ನಮ್ಮ ಬ್ಲಾಗ್ ನ್ನ ನಿತ್ಯ ನೂತನ ಮಾಡೋ ಯೋಜನೆಗಳು ನನ್ನಹತ್ರ ಸಾಕಷ್ಟು ಇದ್ದಾವೆ ....
ಅದಕ್ಕೆ ನಿಮ್ಮ ಕಾಣಿಕೆ ಇಲ್ದೆ ಇದ್ರೆ ಏಕತಾನತೆ ಕಾಣಿಸ್ಕೊಳ್ಳುತ್ತೆ...
ರವಿಯಂತೆ ಪ್ರತಿ ದಿನ ಹೊಸತಾಗಿ ಬೆಳಗುತ್ತಾ ಹೊಸ ಹೊಸ ವಿಷಯ ಕಲಿಯುತ್ತ ಸಾಗೋದು : ಬ್ಲಾಗ್ ನ ಆಶಯ
ಮಂಜಪ್ಪ , ಶೀತಲ್ ಹೊಸ ಮುಖಗಳಾಗಿ ಮುಂದಿನ ದಿನಗಳಲ್ಲಿ ಕಾಣಿಸಿಕೊಳ್ಳುವ ಭರವಸೆ ನೀಡಿದ್ದಾರೆ ...
ಮೂರ್ತಿಗಳು ಪದ್ಯಗಳ ಜೊತೆಗೆ ಗದ್ಯಕ್ಕೂ ಕೈ ಹಾಕುವ ಸೂಚನೆ ನೀಡಿದ್ದಾರೆ ....
ಯಶವಂತ್ ತನ್ನ ಹೊಸ ಲೇಖನದೊಂದಿಗೆ ತಯಾರಾಗಿದ್ದಾನೆ ......
ನೀಹಾರಿಕಾ ತಮ್ಮ ಪ್ರತಿಭೆಯನ್ನ ಇನ್ನೊಂದು ಪ್ರಾಕಾರದಲ್ಲಿ ಪ್ರಯತ್ನಿಸಲು ಅವಕಾಶಕ್ಕಾಗಿ ಕಾಯ್ತಿದಾರೆ ..........
ಶಬ್ದಗಳನ್ನ ಹುಡುಕಿ ಹುಡುಕಿ COMMENT ಬರೆಯುವ ಮದುಚಂದ್ರ ತಾವೂ ಅಖಾಡ ಕ್ಕಿಳಿಯುವ ಇರಾದೆ ವ್ಯಕ್ತಪಡಿಸಿದ್ದಾರೆ ..
ಒಮ್ಮೆ ಬಂದು ಮರೆಯಾದ ಸಿದ್ದೆಗೌಡರು , ಇನ್ನೇನು ನಮ್ಮ ಜೊತೆ ಭಾಳ ದಿನ ಇರೋದಿಲ್ಲ ....
{ ಅಂದ್ರೆ ಹಾಗಲ್ಲ ....Lecturer ಆಗಿ ಹೋಗ್ತಿದಾರಲ್ಲ ಹಾಗೆ }
ಇರೋವಷ್ಟು ದಿನ ಒಂದೆರಡು ಲೇಖನ ಬರೆದು ಹೋಗ್ಬೇಕು ಅಂತಿದಾರೆ ....
ಅಖಾಡ ಕ್ಕಿಳಿಯೋ ಮುಂಚಿನ ತಾಲೀಮಿನ ತರಹ ..
ಅವರಿಗೆ ಹೋಗೋ ಕಾಲೇಜಲ್ಲಿ ಸುಂದರವಾದ ವಿಧ್ಯಾರ್ಥಿ ಗಳನ್ನ ಆ ದೇವರು ಪಾಲಿಸಲಿ ...ಅಂತ ಪ್ರಾರ್ಥಿಸೋಣ.
ನಾನು ಅದಕ್ಕೆ IN TRAY ಒಂದನ್ನ ಪಕ್ಕದಲ್ಲಿ ನೀಡಬೇಕು ಅಂತಿದೇನೆ...ಅಂದ್ರೆ TRAY ಖಾಲಿ ಆಗ್ದೆ ಇರೋ ಹಾಗೆ ನೋಡ್ಕೊಳೋ ಜವಾಬ್ದಾರಿ ನಿಮ್ದು ..ಈ TRAY ನಲ್ಲಿ ನನ್ನ ಹತ್ರ ಪ್ರಕಟವಾಗದೆ ಉಳಿದಿರೋ ಬರವಣಿಗೆಗಳ ಸಂಖ್ಯೆ ಇರುತ್ತೆ ...ಅದನ್ನ ಐದಕ್ಕಿಂತ ಕೆಳಗಿಳಿಸೋದು ನಮ್ಮ ನಿತ್ಯ ನೂತನತೆಯ ತತ್ವಕ್ಕೆ ದ್ರೋಹ ಬಗೆದ ಹಾಗೆ ...!! ಇದನ್ನ ಅರಿತು ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಲೇಖನ ಕಳಿಸ್ತೀರಿ ಅಂತ ಕಾಯ್ತಿರ್ತೀನಿ ...
ನಿಮ್ಮವ
ರೇವಪ್ಪ
No comments:
Post a Comment