ಈ ದಿನದ ಮನನ ಅಧ್ಯಯನ ಸಭೆಯಲ್ಲಿ ನಿಕಟಪೂರ್ವ ಸಭೆಯಲ್ಲಿ ಚರ್ಚಿಸಿದಂತೆ ವಿಶೇಷವಾಗಿ 'ವಿದ್ಯುತ್ ಸದ್ಬಳಕೆ' ಹಾಗೂ 'ಕಾಗದ ಸಾಮಗ್ರಿಗಳ ಬಳಕೆ' ವಿಷಯಗಳ ಬಗೆಗಿನ ಅಧ್ಯಯನವನ್ನು ಕೈಗೊಳ್ಳುವ ಬಗ್ಗೆ ಇಂದಿನ ಸಭೆಯಲ್ಲಿಯೂ ವಿಷಯವನ್ನು ಮಂಡಿಸಲಾಯಿತು.
ಕಳೆದ ಬಾರಿಯೂ ತಿಳಿಸಿದಂತೆ 'ವಿಧಾನಸೌಧ' 'ವಿಕಾಸಸೌಧ' ಹಾಗೂ 'ಎಂ.ಎಸ್.ಬಿಲ್ಡಿಂಗ್' ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ಮನನ ಸದಸ್ಯರು ಅವರುಗಳ ಕಾರ್ಯಕ್ಷೇತ್ರದಲ್ಲಿರುವ ಸ್ನೇಹಿತರೊಂದಿಗೆ, ಸಹೋದ್ಯೋಗಿಗಳೊಂದಿಗೆ ವಿಷಯಗಳನ್ನು ಚರ್ಚಿಸುತ್ತಾ ವಿಷಯವನ್ನು ಸೂಕ್ಷ್ಮವಾಗಿ ಗ್ರಹಿಸಿ ಪ್ರತಿಫಲವಾಗಿ ಟಿಪ್ಪಣಿಯನ್ನು ಸಿದ್ಧಪಡಿಸಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು ಸೂಕ್ತವೆನ್ನುವ ಅಭಿಪ್ರಾಯ ಪಡಲಾಯಿತು. ಮನನ ತಂಡದ ಎಲ್ಲಾ ಸದಸ್ಯರು ಒಂದಿಲ್ಲೊಂದು ರೀತ್ಯ ಇತರರೊಂದಿಗೆ ಸಂವಹನೆ ನಡೆಸಿ ಸಮಗ್ರವಾಗಿ ಅಧ್ಯಯನ ನಡೆಸಲು ಕ್ರಮವಹಿಸುವ ಬಗ್ಗೆ ಒಮ್ಮತ ವ್ಯಕ್ತಪಡಿಸಲಾಯಿತು.
ಮನನ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸದಿರುವುದು, ಸಂಘಟಿತರಾಗದೇ ಇರುವುದು, ಬೇರೆ ಬೇರೆ ವಿಷಯಗಳ ಬಗ್ಗೆ ಚರ್ಚೆ ನಡೆಸದೇ ಇರುವುದರ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿ; ಮೂರು ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸದಸ್ಯರು ಇಬ್ಬಿಬ್ಬರಂತೆ ಒಟ್ಟು ಆರು ಮಂದಿ 'ಕೋರ್ ಕಮಿಟಿ' ರಚಿಸಿಕೊಂಡು ಇತರರನ್ನು ಸಂಪರ್ಕಿಸುವುದು, ಅಧ್ಯಯನ ವ್ಯಾಪ್ತಿ ಸ್ವರೂಪವನ್ನು ವಿಸ್ತರಿಸುವುದು, ಸಭೆಗೆ ಕರೆತರುವುದು ಮತ್ತು ಅಧ್ಯಯನದ ಕ್ರಿಯಾವಂತಿಕೆ ಬಗ್ಗೆ ರೂಪುರೇಷೆಗಳನ್ನು ಸಿದ್ಧಪಡಿಸುವುದು... ಹೀಗೆ ಹಲವು ಕಾರ್ಯಗಳನ್ನು ಕೈಗೊಂಡು 'ಮನನ' ತಂಡವನ್ನು ಇನ್ನಷ್ಟು ಪ್ರಜ್ಞಾಪೂರ್ವಕವಾಗಿ ನೈತಿಕವಾಗಿ ರೂಪಿಸಲು ಸಹಕರಿಸುವುದು ಸೂಕ್ತವೆನ್ನುವ ಅಭಿಪ್ರಾಯಕ್ಕೆ ಸಭೆಯಲ್ಲಿ ಒಮ್ಮತ ಮೂಡಿತು. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವ ಬಗ್ಗೆ ಎಲ್ಲರಿಗೂ ತಿಳಿಸಲು ತೀರ್ಮಾನಿಸಲಾಯಿತು.
ಇಂದಿನ ಸಭೆಯಲ್ಲಿ ಹಲವಾರು ವಿಶೇಷ ಅಂಶಗಳು, ಪ್ರಸಕ್ತ ವಿದ್ಯಮಾನಗಳು, ರಾಜಕೀಯ, ತಂತ್ರಜ್ಞಾನಕ್ಕೆ ಬಂಧಿಯಾಗಿರುವ ಮನುಷ್ಯ... ಹೀಗೆ ಅತ್ಯಂತ ಸೂಕ್ಷ್ಮ ಮತ್ತು ಗಂಭೀರ ವಿಷಯಗಳ ಬಗ್ಗೆ ಚರ್ಚೆ ನಡೆದು,
ಬುಡಕಟ್ಟು ಜನಾಂಗದವರ ರಿವಾಜುಗಳು, ಯಡಿಯೂರಪ್ಪರವರು ಇಂದು ಪ್ರಕಟಿಸಿರುವ ಪತ್ರಿಕಾ ಪ್ರಕಟಣೆ (ಹೆಚ್.ಡಿ.ಕೆ.ಅವರಿಗೆ ನೇರ ಪತ್ರ).. ದೇವರು, ಮೌಲ್ಯ ರಾಜಕಾರಣ, ಪ್ರಜಾಸತ್ತಾತ್ಮಕ ರೀತಿ ಎಲ್ಲದರ ಬಗ್ಗೆಯೂ ಒಂದು ಸಂಕ್ಷಿಪ್ತ ಚರ್ಚೆ ನಡೆದದ್ದು ಅತ್ಯಂತ ಸ್ವಾರಸ್ಯಕರವಾಗಿತ್ತು. ದತ್ತರಾಜ್ ಪ್ರಸ್ತಾಪಸಿದ ವಿಷಯಗಳಿಗೆ ಮಂಜು ಹಾಗೂ ರಾಮ್ ಭಟ್ ರವರು ತಮ್ಮದೇ ದೃಷ್ಟಿಕೋನದಲ್ಲಿ ನೀಡಿದ ವಿಶ್ಲೇಷಣೆ ಚರ್ಚೆಯನ್ನು ತೀವ್ರಗೊಳಿಸಿತ್ತು ಮತ್ತು ಶಿವಕುಮಾರ್ ಹಾಗೂ ಮಹೇಂದ್ರ ಇದಕ್ಕೆ ಪೂರಕವಾಗಿ ಒದಗಿಸಿದ ಮಾಹಿತಿಗಳು ಚರ್ಚೆಯ ಗಾಂಭೀರ್ಯತೆಗೆ ಸಾಕ್ಷಿಯಾಗಿತ್ತು.
ಇವೆಲ್ಲಾ ಅಂಶಗಳನ್ನು ಒಳಗೊಂಡಂತೆ ಮನನ ತಂಡವು ಹೆಚ್ಚು ತಿಳಿಯುವ / ಅಧ್ಯಯನ ನಡೆಸುವ ನಿಟ್ಟಿನಲ್ಲಿ ಉತ್ಸುಕರಾಗಿ ಕಾರ್ಯಪ್ರವೃತ್ತರಾಗುವಂತೆ ಎಲ್ಲರನ್ನೂ ಕೋರುವಂತೆ ಪ್ರತಿಬಾರಿಯಂತೆ ಈ ಬಾರಿಯೂ ಸಭೆಯಲ್ಲಿರುವವರು ಅಭಿಪ್ರಾಯಪಟ್ಟರು. ಕೆಲವು ಸದಸ್ಯರು ಗೈರು ಹಾಜರಾಗುತ್ತಿದ್ದು ಮತ್ತು ನಿಯಮಿತವಾಗಿ ಹಾಜರಾಗದೇ ಇರುವುದರಿಂದ ವಿಷಯಗಳ ಕಂಟಿನ್ಯೂಟಿ ಕಳೆದುಕೊಂಡು ಹಮ್ಮಿಕೊಳ್ಳುವ ಕಾರ್ಯಕ್ರಮಗಳು ಅರ್ಧಕ್ಕೇ ನಿಂತು ಹೋಗುತ್ತಿರುವುದು ಹಾಗೂ ವಿಷಯವನ್ನು ಸಂಪೂರ್ಣವಾಗಿ ಅಧ್ಯಯನ ಮಾಡಲು ಸಾಧ್ಯವಾಗದೇ ಇರುವುದನ್ನು ಪ್ರತಿ ಬಾರಿಯಂತೆ ಈ ಬಾರಿಯ ಸಭೆಯಲ್ಲಿಯೂ ಮಾತನಾಡಿಕೊಳ್ಳುವುದೇ ಆಯಿತು.
ಸಭೆಯಲ್ಲಿ ಕೈಗೊಂಡ ತೀರ್ಮಾನಗಳು :
1. ಮುಂದಿನ ಸಭೆಗೆ ಎಲ್ಲರೂ ತಪ್ಪದೆ ಹಾಜಾರಾಗುವಂತೆ ಕೋರುವುದು.
2. ಹೆಚ್ಚು ಸದಸ್ಯರನ್ನು ನೋಂದಾಯಿಸುವುದು.
3. ಮನನ ಸಭೆಗೆ ಇನ್ನುಮುಂದೆ ಬರಲಾಗದ ಅಥವಾ ಮನನ ಅಧ್ಯಯನಕ್ಕೆ ತೊಡಗಿಸಿಕೊಳ್ಳಲಾಗದವರು ದಯಮಾಡಿ ತಿಳಿಸುವುದು.
4. ನಮ್ಮ ಅಧ್ಯಯನದ ಭಾಗವಾಗಿ 'ವಿದ್ಯುತ್ ಬಳಕೆ' ಬಗ್ಗೆ ಅಧ್ಯಯನ ನಡೆಸುವುದು- ಈ ಅಧ್ಯಯನಕ್ಕೆ ತೊಡಗಿಸಿಕೊಳ್ಳುವ ಆಸಕ್ತರು ದಯಮಾಡಿ ತಾವು ನಿರ್ವಹಿಸುವ ಪಾತ್ರವನ್ನು ತಿಳಿಸುವುದು.
5. ಕೋರ್ ಕಮಿಟಿಯನ್ನು ರಚಿಸಲಾಗುತ್ತಿದ್ದು, ವಿಧಾನಸೌಧ / ವಿಕಾಸಸೌಧ / ಎಂ.ಎಸ್.ಬಿಲ್ಡಿಂಗ್ ನಲ್ಲಿನ ಇಬ್ಬರು ಸದಸ್ಯರು ಕೋರ್ ಕಮಿಟಿಯಲ್ಲಿ ಇರುವುದರಿಂದ ಆಸಕ್ತಿಯುಳ್ಳವರು ತಿಳಿಸುವುದು.
6. ಮುಂದಿನ ತಿಂಗಳ ವಿಷಯ 'ತಂತ್ರಜ್ಞಾನ ರಹಿತ ಮನುಷ್ಯ'
ಅಂದರೆ ಮುಂದಿನ ತಿಂಗಳ ಮೊದಲ ವಾರದ ಸಭೆಗೆ ಪೂರ್ವಭಾವಿಯಾಗಿ ಮೇಲೆ ತಿಳಿಸಿದ ವಿಷಯದ ಬಗ್ಗೆ ಎಲ್ಲಾ ಸದಸ್ಯರು ಅಧ್ಯಯನ ನಡೆಸಿ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸುವುದು.
7. ಮೇಲ್ ಮೂಲಕ ಇತರರೊಡನೆ ಸಂವಹನೆ ನಡೆಸಲು ಸಾಧ್ಯವಾಗದೇ ಇರುವವರು ಈ ಕೆಳಕಂಡವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಅಭಿಪ್ರಾಯಗಳನ್ನು / ಸಲಹೆಗಳನ್ನು ತಪ್ಪದೆ ತಿಳಿಸುವಂತೆ ಸಹ ಕೋರಿದೆ.
ಮಂಜು : 9902963582
ಪರಶುರಾಮ್ : 9632593469
ದತ್ತ ರಾಜ್ : 9916818932
ಹಾಜರಿದ್ದ ಸದಸ್ಯರು : ಮಂಜು, ದತ್ತರಾಜ್, ರಾಮ್ ಭಟ್, ಮಹೇಂದ್ರ, ಶಿವಕುಮಾರ್
No comments:
Post a Comment