ಡಿಯರ್
ಸಚ್ಚಿ, ಯಶವಂತ್
'ಕಟ್ಟೆ ಮ್ಯಾಲಿನ ಮಾತಿನ ಬಗ್ಗೆ' ನಿಮ್ಮ ಪ್ರತಿಸ್ಪಂದನೆಗೆ ಅಭಿನಂದನೆ....
ನಿಮ್ಮ ಅಭಿಪ್ರಾಯಗಳ ಗ್ರಹಿಕೆಯಂತೆ ಇಲ್ಲಿನ ಪಾತ್ರದಾರಿಗಳು ನಮ್ಮ ವ್ಯವಸ್ಥೆಯನ್ನು,
ಸರ್ಕಾರವನ್ನು, ಜನಪ್ರತಿನಿಧಿಗಳನ್ನು ವಿಡಂಬಿಸಿ, ಹೀಗಳೆದು, ಜರಿದು
ಮಾತನಾಡಬೇಕೆಂಬುದು ನಿಮ್ಮ ಬಯಕೆಯೇನೋ ಅನಿಸುತ್ತಿದೆ. ನಮಗೆಲ್ಲಾ
ತಿಳಿದಿರುವಂತೆ ನಾವು ಮತ್ತು ನಮ್ಮ ಬ್ಲಾಗ್ ಈ ವ್ಯವಸ್ಥೆಯ ಒಳಗಿನ ಒಂದು ಭಾಗ
ಅಥವಾ ವ್ಯವಸ್ಥೆಯೊಳಗಿನ ಒಂದು ಕೊಂಡಿಯಂತಿದ್ದೇವೆ ಎನ್ನುವುದು ನನ್ನ ನಿಲುವು.
ನಾವೇನೇ ಮಾಡಿದರೂ ಅದು ಒಂದು ಚೌಕಟ್ಟಿನೊಳಗೇ ಇರಬೇಕೆಂಬ, ಒಂದು ಗುರುತರ
ಪರಿಧಿಯ ಎಲ್ಲೆಯೊಳಗೇ ಇರಬೇಕೆಂಬ ಉದ್ದೇಶವಿಟ್ಟುಕೊಂಡೇ ಬರೆಯಬೇಕೆಂಬ ಬಯಕೆ
ನನ್ನದು. ಸರ್ಕಾರದ ಹೊರಗಿದ್ದು, ಸರ್ಕಾರವನ್ನು, ತನ್ಮೂಲಕ ಚುಕ್ಕಾಣಿ ಹಿಡಿದವರನ್ನು
ಟೀಕಿಸುವುದು, ಹೀಗಳೆಯುವುದು ಸರಿ, ಆದರೆ ಸರ್ಕಾರದ ಒಳಗಿರುವ ಸರ್ಕಾರಿ
ನೌಕರರಾಗಿ ನಾವು ಹಾಗೆ ಮಾಡುವುದು ತರವಲ್ಲ. ದಯವಿಟ್ಟು ತಾವು ಇಂತಹ ಸೂಕ್ಷ್ಮ
ವಿಚಾರಗಳನ್ನು ಗಮನಿಸಿರುತ್ತೀರೆಂದು ಭಾವಿಸಿದ್ದೇನೆ...
ಅಷ್ಟಕ್ಕೂ ಅನೈತಿಕ, ಅಶ್ಲೀಲ ವ್ಯಂಗ್ಯ ವಿಡಂಬನೆ, ಸಂಭಾಷಣೆಗಳಿಂದ ಹೊರತಾದ ಒಂದು
ಆರೋಗ್ಯಕರ ಚರ್ಚೆ ನಡೆಸಬೇಕು. ಎಂಬ ಬಯಕೆ, ಪ್ರಯತ್ನ ಈ ದಾರಿಹೋಕನದು....
ನಿಮ್ಮ ಸಹಕಾರವಿರಲಿ...
ನಿಮ್ಮ ಪ್ರತಿಕ್ರಿಯೆಗಳು ಹೀಗೆ ಹರಿದು ಬರುತ್ತಿರಲಿ...
No comments:
Post a Comment