್ಗೆ ಮೂರು ತಿಂಗಳ ಅವಧಿಯ ಅಧ್ಯಯನವನ್ನು ಕೈಗೊಂಡು ಟಿಪ್ಪಣಿಗಳನ್ನು ಸಿದ್ಧಪಡಿಸುವ ಯೋಜನೆಯನ್ನು ರೂಪಿಸಿ ಕಾರ್ಯರೂಪಕ್ಕೆ ತರುವಂತೆ ಸಭೆಗೆ ತಿಳಿಸಿದರು.
ನಂತರ ವಿಷಯವು ಇಂದು ದೇಶವ್ಯಾಪಿ ನಡೆಯುತ್ತಿರುವ 'ಭ್ರಷ್ಟಾಚಾರ ವಿರೋಧಿ ಆಂದೋನದ ಬಗ್ಗೆ ಹೊರಳಿ 'ಅಣ್ಣಾ ಹಜಾರೆ ಹಾಗೂ ರಾಮದೇವ್'' ಅವರುಗಳ ನಿರಶನ, ಅದರ ನೈತಿಕ ನೆಲೆಗಟ್ಟು, ಪ್ರಜಾಪ್ರಭುತ್ವದ ಬಗೆಗಿನ ನಿಲುವು, ಜಾಗತೀಕರಣ ವರ್ತುಲ ಹೀಗೆ ಹಲವು ಮಜಲುಗಳನ್ನು ಹಾಯ್ದು ಚರ್ಚೆ ಗಂಭೀರ ಸ್ವರೂಪ ಪಡೆದದ್ದು ವಿಶೇಷವಾಗಿತ್ತು.
ಮಂಜು ಮತ್ತು ಶಾಂತರಾಮ್ ರವರು ಭಿನ್ನ ನೆಲೆಗಳಲ್ಲಿ ಭ್ರಷ್ಟಾಚಾರದ ಸ್ವರೂಪಗಳ ಬಗ್ಗೆ, ಪರಶುರಾಮ್ ರವರು ಭ್ರಷ್ಟಾಚಾರ ವಿರೋಧಿ ನೆಲೆಗಟ್ಟಿನ ನೈತಿಕತೆ ಬಗ್ಗೆ ಹಾಗೂ ಗುರುಸ್ವಾಮಿರವರು ಸಂಘಟನೆಯ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದರು ಇದಕ್ಕೆ ಪೂರಕವಾಗಿ ಮಹೇಂದ್ರ, ಶಿವಕುಮಾರ್, ಮಂಜುಳ ಹಾಗೂ ಶ್ರೀಲಕ್ಷ್ಮಿರವರು ಭ್ರಷ್ಟಾಚಾರದ ವಿರುದ್ಧ ನೈತಿಕ ನೆಲೆಗಟ್ಟಿನಲ್ಲಿ ವಿರೋಧಿಸುವ ಬಗ್ಗೆ ತಮ್ಮ ಸಹಮತವನ್ನು ವ್ಯಕ್ತಪಡಿಸಿದರು. ಈ ಬಗ್ಗೆ ಚರ್ಚೆಯನ್ನು ವಿಸ್ತರಿಸಲು ಉದ್ದೇಶಿಸಿದ್ದು, ಮನನ ತಂಡದ ಎಲ್ಲಾ ಸದಸ್ಯರು ಪ್ರಜಾಪ್ರಭುತ್ವ, ಸಾಂವಿಧಾನಿಕ ಹಾಗೂ ವೈಯಕ್ತಿಕ ನೆಲೆಗಟ್ಟಿನಲ್ಲಿ 'ಭ್ರಷ್ಟಾಚಾರ ವಿರೋಧಿ ಆಂದೋಲನದ' ಬಗ್ಗೆ ತಮ್ಮ ಸ್ಪಷ್ಟ ಅಭಿಪ್ರಾಯಗಳನ್ನು ಬರಹದ ಮೂಲಕ ನೀಡುವಂತೆ ಅಥವಾ ಇ-ಮೇಲ್ ಮೂಲಕ ರವಾನಿಸುವಂತೆ ಕೋರಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಕೊನೆಯಲ್ಲಿ ಮನನ ಸಂಘಟನೆಯನ್ನು ಇನ್ನಷ್ಟು ವಿಸ್ತಾರಗೊಳಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಹಾಜರಿದ್ದ ಸದಸ್ಯರಿಗೆ ತಿಳಿಸುತ್ತಾ, ಮುಂದಿನ ಸಭೆಯೊಳಗೆ ಎಲ್ಲಾ ಸದಸ್ಯರು ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸುವಂತೆ, ಜತೆಯವರಿಗೂ ಮನನ ಸೇರುವಂತೆ ತಿಳಿಸುವಂತೆ ಸಂಘಟನೆಯ ಕಾರ್ಯಗಳಿಗ ಹೆಚ್ಚು ಒತ್ತು ನೀಡಿ ಮುಂದಿನ ಸಭೆಯೊಳಗೆ ಮನನಕ್ಕೆ ಒಂದು ಸ್ಪಷ್ಟ ರೂಪ ನೀಡಿ ಮೇಲೆ ತಿಳಿಸಿದ ಅಧ್ಯಯನಗಳನ್ನು ಕೈಗೊಳ್ಳುವಂತೆ ಎಲ್ಲಾ ಸದಸ್ಯರು ಸಕ್ರಿಯವಾಗಿ ಭಾಗವಹಿಸಲು ಕೋರಿ ಸಭೆಯನ್ನು ಮುಕ್ತಾಯಗೊಳಿಸಲಾಯಿತು.
ಸಭೆಯಲ್ಲಿ ಹಾಜರಿದ್ದ ಸದಸ್ಯರು : ಮಂಜು, ಪರಶುರಾಮ್, ಮಂಜುಳ, ಶ್ರೀಲಕ್ಷ್ಮಿ, ಗುರುಸ್ವಾಮಿ, ಶಾಂತರಾಮ್, ಮಹೇಂದ್ರ, ಶಿವಕುಮಾರ್.
ಸಭಾ ನಿರ್ಣಯದಂತೆ ಮನನದ ಎಲ್ಲಾ ಸದಸ್ಯರು :
1. ಪ್ರಜಾಪ್ರಭುತ್ವ, ಸಾಂವಿಧಾನಿಕ ಹಾಗೂ ವೈಯಕ್ತಿಕ ನೆಲೆಗಟ್ಟಿನಲ್ಲಿ 'ಭ್ರಷ್ಟಾಚಾರ ವಿರೋಧಿ ಆಂದೋಲನದ' ಬಗ್ಗೆ ತಮ್ಮ ಸ್ಪಷ್ಟ ಅಭಿಪ್ರಾಯಗಳನ್ನು ಬರಹದ ಮೂಲಕ ನೀಡುವಂತೆ ಅಥವಾ ಇ-ಮೇಲ್ ಮೂಲಕ ರವಾನಿಸುವಂತೆ ಕೋರಿದೆ.
2. ಮುಂದಿನ ಸಭೆಯೊಳಗೆ ಎಲ್ಲಾ ಸದಸ್ಯರು ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸುವಂತೆ, ಜತೆಯವರಿಗೂ ಮನನ ಸೇರುವಂತೆ ತಿಳಿಸುವಂತೆ ಸಂಘಟನೆಯ ಕಾರ್ಯಗಳಿಗ ಹೆಚ್ಚು ಒತ್ತು ನೀಡಿ ಮುಂದಿನ ಸಭೆಯೊಳಗೆ ಮನನಕ್ಕೆ ಒಂದು ಸ್ಪಷ್ಟ ರೂಪ ನೀಡಿ ಮೇಲೆ ತಿಳಿಸಿದ ಅಧ್ಯಯನಗಳನ್ನು ಕೈಗೊಳ್ಳುವಂತೆ ಎಲ್ಲಾ ಸದಸ್ಯರು ಸಕ್ರಿಯವಾಗಿ ಭಾಗವಹಿಸಲು ಕೋರಿದೆ.
'ಮನನ'
No comments:
Post a Comment