ನಾವು ಈ ಹಿಂದಿನ ಮನನ ಅಧ್ಯಯನ ಸಭೆಯಲ್ಲಿ ಚರ್ಚಿಸಿದಂತೆ 'ನೀರಿನ ಸದ್ಭಳಕೆ'ಯ ಕುರಿತು ಟಿಪ್ಪಣಿಯನ್ನು ಸಿದ್ಧಪಡಿಸಲಾಗಿದೆ. ಸಚಿವಾಲಯದ ಗ್ರಂಥಪಾಲಕರಾದ ಬನವಾಸಿ ಕೃಷ್ಣಮೂರ್ತಿಯವರೊಂದಿಗೆ ಚರ್ಚಿಸಿ ಅವರ ಸಲಹೆಗಳನ್ನು ಪಡೆದು ಹಾಗೂ ಸಿಆಸು.ಇಲಾಖೆಯ ಕಾರ್ಯಕಾರಿ ಶಾಖೆಯಲ್ಲಿನ ಮೇಲ್ವಿಚಾರಕಾದ ಶ್ರೀ ಲಕ್ಷ್ಮೀಕಾಂತ್ ರವರೊಂದಿಗೆ ಚರ್ಚಿಸಿ ನೀರಿನ ಮಹತ್ವ, ಬಳಕೆ ಹಾಗೂ ನಮ್ಮ ಕಾರ್ಯಕ್ಷೇತ್ರದಲ್ಲಿ ವೆಚ್ಚವಾಗುತ್ತಿರುವ ನೀರಿನ ಪ್ರಮಾಣ, ಅದಕ್ಕೆ ತಗಲುವ ವೆಚ್ಚ ಹಾಗೂ ಘೋಷವಾಕ್ಯಗಳನ್ನೊಳಗೊಂಡ ಸಂಕ್ಷಿಪ್ತವಾದ ಒಂದು ಪುಟದ ಟಿಪ್ಪಣಿಯನ್ನು ಸಿದ್ಧಪಡಿಸಿ, ಇದನ್ನು ಎಲ್ಲರಿಗೂ ಪ್ರಚುರ ಪಡಿಸುವ ನಿಟ್ಟಿನಲ್ಲಿ ದಿನಾಂಕ: 16.05.2011 ರಂದು ವಿಕಾಸಸೌಧದಲ್ಲಿ ಹಮ್ಮಿಕೊಳ್ಳಲಾಗಿದ್ದ 'ವಿರಾಮದ ವೇಳೆಯಲ್ಲಿ ವಿಚಾರ ವೇದಿಕೆ' ಕಾರ್ಯಕ್ರಮದಲ್ಲಿ (ಪ್ರೊ.ಕೃಷ್ಣೇಗೌಡರವರ ಕಾರ್ಯಕ್ರಮ) ಟಿಪ್ಪಣಿಯ ಪ್ರತಿಗಳನ್ನು ಮಾಡಿ ಎಲ್ಲರಿಗೂ ಹಂಚುವ ಕಾರ್ಯವನ್ನು ನಮ್ಮ ಮನನ ತಂಡದಿಂದ ನಿರ್ವಹಿಸಲಾಯಿತು.
'ಮನನ' ಸಿದ್ದಪಡಿಸಿ, ಪ್ರಚುರಪಡಿಸಿದ ಜೀವಸಂಕುಲದ ಸೆಲೆಯಾಗಿ ಜೀವದ್ರವ್ಯ ಉಳಿಸಿ ಕರಪತ್ರದ ಯಥಾಪ್ರತಿ ಕೆಳಗಿದೆ. ಇದನ್ನು ಎಲ್ಲರಿಗೂ ತಲುಪಿಸುವ ಜವಾಬ್ದಾರಿ ನಿಮ್ಮದೂ ಆಗಲಿ. ಜೀವಸಂಕುಲದ ಸೆಲೆಯಾಗಿ ಜೀವದ್ರವ್ಯ ಉಳಿಸಿ
ಮಾನ್ಯ ಸಹೋದ್ಯೋಗಿಗಳೇ..
ನೀರಿನ ರಕ್ಷಣೆ ಎಂಬುದು ಇವತ್ತು ನಮ್ಮ-ನಿಮ್ಮೆಲ್ಲರ ಹಾಗೂ ಮುಂದಿನ ಪೀಳಿಗೆಗಳ ಅಳಿವು-ಉಳಿವಿನ ಪ್ರಾಣಾಂತಿಕ ಪ್ರಶ್ನೆಯಾಗಿ ಮಾರ್ಪಟ್ಟಿದೆ. ಆದ್ದರಿಂದ ಕೆಳಗೆ ನೀಡಿರುವ ಅಂಕಿ ಅಂಶಗಳನ್ನು ಗಮನವಿಟ್ಟು ಓದಿ.
> ನಮ್ಮ ಈ ಭೂ ಮಂಡಲವು ಶೇ.70 ರಷ್ಟು ಭಾಗ ನೀರಿನಿಂದ ಆವೃತವಾಗಿದೆ.
> ಈ 70 ಭಾಗದ ನೀರಿನಲ್ಲಿ ಕುಡಿಯಲು ಯೋಗ್ಯವಾದ ಸಿಹಿನೀರು ಕೇವಲ 2.5 ರಷ್ಟು ಮಾತ್ರ!
> ಈ 2.5 ರಷ್ಟು ನೀರಿನಲ್ಲಿ ಶೇ.90 ಭಾಗ ಮಂಜುಗಡ್ಡೆಯ ರೂಪದಲ್ಲಿದೆ. ಈ ಮಂಜುಗಡ್ಡೆಯನ್ನು ಕರಗಿಸಿ ಸಿಹಿ ನೀರಾಗಿ ಪರಿವರ್ತಿಸುವುದೆಂದರೆ ಪ್ರಳಯಕ್ಕೆ ಸ್ವಯಂ ಆಹ್ವಾನವಿತ್ತಂತೆಯೇ!!
> ಹಾಗಾಗಿ ಇಡೀ ಜಗತ್ತಿನ ಪಶು, ಪಕ್ಷಿ, ಪ್ರಾಣಿ, ಕ್ರಿಮಿ ಕೀಟಾದಿ ಮನುಷ್ಯರೆಲ್ಲರ ಪ್ರಾಣಪೋಷಕವಾಗಿ ಲಭ್ಯವಿರುವ ಸಿಹಿನೀರಿನ ಪ್ರಮಾಣ -ದಯವಿಟ್ಟು ಗಮನಿಸಿ- ಕೇವಲ 0.26 ರಷ್ಟು ಮಾತ್ರ!!!
ನಮ್ಮ ಕಾರ್ಯಕ್ಷೇತ್ರದಲ್ಲಿ ನಾವು ಬಳಸುವ ನೀರಿನ ಪ್ರಮಾಣದ ತಿಂಗಳವಾರು ಅಂಕಿ-ಅಂಶ ಇಂತಿದೆ.
ಕೃಪೆ: ಸಿಆಸು ಇಲಾಖೆ (ಕಾರ್ಯಕಾರಿ)
ವಿವರ | ವಿಧಾನಸೌಧ | ವಿಕಾಸಸೌಧ | ಬಹುಮಹಡಿ ಕಟ್ಟಡ |
ಒಂದು ತಿಂಗಳಲ್ಲಿ ಒಟ್ಟು ಬಳಕೆಯಾಗುವ ನೀರಿನ ಪ್ರಮಾಣ | 8 ಲಕ್ಷ ಲೀಟರ್ ಗಳು | 25 ಲಕ್ಷದ 6 ಸಾವಿರ ಲೀಟರ್ ಗಳು | 01 ಕೋಟಿ 52 ಲಕ್ಷದ 03 ಸಾವಿರ ಲೀಟರ್ ಗಳು |
ನೀರು ಸರಬರಾಜು ವೆಚ್ಚ | ರೂ. 46,930.00/- | ರೂ. 1,49,290.00/- | ರೂ. 6,90,310.00/- |
ಇತರೆ ವೆಚ್ಚಗಳು ಸೇರಿ ಒಟ್ಟು ವೆಚ್ಚ | ರೂ. 57,124.00/- | ರೂ. 1,79,948.00/- | ರೂ. 8,45,213.00/- |
ಮೂರೂ ಕಟ್ಟಡಗಳಲ್ಲಿ ಬಳಕೆಯಾಗುತ್ತಿರುವ ನೀರಿನ ಪ್ರಮಾಣ :
ಒಂದು ಕೋಟಿ ಎಂಬತ್ತೈದು ಲಕ್ಷದ ಒಂಭತ್ತು ಸಾವಿರ ಲೀಟರ್ ಗಳು
ಮೂರೂ ಕಟ್ಟಡಗಳಲ್ಲಿ ನೀರಿಗಾಗಿ ವೆಚ್ಚವಾಗುತ್ತಿರುವ ಒಟ್ಟು ಮೊತ್ತ:
ಹತ್ತು ಲಕ್ಷ ಎಂಬತ್ತೆರಡು ಸಾವಿರದ ಇನ್ನೂರ ಎಂಬತ್ತೈದು ರೂಪಾಯಿಗಳು
ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ನಾವುಗಳು ಈ ಕೂಡಲೇ ಕೆಲವೊಂದು ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ ಅದರಲ್ಲಿ :
1. ನಮ್ಮ ಕಾರ್ಯಕ್ಷೇತ್ರದಲ್ಲಿ ನೀರು ಪೋಲಾಗದಂತೆ ತಡೆಯಲು ನಾವು ನಮ್ಮ ಜವಾಬ್ದಾರಿಯನ್ನು ಅರಿತು ಕ್ರಮ ವಹಿಸುವುದು.
2. ಅನಗತ್ಯವಾಗಿ ನೀರನ್ನು ಖರ್ಚು ಮಾಡುವುದನ್ನು ನಿಲ್ಲಿಸುವುದು.
3. ನೀರಿನ ಮಹತ್ವವನ್ನು ನಾವೂ ತಿಳಿದು ಇತರರಿಗೆ ತಿಳಿಸಿ, ಅಮೂಲ್ಯವಾದ ಜೀವಜಲವನ್ನು ಸಂರಕ್ಷಿಸಲು ಬದ್ದರಾಗುವುದು.
4. ನೀರು ಸೋರಿಕೆಯಾಗಿ ಅನಗತ್ಯ ಪೋಲಾಗುತ್ತಿದ್ದರೆ ಕೂಡಲೇ ತಿಳಿಸಬೇಕಾದ ಕಛೇರಿ/ದೂರವಾಣಿ:"-
* ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಕಾರ್ಯಕಾರಿ): 22033278, 9481031480
* ಮೇಲ್ವಿಚಾರಕರು ವಿಕಾಸಸೌಧsÀ- 5054, ಬಹುಮಹಡಿ ಕಟ್ಟಡ– 2404.
----- ***** -----
"ನೀರಿನ ಸದ್ಬಳಕೆಯನ್ನು ಮತೆರ ದಿನ, ಭವಿಷ್ಯದ ಮರಣ ಶಾಸನ"
"ನೀರು ಜೀವಜಗತ್ತಿನ ಜೀವಾಧಾರ, ನಿಸರ್ಗಕ್ಕೆ ಮೂಲಾಧಾರ"
'ಮನನ'ದ ಕ್ರಿಯಾವಂತಿಕೆಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು.
No comments:
Post a Comment