ದಿನಾಂಕ: 17.7.2010ರಂದು ನಡೆದ ಮನನ ತಂಡದ ಸಭೆಯ ನಡವಳಿಗಳು.
ನಿಕಟಪೂರ್ವ ಸಭೆಯಲ್ಲಿ ನಾವು ಚರ್ಚಿಸಿದಂತೆ ನಾಲ್ಕು ತಂಡಗಳ ಗುಂಪು ಮಾಡಿ ಅದರಲ್ಲಿ ಎರಡು ತಂಡಗಳು ವಿಷಯವನ್ನು ಮಂಡಿಸುವುದು ಮತ್ತೆರೆಡು ತಂಡಗಳು ಅದಕ್ಕೆ ಪ್ರತಿಕ್ರಿಯೆಗಳನ್ನು ನೀಡುವುದಾಗಿ ನಿರ್ಣಯಿಸಿದಂತೆ ಇಂದಿನ ಸಭೆಯಲ್ಲಿ ಜಯಸುಧಾರವರ ನೇತೃತ್ವದ ತಂಡ 'ಸೇವಾ ವಿಷಯ'ದಲ್ಲಿ 'ರಜೆ ಸೌಲಭ್ಯ'ದ ಬಗ್ಗೆ ನಮಗೆ ತಿಳಿಸಿದರು. ತಂಡದ ಸದಸ್ಯರಾದ ಗುರುಪ್ರಕಾಶ್ ವಿಷಯವನ್ನು ಅತ್ಯಂತ ಪ್ರಬುದ್ಧವಾಗಿ ಮಾಹಿತಿಯುಕ್ತವಾಗಿ ಮತ್ತು ಲವಲವಿಕೆಯಿಂದ ಮಂಡಿಸಿದ್ದು / ತಿಳಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಅವರಂತೆ ಜ್ಯೋತಿಶ್ರೀರವರು ಮತ್ತು ಜಯಸುಧಾರವರು ಸಹ ಪೂರಕ ಮಾಹಿತಿಗಳನ್ನು ಒದಗಿಸಿದ್ದು ಒಟ್ಟಾರೆಯಾಗಿ ಇಡೀ ತಂಡ ಹಿಂದಿನ ಸಭೆಯ ನಿರ್ಣಯಗಳನ್ನು ಚಾಚೂತಪ್ಪದೆ ಪಾಲಿಸಿ ಪೂರ್ಣ ಹಾಜರಾತಿ ನೀಡಿ, ಟಿಪ್ಪಣಿಯನ್ನು ಎಲ್ಲರಿಗೂ ನೀಡಿ ಜವಾಬ್ದಾರಿಯುತವಾಗಿ ಮಿಕ್ಕ ತಂಡಗಳಿಗೂ ಮಾದರಿ ಎನ್ನುವಂತೆ ವಿಷಯವನ್ನು ಮಂಡಿಸಿದರು. ಜೊತೆಗೆ ತಂಡದ ಸದಸ್ಯರಾದ ಮಹೇಂದ್ರ, ದತ್ತರಾಜ್ , ರಾಮಗಣಪತಿ ಭಟ್ ಹಾಗೂ ಹರೀಶ್ ಬಿ.ಕೆ. ಇವರುಗಳು ಸಹಕರಿಸಿದ್ದು ಅವರ ತಂಡದ 'ಸ್ಪಂದನ' ನಾಮಧೇಯಕ್ಕೆ ಪೂರಕವಾಗಿದ್ದು. ಸ್ಪಂದನ ತಂಡಕ್ಕೆ ಮನನ ಆಭಾರಿಯಾಗಿರುತ್ತದೆ.
2ನೇ ವಿಷಯವನ್ನು ಆರ್.ಕೆ. ರಮೇಶ್ ನೇತೃತ್ವದ ಪರಶುರಾಮ.ಕೆ., ಗೌರಿ, ಹುಲಿಯಪ್ಪ, ಕಾ.ವೆಂ.ಶ್ರೀನಿವಾಸಾಚಾರಿ ಹಾಗೂ ಪಿ.ಸೀನು ಇವರನ್ನೊಳಗೊಂಡ ತಂಡದವರು 'ಗೋ ಹತ್ಯೆ ನಿಷೇಧ' ಕಾಯ್ದೆಯನ್ನು ಮಂಡಿಸಿದರು. ಇದಕ್ಕೆ ಪೂರಕವಾಗಿಗೆ ಮಂಜುನಾಥ್ ರವರು ಲೇ.ಎನ್ . ಕೆ. ಹನುಮಂತಯ್ಯರವರ 'ಗೋವುತಿಂದು ಗೋವಿನಂತಾಗುವೆ' ಕವನವನ್ನು ಓದಿದರು. 'ಗೋ ಹತ್ಯೆ ನಿಷೇಧ' ಕಾಯ್ದೆಯನ್ನು ರಮೇಶ್ ಮತ್ತು ಪರಶುರಾಮ್ ಈ ವಿಷಯವನ್ನು ಮಂಡಿಸಿ ಹೆಚ್ಚು ಚರ್ಚೆಗೆ ಅವಕಾಶವಾಗುವ ಹಲವಾರು ಅಂಶಗಳನ್ನು ನೀಡಿದರು. ರಮೇಶ್ ರವರು ಎಡ / ಬಲ ಪಂಥೀಯವಾಗಿ ಚರಿತ್ರಾತ್ಮಕವಾಗಿ ಹಾಗೂ ಇಂದಿನ ರಾಜಕೀಯವಾಗಿ ವಿಷಯದ ಗಂಭೀರತೆಯನ್ನು ತಿಳಿಸಿದರು. ಪರಶುರಾಮ್ ರವರು ಕಾಯ್ದೆಯನ್ನು ವಿವರಿಸಿದರು.
ಈ ನಿಟ್ಟಿನಲ್ಲಿ ಸುದೀರ್ಘವಾಗಿ ಚರ್ಚಿಸುವ ಅವಶ್ಯಕತೆಯಿರುವುದರಿಂದ ಮುಂದಿನ ಸಭೆಯಲ್ಲಿಯೂ ಇದೇ ವಿಷಯದ ಬಗ್ಗೆ ಪ್ರತಿಯೊಬ್ಬರೂ ವಿಷಯದ ಬಗ್ಗೆ ತಮ್ಮ ತಮ್ಮ ಅಭಿಪ್ರಾಯಗಳನ್ನು ತಿಳಿಸುವಂತೆ ಒಮ್ಮತದ ನಿರ್ಣಯದೊಂದಿಗೆ ಸಭೆಯನ್ನು ದಿನಾಂಕ: 24.7.2010ಕ್ಕೆ ಮುಂದೂಡಲಾಯಿತು.
ಅಂದಿನ ಸಭೆಗೆ ಬರುವ ತಂಡಗಳು ತಮ್ಮ ತಂಡಕ್ಕೊಂದು ಹೆಸರು ನೀಡುವಂತೆಯೂ ಹಾಗೂ ಗೈರು ಹಾಜರಾಗಿರುವ ಸದಸ್ಯರನ್ನು ಕರೆತರುವ ಹೊಣೆಗಾರಿಕೆಯನ್ನು ತಂಡದ ಮಾನಿಟರ್ ಗಳಿಗೆ ವಹಿಸಿ ಸಭೆಯನ್ನು ಮುಕ್ತಾಯ ಮಾಡಲಾಯಿತು.
No comments:
Post a Comment