ತುಂಬಾ ದಿನಗಳ ಬಿಡುವಿನ ನಂತರ ಇಂದು ಅಂದ್ರೆ ದಿನಾಂಕ 26/02/2011ರ ಅಪರಾಹ್ನ 'ಮನನ' ತಂಡದ ಕೆಲವೇ ಕೆಲವು ಮಂದಿ ಸದಸ್ಯರು ಸಭೆ ಸೇರಿಕೊಂಡಿದ್ವಿ. ರೇವಪ್ಪನನ್ನು ಸಚಿವಾಲಯದಿಂದ ಬೀಳ್ಕೊಟ್ಟ ನಂತರ ಇದೇ ಪ್ರಥಮ ಬಾರಿಗೆ ಮನನದ ಸದಸ್ಯರು ಒಟ್ಟಿಗೆ ಸೇರಿದ್ವಿ. ಒಂದು ಕಾಲದಲ್ಲಿ (ಅಂದ್ರೆ ಕೆಲವು ತಿಂಗಳುಗಳ ಹಿಂದೆ ಅಷ್ಟೆ ) ಬಿರುಸಿನ ಚರ್ಚೆ ನಡೆಯುತ್ತಿದ್ದ ನಮ್ಮ ಮನನ ತಂಡದಲ್ಲಿ ಇತ್ತೀಚೆಗೆ ಅಂತಹ ಚರ್ಚೆಗಳು ನಡೆಯದೆ ತುಂಬಾ ದಿನಗಳಾದ್ದರಿಂದ ಮತ್ತೆ ಹೊಸ ಹೊಸ ವಿಚಾರಗಳನ್ನು ಎತ್ತಿಕೊಂಡು ನೀರಸಗೊಂಡಿರುವ 'ಮನನ'ದ ಮಂಥನಕ್ಕೊಂದು ಬಿರುಸು ತರಬೇಕೆಂಬುದು ನಮ್ಮ ಉದ್ದೇಶ. ಅದಕ್ಕಾಗಿಯೇ ಪ್ರತೀ ಶನಿವಾರ ಸೇರಬೇಕೆಂಬಂತಿದ್ದ ಸಭೆಯ ವೇಳಾ ಪಟ್ಟಿಯನ್ನು ಸ್ವಲ್ಪ ಬದಲಾಯಿಸಿ ತಿಂಗಳಿಗೆ ಎರಡು ಬಾರಿ (ಒಂದು ಶನಿವಾರ ಬಿಟ್ಟು ಇನ್ನೊಂದು ಶನಿವಾರ) ಸಭೆ ಸೇರಬೇಕೆಂಬ ನಿರ್ಧಾರ ತಳೆದಿದ್ದೇವೆ. ಆದರೆ ಇದು ಮುಂದಿನ ಮಾರ್ಚ್ ನಿಂದ ಅನ್ವಯವಾಗುತ್ತೆ. ಮುಂದಿನ ತಿಂಗಳ ಪ್ರಥಮ ಶನಿವಾರದಂದು ಮಧ್ಯಾಹ್ನ 1-45 ಕ್ಕೆ ಸಚಿವಾಲಯದ ಕ್ಲಬ್ ನಲ್ಲಿ ಮನನದ ಸಭೆ ಜರುಗಲಿದೆ. ಎಲ್ಲರೂ ತಪ್ಪದೇ ಭಾಗವಹಿಸಿ. ಹಳಬರೂ ಬನ್ನಿ... ಹೊಸಬರನ್ನೂ ಕರೆತನ್ನಿ..
ಅಯ್ಯೋ ಇದೇನ್ರೀ ತಲೆ ಬರಹ ಏನೋ ಸ್ವಾರಸ್ಯ ಅಂತ ಕೊಟ್ಕೊಂಡು ಒಳ್ಳೆ ಜಾಹಿರಾತು ತರ ಬರಿದಿದೀರಾ ಅಂತ ನೀವು ಅನ್ಕೊಂಡಿರಬಹುದು ಅಲ್ವೇ...? ನಿಜ ಮೇಲೆ ನಾನು ಬರೆದಿದ್ದು ಒಂಥರಾ ಜಾಹಿರಾತು ನೇ.. ಸಚಿವಾಲಯದ ಆಸಕ್ತ ಸಹೋದ್ಯೋಗಿಗಳು ಒಗ್ಗೂಡಿ ಶನಿವಾರಗಳಂದು ಊಟದ ಸಮಯದಲ್ಲಿ ಸ್ವಲ್ಪ ಬಿಡುವು ಮಾಡಿಕೊಂಡು, ಸಾಹಿತ್ತಿಕ, ಸಾಮಾಜಿಕ, ಹಾಗೂ ಇನ್ನಿತರೆ ವಿಷಯಗಳ ಬಗ್ಗೆ ಆರೋಗ್ಯಕರ ಚರ್ಚೆನಡೆಸಲು ಯೋಜಿಸಿರುವಂತಹ 'ಮನನ' ದ ಸಭೆಗೆ ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಆಸಕ್ತರು ಬರಬೇಕು ಎಂಬ ಪುಟ್ಟ ಹಂಬಲ ಮನದಲ್ಲಿ ಇದ್ದಿದ್ದರಿಂದ ಜಾಹಿರಾತು ತರಾನೇ ಬರೆದಿದೀನಿ... ಮತ್ತೆ ಹೇಳ್ತಿದೀನಿ ಈಗಾಗಲೇ ಸದಸ್ಯರಾದವರು ತಪ್ಪದೇ ಬನ್ನಿ... ಬರುವಾಗ ಆಸಕ್ತಿ ಇರುವವರನ್ನು ನಿಮ್ಮೊಡನೆ ಕರೆತನ್ನಿ...
ಇವತ್ತು ಸ್ವಾರಸ್ಯ ಏನು ನಡೀತು ಅಂದ್ರೆ. ಮಧ್ಯಾಹ್ನ ಸಭೆಯನ್ನು ಮುಗಿಸಿ ನಾನು, ಮಂಜುನಾಥ್, ಗುರುಪ್ರಕಾಶ್, ರಮೇಶ್ ಎಲ್ರೂ ಒಟ್ಟಿಗೇ ಬರ್ತಾ ಇದ್ವಿ. (ಕೆಲವರು ಆಗಲೇ ಮುಂದೆ ಹೋಗಿದ್ರು). ನನಗೆ ಸ್ವಲ್ಪ ನೆಗಡಿಯಾಗಿ ಮುಖ ಬಾಡಿದಂತಿತ್ತು. ಅಲ್ಲದೆ ತುಂಬಾದಿನಗಳಿಂದ ನಾನು ಇವರಾರಿಗೂ ದರ್ಶನ ಕೊಟ್ಟಿರಲಿಲ್ಲ. ಇದನ್ನು ಸೂಕ್ಷ್ಮವಾಗಿ ಗುರುಪ್ರಕಾಶ್ ಗಮನಿಸಿದರು ಅನ್ಸುತ್ತೆ..
(ಅಷ್ಟರಲ್ಲಿ ರಸ್ತೆ ಅಡ್ಡ ಬಂತು,, ಅಲ್ಲಲ್ಲ ರಸ್ತೆಗೆ ನಾವು ಬಂದ್ವಿ ವಾಹನಗಳು ಅಡ್ಡ ಬಂದ್ವು ರಸ್ತೆ ದಾಟಿ ಎಂ.ಎಸ್. ಬಿಲ್ಡಿಂಗ್ ಕಡೆ ಹೆಜ್ಜೆ ಹಾಕಿದೆವು. ಇನ್ನೂ ಸ್ವಲ್ಪ ಹೊತ್ತು ಮಾತಾಡ್ತಾ ನಿಂತಿದ್ರೆ ಇನ್ನೂ ಆನೇಕ ಸಂಗತಿಗಳು ಹೊರಬರ್ತಿದ್ದುವೇನೋ..!!!??)
ಪರಶು..,
ಅಯ್ಯೋ ಇದೇನ್ರೀ ತಲೆ ಬರಹ ಏನೋ ಸ್ವಾರಸ್ಯ ಅಂತ ಕೊಟ್ಕೊಂಡು ಒಳ್ಳೆ ಜಾಹಿರಾತು ತರ ಬರಿದಿದೀರಾ ಅಂತ ನೀವು ಅನ್ಕೊಂಡಿರಬಹುದು ಅಲ್ವೇ...? ನಿಜ ಮೇಲೆ ನಾನು ಬರೆದಿದ್ದು ಒಂಥರಾ ಜಾಹಿರಾತು ನೇ.. ಸಚಿವಾಲಯದ ಆಸಕ್ತ ಸಹೋದ್ಯೋಗಿಗಳು ಒಗ್ಗೂಡಿ ಶನಿವಾರಗಳಂದು ಊಟದ ಸಮಯದಲ್ಲಿ ಸ್ವಲ್ಪ ಬಿಡುವು ಮಾಡಿಕೊಂಡು, ಸಾಹಿತ್ತಿಕ, ಸಾಮಾಜಿಕ, ಹಾಗೂ ಇನ್ನಿತರೆ ವಿಷಯಗಳ ಬಗ್ಗೆ ಆರೋಗ್ಯಕರ ಚರ್ಚೆನಡೆಸಲು ಯೋಜಿಸಿರುವಂತಹ 'ಮನನ' ದ ಸಭೆಗೆ ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಆಸಕ್ತರು ಬರಬೇಕು ಎಂಬ ಪುಟ್ಟ ಹಂಬಲ ಮನದಲ್ಲಿ ಇದ್ದಿದ್ದರಿಂದ ಜಾಹಿರಾತು ತರಾನೇ ಬರೆದಿದೀನಿ... ಮತ್ತೆ ಹೇಳ್ತಿದೀನಿ ಈಗಾಗಲೇ ಸದಸ್ಯರಾದವರು ತಪ್ಪದೇ ಬನ್ನಿ... ಬರುವಾಗ ಆಸಕ್ತಿ ಇರುವವರನ್ನು ನಿಮ್ಮೊಡನೆ ಕರೆತನ್ನಿ...
ಇವತ್ತು ಸ್ವಾರಸ್ಯ ಏನು ನಡೀತು ಅಂದ್ರೆ. ಮಧ್ಯಾಹ್ನ ಸಭೆಯನ್ನು ಮುಗಿಸಿ ನಾನು, ಮಂಜುನಾಥ್, ಗುರುಪ್ರಕಾಶ್, ರಮೇಶ್ ಎಲ್ರೂ ಒಟ್ಟಿಗೇ ಬರ್ತಾ ಇದ್ವಿ. (ಕೆಲವರು ಆಗಲೇ ಮುಂದೆ ಹೋಗಿದ್ರು). ನನಗೆ ಸ್ವಲ್ಪ ನೆಗಡಿಯಾಗಿ ಮುಖ ಬಾಡಿದಂತಿತ್ತು. ಅಲ್ಲದೆ ತುಂಬಾದಿನಗಳಿಂದ ನಾನು ಇವರಾರಿಗೂ ದರ್ಶನ ಕೊಟ್ಟಿರಲಿಲ್ಲ. ಇದನ್ನು ಸೂಕ್ಷ್ಮವಾಗಿ ಗುರುಪ್ರಕಾಶ್ ಗಮನಿಸಿದರು ಅನ್ಸುತ್ತೆ..
ಗುರುಪ್ರಕಾಶ್: "ಯಾಕ್ರಿ ಡಲ್ ಆಗಿದೀರಾ ? ನಿಮ್ ಫ್ರೆಂಡ್ (ರೇವಪ್ಪ) ಹೋದ್ರು ಅಂತ ನೀವೂ ಡಲ್ ಆಗಿಬಿಟ್ಟಿದೀರಿ"
ನಾನು: ಹೆ ಹೆ ಹ ಹಾ.. ಗೇ.. ನಿಲ್ಲ
ಮಂಜುನಾಥ್: "ಹಾಗೆಲ್ಲಾ ಡಲ್ ಆಗ ಬಾರದ್ರೀ... ನಮ್ ಬ್ಯಾಚಿನ ಎಷ್ಟೋ ಹುಡುಗೀರೇ ಬಿಟ್ಟೋದ್ರು ಗೊತ್ತಾ...ಆದ್ರೂ !?"
ಗುರುಪ್ರಕಾಶ್: ಹೌದ್ರೀ.. ನಮ್ ಬ್ಯಾಚಿನ ಎಲ್ಲಾ ಹುಡುಗೀರಿಗೂ ನಮ್ಮೆದುರೇ ಮದುವೆ ಆಯ್ತು..!!
ನಾನು: ಹ್ಹ ಹ್ಹ ಹಹ್
ಮಂಜುನಾಥ್ : (ಗುರು ಪ್ರಕಾಶ್ ಗೆ) ನಿಮ್ ಮದುವೇನೂ ನನ್ನೆದುರೇ ಆಗಿದ್ದು ಸುಮ್ನಿರ್ರೀ...
(ಅಷ್ಟರಲ್ಲಿ ರಸ್ತೆ ಅಡ್ಡ ಬಂತು,, ಅಲ್ಲಲ್ಲ ರಸ್ತೆಗೆ ನಾವು ಬಂದ್ವಿ ವಾಹನಗಳು ಅಡ್ಡ ಬಂದ್ವು ರಸ್ತೆ ದಾಟಿ ಎಂ.ಎಸ್. ಬಿಲ್ಡಿಂಗ್ ಕಡೆ ಹೆಜ್ಜೆ ಹಾಕಿದೆವು. ಇನ್ನೂ ಸ್ವಲ್ಪ ಹೊತ್ತು ಮಾತಾಡ್ತಾ ನಿಂತಿದ್ರೆ ಇನ್ನೂ ಆನೇಕ ಸಂಗತಿಗಳು ಹೊರಬರ್ತಿದ್ದುವೇನೋ..!!!??)
ಪರಶು..,
No comments:
Post a Comment