ಕೆಲವು ದಿನಗಳ ಹಿಂದೆ ನನಗೊಂದು e-mail ಸಂದೇಶ ಬಂದಿತ್ತು. ಅದು ಈ ಕೆಳಕಂಡಂತಿತ್ತು.
"ಸಿನಿಮಾ ನೋಡಲೆಂದು ಯುವತಿಯೋರ್ವಳು ಥಿಯೇಟರಿಗೆ ಬಂದು ಕುರ್ಚಿಯಲ್ಲಿ ಕುಳಿತಳು. ಸ್ವಲ್ಪ ಹೊತ್ತಿಗೆ ಅವಳಿಗೆ ಸೂಜಿಯಿಂದ ಚುಚ್ಚಿದ ಅನುಭವ ಆಯಿತು. ಅವಳು ಕುರ್ಚಿಯ ಕೆಳಗೆ ಬಗ್ಗಿ ನೋಡಿದಾಗ ಸೂಜಿಗೆ ಅಂಟುಕೊಂಡಂತೆ ಒಂದು ಸಂದೇಶ ಇತ್ತು. ಅದರಲ್ಲಿ "you have just been infected with HIV +ve " ಎಂದು ಬರೆದಿತ್ತು. "
ಈ ರೀತಿಯ ಹಲವಾರು ಸನ್ನಿವೇಶಗಳನ್ನು "Disease control centre" ಪ್ಯಾರೀಸ್ ಸಂಸ್ಥೆಯು ವರದಿ ಮಾಡುತ್ತಾ, ಇಂತಹ ಸಂದರ್ಭಗಳಲ್ಲಿ ಬಳಸಲಾದ ಎಲ್ಲಾ ಸೂಜಿಗಳನ್ನು ಪರೀಕ್ಷಿಸಿದಾಗ ಎಲ್ಲವೂ HIV +ve ಸೂಜಿಗಳಾಗಿದ್ದವು.
ಇದೇ ರೀತಿಯ ಸನ್ನಿವೇಶವನ್ನು ದೆಹಲಿಯ ಡಾಕ್ಟರೊಬ್ಬರು ವಿವರಿಸುತ್ತಾ, ಕೆಲವೇ ದಿನಗಳಲ್ಲಿ ಮದುವೆಯಾಗಬೇಕಾಗಿದ್ದ ತರುಣಿಯೊಬ್ಬಳು ಇದೇ ರೀತಿ ಹೆಚ್.ಐ.ವಿ. ಸೂಜಿಗೆ ಒಳಗಾದಾಗ ಆ ವೈದ್ಯರು ಅವರ ಕುಟುಂಬದವರಿಗೆ ಹಾಗೂ ಆ ತರುಣಿಗೆ ಹೆಚ್.ಐ.ವಿ. ರೋಗಾಣುಗಳು ಹರಡಲು 6 ತಿಂಗಳು ಬೇಕೆಂದೂ ಸರಿಯಾದ ಔಷಧೋಪಚಾರ ತೆಗೆದುಕೊಂಡಲ್ಲಿ ರೋಗಿಯು ಹೆಚ್ಚುವರ್ಷ ಬದುಕಬಹುದೆಂದು ಮನದಟ್ಟು ಮಾಡಿದರು. ಆದರೆ ತರುಣಿ ಅದಾದ 4 ತಿಂಗಳಲ್ಲೇ ಮರಣ ಹೊಂದಿದಳು, ಆದರೆ ಹೆಚ್.ಐ.ವಿ. ಯಿಂದಲ್ಲ, ಬದಲಾಗಿ "Shock thought" ನಿಂದಾಗಿ.
ಅಲ್ಲದೇ ಇಂತಹ ಸನ್ನಿವೇಶಗಳು Cash Dispensers at Public Banking Machines ( i.e. ATMs ) ಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆಯಂತೆ.
ಆದ್ದರಿಂದ, ಸಾರ್ವಜನಿಕ ಸ್ಥಳಗಳಲ್ಲಿ ಆದಷ್ಟು ಎಚ್ಚರಿಕೆಯಿಂದ ಇರಬೇಕು. rest God help! ದಯವಿಟ್ಟು ಇದನ್ನು ಇತರರಿಗೆ ತಿಳಿಸುವುದಕ್ಕೆ ಕೆಲವೇ ಸೆಕೆಂಡುಗಳ ಕಾಲಗಳನ್ನು ಮೀಸಲಿರಿಸಿ, ಅರಿವನ್ನು ಮೂಡಿಸಿ.
- ಎಂ.ಬಿ.ಲಾವಣ್ಯ
2 comments:
ಖಂಡಿತ. ಇಂತಹ ಸಾಮಾಜಿಕ ಅರಿವು ಮೂಡಿಸುವ ಕೆಲಸ ಮಾಡುವುದು ನಾಗರೀಕರಾದ ನಮ್ಮೆಲ್ಲರ ಕರ್ತವ್ಯ. ನಾವು ಮಾಡಿದ ತಪ್ಪಿಗೆ ನಾವು ಶಿಕ್ಷೆ ಅನುಭವಿಸುವುದು ಸರಿ. ಆದರೆ ನಮ್ಮದಲ್ಲದ ತಪ್ಪಿಗೆ ಬೇರೆಯವರ ಕುಚೋದ್ಯದಿಂದಾಗೋ ಅಥವಾ ಬೇರೆ ಇನ್ನಾವುದೋ ಕಾರಣಕ್ಕಾಗಿ ಶಿಕ್ಷೆ ಅನುಭವಿಸುವುದು ನಿಜಕ್ಕೂ ದುರಂತವೇ ಸರಿ. ಎಷ್ಟೋ ಸಂದರ್ಭಗಳಲ್ಲಿ ಇಂತಹ ಮಾರಕ ರೋಗಗಳಿಗೆ ತುತ್ತಾದಾಗ ರೋಗಿಯ ಮನೋಸ್ಥೆರ್ಯ ಕುಗ್ಗುವುದರಿಂದಲೇ ಎಷ್ಟೋ ಜನ ಅವಧಿಗೂ ಮೊದಲೇ ಸಾಯುತ್ತಿರುವುದು ಕಂಡುಬರುತ್ತಿದೆ. ಇದು ಎಷ್ಟೋ ವೈದ್ಯರ ಅಭಿಪ್ರಾಯವೂ ಹೌದು. ಒಬ್ಬ ರೋಗಿಯ ಮನೋಸ್ಥೆರ್ಯ ಹೇಗೆ ಅವನ ಜೀವಿತಾವಧಿಯನ್ನು ಹೆಚ್ಚಿಸಬಲ್ಲದು ಎಂಬುದಕ್ಕೆ ಇದೇ ಏಡ್ಸ್ ಎಂಬ ಮಹಾಮಾರಿಗೆ ತುತ್ತಾಗಿ ಕೆಲವು ವರ್ಷಗಳ ಹಿಂದೆಯಷ್ಟೇ ನಿಧನರಾದ ಶ್ರೀಮತಿ ವೀಣಾಧರಿ. ಈಕೆಯ ಮನೋಸ್ಠೆರ್ಯ ಹಾಗೂ ಕ್ರಿಯಾಶೀಲತೆ ಇವಳಂತೆ ಇಂತಹ ಮಹಾಮಾರಿಗೆ ತುತ್ತಾಗಿದ್ದ ಎಷ್ಟೋ ಜನರಿಗೆ ಸ್ಪೂರ್ತಿಯ ಸೆಲೆಯಾಗಿತ್ತು. ಅವರ ಬರಡಾದ ಬಾಳಿಗೆ ಆಶಾಕಿರಣವಾಗಿತ್ತು. ಹಾಗಾಗಿ ಒಬ್ಬ ರೋಗಿಯು ಅವರ ಮನೋಸ್ಥೆರ್ಯವನ್ನು ಹೆಚ್ಚಿಸಿಕೊಳ್ಳುವಲ್ಲಿ ಅವನ ಮನಸ್ಸಿನ ಮನೋಭಾವ ಬಹಳ ಮುಖ್ಯ. ಕಾರಣ ರೋಗದ ಜೊತೆ ಹೋರಾಡುವವನು ಅವನೇ ಹೊರತು ಬೇರೆಯವರಲ್ಲ. ನಾವು ಅವರಿಗೆ ನೈತಿಕ ಬೆಂಬಲ ನೀಡಬಹುದಷ್ಟೆ.
ಸುಧಾ.
thanks for creating awareness regarding this issue.
-manju
Post a Comment