11 April 2011

ದಿನಾಂಕ: 7.4.2011ರಂದು ನಡೆದ ಮನನ ಸಭೆಯ ನಡವಳಿಗಳು :

           ಮೊದಲಿಗೆ ನಿಕಟಪೂರ್ವ ಸಭೆಯಲ್ಲಿ ಚರ್ಚಿಸಿದ ಪ್ರಕೃತಿಯ ವ್ಯತ್ಯಯಗಳು ಮತ್ತು ಮಾನವನ ವಿಕೋಪಕ್ಕೆ ಕುರಿತಾದ ಒಂದು ಟಿಪ್ಪಣಿಯನ್ನು ಸಿದ್ಧಪಡಿಸಲು ಪರಶುರಾಮ್ ಮತ್ತು ಗೌರಿರವರಿಗೆ ವಹಿಸಿ ಅದಕ್ಕೆ ಮಾಹಿತಿಗಳನ್ನು ಪೂರಕವಾಗಿ ಸಲ್ಲಿಸುವಂತೆ ಮನನ ತಂಡದ ಸದಸ್ಯರಿಗೆ ತಿಳಿಸಲಾಗಿದ್ದು, ಇದಕ್ಕೆ ಕೆಲವೇ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಅದರಲ್ಲಿ ಶಾಂತರಾಮ್ ರ ಪ್ರತಿಕ್ರಿಯೆ ಹಾಗೂ ಮಹೇಂದ್ರರವರು ಬರೆದಿರುವ ಲೇಖನಕ್ಕೆ ಸಭೆಯಲ್ಲಿ ಮೆಚ್ಚುಗೆಯನ್ನು ವ್ಯಕ್ತಪಡಿಸಲಾಯಿತು. ಮಹೇಂದ್ರರವರ ಲೇಖದ ಶೈಲಿ ಮತ್ತು ಅವರ ಆಸ್ತೆಗೆ ಅಭಿನಂದನೆಗಳನ್ನೂ ಸಹ ಸಭೆಯಲ್ಲಿ ಸಲ್ಲಿಸಲಾಯಿತು. ಆದರೆ, ಇನ್ನೂ ಹೆಚ್ಚಿನ ಪ್ರತಿಕ್ರಿಯೆಗಳು ಬರಬೇಕಾಗಿದ್ದು, ಅದು ಸಂಪೂರ್ಣವಾಗಿ ಬಂದ ನಂತರವೇ ಟಿಪ್ಪಣಿಯನ್ನು ಸತ್ವಯುಕ್ತವಾಗಿ ರೂಪಿಸಲು ಸಾಧ್ಯವೆಂದು ಹೇಳುತ್ತಾ ಎಲ್ಲಾ ಸದಸ್ಯರು ತಮ್ಮ ಲೇಖನಗಳನ್ನು ಬರೆದು ಕಳುಹಿಸುವಂತೆ ಕೋರಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ರಾಮಗಣಪತಿ ಭಟ್ ರವರು 'ಭೂಕಂಪನ' 'ಜ್ವಾಲಾಮುಖಿ' 'ಪ್ರಳಯ' ಇವೆಲ್ಲವೂ ಪ್ರಕೃತಿಯಲ್ಲಿಯ ಆಗುವ ಸಹಜ ಕ್ರಿಯೆಗಳಾಗಿದ್ದು ಅದನ್ನು 'ಪ್ರಕೃತಿ ವಿಕೋಪ' ಎಂದು ಕರೆಯುವುದು ಸೂಕ್ತವಲ್ಲವೆಂದು ತಿಳಿಸಿ, ಮನುಷ್ಯ ವಿಕೋಪದಿಂದ ಆಗುವ ಘಾಸಿ ದೊಡ್ಡ ಪ್ರಮಾಣದ್ದು ಎಂದು ಅಭಿಪ್ರಾ ಯಪಟ್ಟರು, ಇದಕ್ಕೆ ಸಭೆಯಲ್ಲಿ ಒಮ್ಮತ ವ್ಯಕ್ತವಾಯಿತು.

           ನಂತರ ಇಂದಿನ ಸಭೆಯನ್ನು ಕರೆದಿರುವ ಉದ್ದೇಶಕ್ಕೆ ಸಂಬಂಧಿಸಿದಂತೆ 'ನೀರಿನ ಸದ್ಬಳಕೆ' ಕುರಿತು ಚರ್ಚಿಸಲಾಯಿತು. ಈ ಬಗ್ಗೆ ಮನನ ತಂಡದಿಂದ ಒಂದು ಕ್ರಿಯಾ ಯೋಜನೆಯನ್ನು ರೂಪಿಸಿದ್ದು 'ನೀರಿನ ಸಂರಕ್ಷಣೆ - ಸದ್ಬಳಕೆ' ಬಗ್ಗೆ ಒಂದು ಟಿಪ್ಪಣಿಯನ್ನು ಮತ್ತು ಘೋಷ ವಾಕ್ಯಗಳನ್ನು ಸಿದ್ಧಪಡಿಸಿ ನಮ್ಮ ಕಾರ್ಯಕ್ಷೇತ್ರಗಳಲ್ಲಿ ಪ್ರಚಾರ ಪಡಿಸಲು 'ಪೋಸ್ಟರ್'ಗಳನ್ನು 'ಹ್ಯಾಂಡ್ ಬಿಲ್'ಗಳನ್ನು ಪ್ರದರ್ಶನಪಡಿಸಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಒಮ್ಮತದ ಅಂಗೀಕಾರ ವ್ಯಕ್ತವಾಗಿದ್ದು ಮಂಜುರವರು ಸಿದ್ಧಪಡಿಸಿದ್ದ ನೀರಿನ ಬಳಕೆಯ ಬಗೆಗಿನ ಟಿಪ್ಪಣಿ, ಘೋಷವಾಕ್ಯಗಳು ಹಾಗೂ ಶ್ರೀಲಕ್ಷ್ಮಿರವರು ಸಿದ್ಧಪಡಿಸಿದ್ದ ಘೋಷವಾಕ್ಯಗಳ (ತ್ವರಿತಾಗಿ ಸ್ಪಂದಿಸಿದ ಶ್ರೀಲಕ್ಷ್ಮಿಗೆ ಧನ್ಯವಾದಗಳು) ಪ್ರತಿಯನ್ನು ಎಲ್ಲರಿಗೂ ನೀಡಲಾಯಿತು. ಹಾಗೂ ಮುಂದೆ ಇನ್ನೂ ಹೆಚ್ಚಿನ ಘೋಷ ವಾಕ್ಯಗಳನ್ನು, ಪರಿಸರ ಸಂರಕ್ಷಣೆ, ಮಳೆಕೊಯ್ಲು ಇವುಗಳಿಗೆ ಸಂಬಂಧಿಸಿದ ಟಿಪ್ಪಣಿಯನ್ನು ಸಿದ್ಧಪಡಿಸಿ ನೀಡುವಂತೆ ಸದಸ್ಯರಿಗೆ ತಿಳಿಸಲಾಯಿತು. ಅದರಲ್ಲಿ:

1. ಶಾಂತರಾಮ್ ಹಾಗೂ ಗುರುಪ್ರಕಾಶ್ ರವರು ನಮ್ಮ ಕಾರ್ಯಕ್ಷೇತ್ರದಲ್ಲಿ ಬಳಕೆಯಾಗುತ್ತಿರುವ ಒಟ್ಟು ನೀರಿನ ಪ್ರಮಾಣ, ಅದಕ್ಕೆ ತಗಲುವ ವೆಚ್ಚ, ಅದರ ಸದ್ಬಳಕೆ ಇವುಗಳ ಬಗ್ಗೆ ಮಾಹಿತಿ ಒದಗಿಸುವುದು.
2. ಶ್ರೀಲಕ್ಷ್ಮಿ, ಮಂಜುಳ, ಲಾವಣ್ಯ ಇವರುಗಳು ಘೋಷ ವಾಕ್ಯಗಳನ್ನು ಸಿದ್ಧಪಡಿಸಿ ನೀಡುವುದು. 
3. ಮುನಿ ಆಂಜಿನಪ್ಪರವರು ಭೌಗೋಳಿಕವಾಗಿ ನೀರಿನ ಅಸಮತೋಲನದ ಬಗ್ಗೆ ಟಿಪ್ಪಣಿ ಒದಗಿಸುವುದು.
4. ಮಹೇಂದ್ರ ಮತ್ತು ಶಿವಕುಮಾರ್ ರವರು ಪರಿಸರದ ಕುರಿತ ಮಾಹಿತಿಯನ್ನೊಳಗೊಂಡ ಟಿಪ್ಪಣಿ ನೀಡುವುದು.
5. ರಾಮಗಣಪತಿ ಭಟ್ ರವರು ಮಾನವ ವಿಕೋಪಗಳ ಕುರಿತು ಮಾಹಿತಿ ನೀಡುವುದು.
6. ಪಿ.ಸೀನ ರವರಿಗೆ ನೀರಿನ ಸದ್ಬಳಕೆ ಕುರಿತು ಹಾಡನ್ನು ಬರೆದು, ರಾಗಸಂಯೋಜಿಸುವುದು.
7. ಮಂಜು ಮತ್ತು ಗುರುಸ್ವಾಮಿ ಇವರುಗಳಿಗೆ ಸಮನ್ವಯ ಕಾರ್ಯ....
-ಹೀಗೆ ಕಾರ್ಯ ಹಂಚಿಕೆ ಮಾಡಲಾಯಿತು ಮತ್ತು ಸಭೆಗೆ ಗೈರು ಹಾಜರಾದ ಉಳಿದ ಸದಸ್ಯರೂ ಸಹ ಮೇಲಿನ ಯಾವುದೇ ಅಥವಾ ಎಲ್ಲಾ ವಿಷಯಗಳ ಬಗ್ಗೆ ತಮ್ಮ ಮಾಹಿತಿ / ಟಿಪ್ಪಣಿಯನ್ನು ತಂಡದ ಸದಸ್ಯರಾದ ಮಂಜು, ಪರಶುರಾಮ್ ರವರಿಗೆ ಮುಖೇನ / ಇ-ಮೇಲ್ / ಲಿಖಿತ / ದೂರವಾಣಿ ಮೂಲಕ ರವಾನಿಸುವುದು.
         ನಂತರ ಪರಶುರಾಮ್ ರವರು ಸಿದ್ಧಪಡಿಸಿದ್ದ 'ಮನನ' ತಂಡದ ಚಿಹ್ನೆ / ಲೋಗೋ ವನ್ನು ಎಲ್ಲರಿಗೂ ತೋರಲಾಗಿ ಅದರ ಬಗ್ಗೆಯೂ ಸಹ ಅಭಿಪ್ರಾಯಗಳನ್ನು ನೀಡುವಂತೆ ಕೋರಲಾಯಿತು. 
         ಈ ಎಲ್ಲಾ ಕ್ರಿಯೆಗಳನ್ನು ಮುಂದಿನ ಶುಕ್ರವಾರ ಅಂದರೆ ದಿನಾಂಕ: 15.4.2011ಕ್ಕೆ ಅಂತ್ಯಗೊಳ್ಳುವಂತೆ ಮಾನದಂಡವನ್ನು ವಿಧಿಸಿ, ಎಲ್ಲಾ ಸದಸ್ಯರು ಇದಕ್ಕೆ ಸ್ಪಂದಿಸುವಂತೆ ಸೂಚಿಸಲಾಯಿತು. 'ನೀರಿನ ಸದ್ಬಳಕೆ'ಯ ಕಾರ್ಯಕ್ರಮವನ್ನು ಒಂದು ಆಂದೋಲನವನ್ನಾಗಿ ನಮ್ಮ ಕಾರ್ಯಕ್ಷೇತ್ರದಲ್ಲಿ ರೂಪುಗೊಳಿಸುತ್ತಿದ್ದು, ಇದಕ್ಕೆ ಎಲ್ಲರೂ ಸಕ್ರಿಯರಾಗಿ ಭಾಗವಹಿಸುವಂತೆ ಕೋರಿ, ಸಭೆಯಲ್ಲಿ ಹಾಜರಿದ್ದ ಮಂಜುಳ, ಶ್ರೀಲಕ್ಷ್ಮಿ, ಲಾವಣ್ಯ, ಉಷಾ, ಮುನಿಆಂಜಿನಪ್ಪ, ಶಿವಕುಮಾರ್, ಸೀನು, ರಾಮಗಣಪತಿಭಟ್, ಪರಶುರಾಮ್, ಮಂಜು, ಶಾಂತರಾಮ್, ಗುರುಪ್ರಕಾಶ್, ಗುರುಸ್ವಾಮಿ ಇವರುಗಳಿಗೆ ವಂದಿಸಿ ಸಭೆಯನ್ನು ಮುಕ್ತಾಯಗೊಳಿಸಲಾಯಿತು.



-ಮನನ ಪರವಾಗಿ

No comments:

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago