ಯಾಕೋ ಇತ್ತೀಚಿನ ಬೆಳವಣಿಗೆಗಳನ್ನು ನೋಡಿದರೆ ಕರ್ನಾಟಕದ ಜನ ಪ್ರತಿಭಟಿಸುವ ಶಕ್ತಿಯನ್ನೇ ಕಳೆದುಕೊಂಡಿದ್ದಾರೆ ಅನಿಸ್ತಿದೆ. ಆಳುವ ಸರ್ಕಾರಗಳು ಚುನಾವಣೆಗಳ ಫಲಿತಾಂಶವನ್ನೇ ತಮ್ಮ ಪ್ರತಿಯೊಂದು ಕಾರ್ಯಕ್ಕೂ ಒಂದು ನೆಪ ಮಾಡಿಕೊಂಡಿದ್ದಾರೆ. ಪ್ರತಿಪಕ್ಷಗಳಂತೂ ಒಳಜಗಳ, ನಾಯಕರ ಪ್ರತಿಷ್ಠೆಗಳಲ್ಲಿಯೇ ಕಾಲ ಕಳೆಯುತ್ತಿದ್ದು, ಅಸ್ತಿತ್ವದಲ್ಲಿ ಇವೆಯೇ ಇಲ್ಲವೇ ಎನ್ನುವುದೇ ತಿಳಿಯದಾಗಿದೆ... ನಿಜವಾಗಿ ರಾಜ್ಯದಲ್ಲಿ ಪ್ರತಿಪಕ್ಷಗಳ ಕೆಲಸ ಮಾಡುತ್ತಿರುವುದು ಮಾಧ್ಯಮಗಳು, ರಾಜ್ಯಪಾಲರು, ಲೋಕಾಯಕ್ತ ಮತ್ತು ಮಾನವ ಹಕ್ಕುಗಳ ಆಯೋಗಗಳು.
ಆದರೆ ಇತ್ತೀಚಿನ ದಿನಗಳಲ್ಲಿ ಸರ್ಕಾರ ಇವುಗಳನ್ನೇ ನಿಷ್ಕ್ರೀಯಗೊಳಿಸಲು ಯತ್ನಿಸುತ್ತಿರುವುದು ನಾಚಿಕೆಗೇಡಿನ ಕೆಲಸ. ಒಂದುಕಡೆ ರಾಜ್ಯಪಾಲರು ಸರ್ಕಾರದ ರೀತಿನೀತಿಗಳನ್ನು ಪ್ರಶ್ನಿಸಿದರೆ ಸಂಪುಟದ ಸದಸ್ಯರು ರಾಜ್ಯಪಾಲರನ್ನೇ ಹೀಯಾಳಿಸುವ ಪ್ರವೃತ್ತಿಯನ್ನು ರೂಢಿಸಿಕೊಂಡು ತಮ್ಮ ಉದ್ಧಟತನ ಪ್ರದರ್ಶಿಸಿದ್ದಾರೆ. ದೇಶ ಕಂಡ ಅತ್ಯುತ್ತಮ ಕಾನೂನು ತಜ್ಞರಲ್ಲಿ ನಮ್ಮ ರಾಜ್ಯಪಾಲರೂ ಒಬ್ಬರು. ಅವರ ಸಲಹೆ ಗಳನ್ನು ಸ್ಪರ್ಧಾತ್ಮಕತೆಯಿಂದ ನೋಡದೇ ಪೂರ್ವಗ್ರಹಪೀಡಿತರಾಗಿ ನೋಡಿ ಅವರತ್ತ ದಿವ್ಯ ನಿರ್ಲ್ಯಕ್ಷ್ಯ ತೋರುತ್ತಿರುವುದು ನಮ್ಮ ಸರ್ಕಾರದ ಸಾಚಾತನವನ್ನೇ ಅನುಮಾನದಿಂದ ನೋಡುವಂತಾಗಿದೆ.
ಇನ್ನು ಮಾನವ ಹಕ್ಕುಗಳ ಆಯೋಗದ ಅದ್ಯಕ್ಷರಿಗೆ ಅವರ ಅಂಗರಕ್ಷಕರನ್ನೇ ನೇಮಿಸದೇ ಅವರೇ ದೂರು ನೀಡುವಂತ ಪರಿಸ್ಥಿತಿ. ಅವರನ್ನು ಸಹ ಬಹಿರಂಗವಾಗಿ ತೆಗಳುತ್ತ ಮಾನಸಿಕ ಸ್ಥೈರ್ಯವನ್ನೇ ಹುದುಗಿಸುವ ಪ್ರಯತ್ನ ಮಾಡುತ್ತಿದೆ..
ಇನ್ನು ಲೋಕಾಯುಕ್ತರ ರಾಜೀನಾಮೆ ರಾಜ್ಯದಲ್ಲಿ ಒಂದು ಬಿರುಗಾಳಿಯನ್ನೇ ಎಬ್ಬಿಸಿದೆ...
ಸರ್ಕಾರದ ಅಸಹಕಾರ, ದಿವ್ಯ ನಿರ್ಲ್ಯಕ್ಷ್ಯ, ನಿಷ್ಕ್ರೀಯತೆ, ಪರಮಾಧಿಕಾರ, ಗಣಿ ವಿಷಯ.... ಇವೆಲ್ಲವೂ ಲೋಕಾಯುಕ್ತರ ರಾಜೀನಾಮೆಗೆ ಕಾರಣವಾಗಿರಬಹುದು. ಆದರೆ ಇಂತಹ ಸಂದರ್ಭದಲ್ಲಿ ಅವರ ರಾಜೀನಾಮೆ ರಾಜ್ಯದ ಜನತೆಯಲ್ಲಿ ಭ್ರಮನಿರಸನವನ್ನು ಮೂಡಿಸಿದೆ. ರಾಜೀನಾಮೆ ವಾಪಸ್ಸು ಪಡೆಯುವಂತೆ ಎಲ್ಲಡೆಯಿಂದ ಹೋರಾಟದ ಕೂಗುಗಳು ಕೇಳಿಬರುತ್ತದೆ. ರಾಜ್ಯಪಾಲರಂತೂ ಲೋಕಾಯುಕ್ತರ ರಾಜೀನಾಮೆ ಪ್ರಜಾಪಭುತ್ವ ವ್ಯವಸ್ಥೆಯ ಪ್ರಮುಖ ಸಂಸ್ಥೆಯಂದರ ಅವನತಿಯ ಸೂಚಕವೆಂದು ಆತಂಕ ವ್ಯಕ್ತಪಡಿಸಿದ್ದಾರೆ. ಕೇಂದ್ರದ ಗೃಹ ಸಚಿವರೂ ಲೋಕಾಯುಕ್ತರು ತಮ್ಮ ರಾಜೀನಾಮೆಯನ್ನು ವಾಪಸ್ಸು ಪಡೆಯಲು ಕೇಳಿಕೊಂಡಿರುವುದು ಅವರ ಮೌಲ್ಯವನ್ನು ತೋರಿಸುತ್ತದೆ. ರಾಷ್ಟ್ರ ಕಂಡ ಅತ್ಯುತ್ತಮ ನ್ಯಾಯಾವಾದಿಯಾಗಿ, ರಾಜ್ಯದ ಲೋಕಾಯುಕ್ತಾರಾಗಿ ಅವರ ಕಳಂಕರಹಿತ, ಜನಸ್ನೇಹಿ ಸೇವೆಯು ಜನತೆಯ ಮುಂದಿರುವಾಗ ರಾಜ್ಯದ ಬಿಜಿಪಿ ಮುಖಂಡರು ಅವರ ನಿಷ್ಠೆಯ ಬಗ್ಗೆ ಮಾತನಾಡಿರುವುದು ನಾಚಿಕೆಗೇಡಿನ ಹೇಯಕೃತ್ಯವೆಂದೇ ಹೇಳಬಹುದು..
ಕೊನೆಯದಾಗಿ ಕರ್ನಾಟಕದ ಹಿತಕ್ಕಾಗಿ, ಭ್ರಷ್ಟರ ನಿರ್ಮೂಲನೆಗೆ, ಶ್ರೀ ಸಂತೋಷ್ ಹೆಗಡೆ ಯವರ ಅವಶ್ಯಕತೆ ತುಂಬಾ ಇದೆ ಆದ್ದರಿಂದ ರಾಜ್ಯದ ಜನತೆಗೋಸ್ಕರವಾಗಿಯಾದರೂ ತಮ್ಮ ನಿಲುವನ್ನು ಬದಲಿಸುವಂತಾಗಲಿ ಹಾಗೂ ಸರ್ಕಾರವು ಲೋಕಾಯುಕ್ತರಿಗೆ ಪರಮಾಧಿಕಾರ ನೀಡುವತ್ತ ಪ್ರಾಮಾಣಿಕವಾಗಿ ಪ್ರಯತ್ನಿಸುವಂತಾಗಲಿ ಎಂದು ಬಯಸೋಣ....
- ಮಧು
4 comments:
ಭ್ರಷ್ಟಾಚಾರ ನಿರ್ಮೂಲನೆ ಮಾಡ್ತೀನಿ ಅಂತ ಬೊಬ್ಬೆ ಹಾಕುವ ಸರ್ಕಾರದಲ್ಲಿರುವವರಿಗೆ ಆ ನಿಟ್ಟಿನಲ್ಲಿ ಕೆಲಸ ಮಾಡುವವರನ್ನು ಕಂಡರೆ ಅಷ್ಟಕ್ಕಷ್ಟೆ. ಇದನ್ನ ದುರಂತ ಅಂತೀರೋ : 'ಮೊಸಳೆ ಕಣ್ಣೀರು' ಅಂತೀರೋ ... ಅಥವಾ ಆ ನಿಟ್ಟಿನಲ್ಲಿ ಕೆಲಸ ಮಾಡಿದವರ ಧಾಟಿ ಸರ್ಕಾರಕ್ಕೆ 'ಇಷ್ಟ' ಆಗಲಿಲ್ವೋ ಏನೋ ?!!
- ರೇವಪ್ಪ
ಭ್ರಷ್ಟಾಚಾರ ಯಾವುದೇ ಒಂದು ದೇಶದ ಪ್ರಜಾಸತ್ತಾತ್ಮಕ ವಿನಾಶಕ್ಕೆ ರಹದಾರಿ. ಈ ಹಾದಿಯಲ್ಲಿ ತಾವೇ ರಾಜರೆಂದು ಸಾಗುತ್ತಾ ಇರುವುದೆಲ್ಲವನ್ನೂ ತಮ್ಮೊಳಗೆ ತುಂಬಿಕೊಳ್ಳುವ ಹಪಾಹಪಿಕೆಯಲ್ಲಿ ರೋಗ ಹತ್ತಿಸಿ ನರಳಿಸುವ ಚಾಳಿ ಬೆಳೆಸಿಕೊಂಡವರ ದಾರಿಯನ್ನು ಮುಚ್ಚಿ ಹಾಕಿ ಹೊಸ ದಾರಿ ನಿರ್ಮಿಸಲು ಹೊರಟಿದ್ದವರ ರೆಕ್ಕೆ ಮುರಿವ ಹುನ್ನಾರಗಳು ಇದ್ದೇ ಇದೆ. ನಾವು ವಿರೋಧಿಸದಿರುವುದೇ ಒಂದು ದುರದೃಷ್ಟಕರ ಮತ್ತು ಭಾಗಿಯಾಗಿದ್ದೇವೆನ್ನುವ ಪಾಪ ಪ್ರಜ್ಞೆ ಕಾಣುವ ಮೊದಲು ನಾವು ಸರಿಯಾಗಬೇಕಷ್ಟೆ.
-ಮಂಜು
ಪ್ರಾಮಾಣಿಕತೆಯನ್ನು ಆಗಿಂದಾಗ್ಗೆ ಜ್ಞಾಪಿಸುತ್ತಿದ್ದ ಸಾರ್ವಜನಿಕ ವ್ಯಕ್ತಿ, ದಿಢೀರನೆ ಹುದ್ದೆಗೆ ರಾಜೀನಾಮೆ ನೀಡಿದ್ದು ಸಭ್ಯ-ಸುಜನರಿಗೆ ಆಘಾತಕಾರಿ. ಆದರೆ ಸಾರ್ವಜನಿಕ ಜೀವನದಲ್ಲಿ ಇಂಥಾ ಬಿ. ಪಿ (ಬಡಪಾಯಿ) ಜನರ ಪಾತ್ರವೇನೇನೂ ಇರುವುದಿಲ್ಲ. ಆಡಳಿತ ನಡೆಸುವ ಪುಢಾರೀ ಜನರಿಗಾದರೆ ಇದು ‘ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದ’ ಅವಕಾಶ! ಯಾವ ವಶೀಲಿಯಿಂದ, ಈ ಹುದ್ದೆಗೆ, ಯಾವ ಬೇಕಾದವರನ್ನು ಹೇಗೆ ತಂದುಕೊಳ್ಳಬಹುದೆಂಬ ತಂತ್ರಗಾರಿಕೆಯಲ್ಲಿ ಅವರು ಬ್ಯುಸಿ ಇರಬಹುದು!
ಆದರೆ ನಮ್ಮ ಆತಂಕ, ಈ ಅಯೋಗ್ಯ ಆಡಳಿತ ವ್ಯವಸ್ಥೆಯಲ್ಲಿ ಗಾಳಗ್ರಸ್ತರೇ ಲೋಕಾಯುಕ್ತರೂ ಆಗಿ ಬಂದು ಕೂತುಬಿಟ್ಟರೇನಪ್ಪಾ ಗತಿ,ಎಂದು....!
Lokaayuktara asamaadaanavene irali avaru saamaajika honegaarikeyannu hottu rajinameyannu hintegedukondu adikaaradalli munduvareyuvudu holitu.yekendare aase haagu nambikeyinda; samaajada sudhaaraneya kanasannu lokayuktaru nanasu maaduvarendu; kaadu kulitiruva nonda benda besatta namma naadina janara vishwaasavannu ulisikollabekaaddu lokayuktara aadhya kartavya.Adhikaaradalliddukonde avaru "paramaadhikhaarada" illave "nigadipadisiruva" illave "neediruva yane vahisiruva sampoorna adhikhaarada grahikegaagi horata nadesuvudu lokaayuktara ghanatege sarihondutade. illave "kallaru"("sarkaara") tappisikollalu avare daari maadi kottantaaguttade
Post a Comment