{
ಈ ಲೇಖನನ ನಮ್ಮ ಪರಶುರಾಮ್ ಮೊನ್ನೆ ಮಳೆ ಬಂದ ದಿನಾನೇ ready ಮಾಡಿದ್ರು ...
ಆದ್ರೆ ಸ್ವಲ್ಪ ಲೇಟಾಗಿ ನನ್ಗೆ ಕಳ್ಸಿದ್ರು ...ಅದ್ಕೆ ನಾನು ಮಳೆ ಬರಲಿ ಅಂತ ಕಾಯ್ತಿದ್ದೆ ...
ಸ್ವಲ್ಪ kick ಇರುತ್ತೆ ನೋಡಿ ಅದಕ್ಕೆ ...
Internetನಲ್ಲಿ ಮುಂದಿನ ೫ ದಿನಗಳ ಹವಾಮಾನ ವರದಿನೂ ನೋಡ್ದೆ ....
ಆದ್ರೆ ಯಾವುದೇ green signal ಕಾಣ್ಲೇ ಇಲ್ಲ ...
ಸರಿ ನಮ್ಮ ಓದುಗರು / ನೋಡುಗರು ಆ ದಿನಗಳಿಗೆ ಸರಳವಾಗಿ ಜಾರುವಷ್ಟು ನಿಸ್ಸ್ಸೀಮರು ಅಂತ ಗೊತ್ತು
ನಂಗೆ ...ಅಲ್ದೆ , ಪರಶುರಾಮ್ ಲೇಖನಕ್ಕೂ ಆ ಸಾಮರ್ಥ್ಯ ಇದೆ ...
ಹೀಗಾಗಿ ಒಂದು ಕೈ ನೋಡೇ ಬಿಡೋಣ ಅಂತ ಇವತ್ತೇ ಹಾಕ್ತಿದೀನಿ ...
ನಿನ್ನೆ ಮಧ್ಯಾಹ್ನ ಕೆಲವ್ರು Already ಸ್ವಲ್ಪ ಓದಿರಬಹುದು ...ಆವಾಗ page setting ಮಾಡ್ತಿದ್ದೆ ....
ನನ್ನ ಮನೆ computer ಇರೋದು 22" inch ದೈತ್ಯ ....
ಇಲ್ಲಿ office ಅಲ್ಲಿ ಜಾಸ್ತಿ ಜನರ ಹತ್ರ ಇರೋದು 14" ( desktop screen ) ...
ಅದಕ್ಕೆ ಆ ಕಷ್ಟ ಆಯ್ತು ...
[ 'ಮೊಗ್ಗಿನ ಮನಸು' ಇಂದ "ಮಳೆ ಬರುವ ಹಾಗಿದೆ ..." ಒಂದು ಸಾರಿ ಕೇಳಿ ನೋಡಿ ..Mood ಬರುತ್ತೆ !!
ಯಾಕಂದ್ರೆ ಇಷ್ಟು ಬರಿಲಿಕ್ಕೆ 5ನೇ ಸಾರಿ ಅದನ್ನೇ ಕೇಳ್ತಿದೀನಿ ...]
---------------------
ನಾನು ಇಲ್ಲಿ ನಿಮಗೆ ಯಾವತ್ತೂ 5 STAR FACILITY ಕೊಡೋ ಪ್ರಯತ್ನ ಮಾಡ್ತೀನಿ ...
Because You Deserve It...
& U R The Chosen Few In KPSC Exam For Secretriat
From All Over The State....
ಯಾವಾಗ್ಲೂ ಅಷ್ಟೇನೆ ....
ಪಂಚತಾರಾ ಹೋಟೆಲ್ ಗಳಿರೋದು ಆ ಲೆವೆಲ್ ಜನರಿಗೇನೆ...
ಬೇರೆಯವರಿಗೆ ಅಲ್ಲಿನ ಶಿಷ್ಟಾಚಾರಗಳು ಗೊತ್ತಿರೋಲ್ಲ ...
ಯಾಕಂದ್ರೆ ಇದು ಕುತೂಹಲ ತೀರಿಸಿಕೊಳ್ಳಿಕ್ಕೆ ಒಂದು ಸಲ ಅಲ್ಲಿಗೆ ಹೋದಂಗಲ್ಲ ....
ನೀವು ಪ್ರತಿ ದಿನಾ ಬೆಳಿಗ್ಗೆ ಟೀ ಇಂದ ಹಿಡಿದು ರಾತ್ರಿ ಮಲಗೋ ಬೆಡ್ ವರೆಗೂ ಎಲ್ವು 5 star ...secretriatಅಲ್ಲಿ ಇರೋವರೆಗೂ
Because U R The Chosen Few....
So Maintain The Etiquette's.
Enjoy The Rain,
Revappa }

ಆದ್ರೆ ಸ್ವಲ್ಪ ಲೇಟಾಗಿ ನನ್ಗೆ ಕಳ್ಸಿದ್ರು ...ಅದ್ಕೆ ನಾನು ಮಳೆ ಬರಲಿ ಅಂತ ಕಾಯ್ತಿದ್ದೆ ...
ಸ್ವಲ್ಪ kick ಇರುತ್ತೆ ನೋಡಿ ಅದಕ್ಕೆ ...
Internetನಲ್ಲಿ ಮುಂದಿನ ೫ ದಿನಗಳ ಹವಾಮಾನ ವರದಿನೂ ನೋಡ್ದೆ ....
ಆದ್ರೆ ಯಾವುದೇ green signal ಕಾಣ್ಲೇ ಇಲ್ಲ ...
ಸರಿ ನಮ್ಮ ಓದುಗರು / ನೋಡುಗರು ಆ ದಿನಗಳಿಗೆ ಸರಳವಾಗಿ ಜಾರುವಷ್ಟು ನಿಸ್ಸ್ಸೀಮರು ಅಂತ ಗೊತ್ತು
ನಂಗೆ ...ಅಲ್ದೆ , ಪರಶುರಾಮ್ ಲೇಖನಕ್ಕೂ ಆ ಸಾಮರ್ಥ್ಯ ಇದೆ ...
ಹೀಗಾಗಿ ಒಂದು ಕೈ ನೋಡೇ ಬಿಡೋಣ ಅಂತ ಇವತ್ತೇ ಹಾಕ್ತಿದೀನಿ ...
ನಿನ್ನೆ ಮಧ್ಯಾಹ್ನ ಕೆಲವ್ರು Already ಸ್ವಲ್ಪ ಓದಿರಬಹುದು ...ಆವಾಗ page setting ಮಾಡ್ತಿದ್ದೆ ....
ನನ್ನ ಮನೆ computer ಇರೋದು 22" inch ದೈತ್ಯ ....
ಇಲ್ಲಿ office ಅಲ್ಲಿ ಜಾಸ್ತಿ ಜನರ ಹತ್ರ ಇರೋದು 14" ( desktop screen ) ...
ಅದಕ್ಕೆ ಆ ಕಷ್ಟ ಆಯ್ತು ...
[ 'ಮೊಗ್ಗಿನ ಮನಸು' ಇಂದ "ಮಳೆ ಬರುವ ಹಾಗಿದೆ ..." ಒಂದು ಸಾರಿ ಕೇಳಿ ನೋಡಿ ..Mood ಬರುತ್ತೆ !!
ಯಾಕಂದ್ರೆ ಇಷ್ಟು ಬರಿಲಿಕ್ಕೆ 5ನೇ ಸಾರಿ ಅದನ್ನೇ ಕೇಳ್ತಿದೀನಿ ...]
---------------------
ನಾನು ಇಲ್ಲಿ ನಿಮಗೆ ಯಾವತ್ತೂ 5 STAR FACILITY ಕೊಡೋ ಪ್ರಯತ್ನ ಮಾಡ್ತೀನಿ ...
Because You Deserve It...
& U R The Chosen Few In KPSC Exam For Secretriat
From All Over The State....
ಯಾವಾಗ್ಲೂ ಅಷ್ಟೇನೆ ....
ಪಂಚತಾರಾ ಹೋಟೆಲ್ ಗಳಿರೋದು ಆ ಲೆವೆಲ್ ಜನರಿಗೇನೆ...
ಬೇರೆಯವರಿಗೆ ಅಲ್ಲಿನ ಶಿಷ್ಟಾಚಾರಗಳು ಗೊತ್ತಿರೋಲ್ಲ ...
ಯಾಕಂದ್ರೆ ಇದು ಕುತೂಹಲ ತೀರಿಸಿಕೊಳ್ಳಿಕ್ಕೆ ಒಂದು ಸಲ ಅಲ್ಲಿಗೆ ಹೋದಂಗಲ್ಲ ....
ನೀವು ಪ್ರತಿ ದಿನಾ ಬೆಳಿಗ್ಗೆ ಟೀ ಇಂದ ಹಿಡಿದು ರಾತ್ರಿ ಮಲಗೋ ಬೆಡ್ ವರೆಗೂ ಎಲ್ವು 5 star ...secretriatಅಲ್ಲಿ ಇರೋವರೆಗೂ
Because U R The Chosen Few....
So Maintain The Etiquette's.
Enjoy The Rain,
Revappa }

ಮಳೆ ಹುಯ್ಯುತಿದೆ ಎಲ್ಲಾ ನೆನಪಾಗುತಿದೆ...

ಯು.ಆರ್.ಅನಂತ್ಮೂರ್ತಿಯವರ ಪ್ರಸಿದ್ದ ಸಾಲಿದು.
ಮಳೆಯೊಂದಿಗೆ ಬೆರೆತ ನಮ್ಮ ನೆನಪಿನಾಳದ ಪದರಗಳನ್ನು ಎಳೆ ಎಳೆಯಾಗಿ ತೆರೆದಿಡುವ ಸಾಲು.
ಹೌದು, ಮಳೆ ಎಂಬುದೇ ಹೀಗೆ,ಅದು ಸುರಿಯುವ ಪರಿಯ ನೋಡುತ ಕುಳಿತರೆ ಮನಸ್ಸು ನೆನಪಿನಾಳಕ್ಕೆ ತನ್ನಿಂದ ತಾನೇ ಜಾರುತ್ತಾ ಸಾಗುತ್ತದೆ.
ಹೊರಗೆ ಜಿರ್ರೆ0ದು ಸುರಿಯುವ ಮಳೆಯಿಂದಾಗಿ ತಂಡಾ ತಂಡ- ಕೂಲ್ ಕೂಲ್
ವಾತಾವರಣವಿದ್ದಾಗ, ಒಳಗೆ ಹಾಟ್ & ಸ್ವೀಟ್ ಚಹಾ ಹೀರುತ್ತಾ ಕಿಟಕಿಯ ಸರಳುಗಳ ಸಂದಿಯಲಿ ಮಳೆಯನ್ನೇ ದಿಟ್ಟಿಸಿ ನೋಡಿದರೆ ನಮ್ಮ ಮನಸ್ಸು ವರ್ಷದಿಂದ ವರ್ಷದ ಹಿಂದೆ ಸಾಗುತ್ತಾ ಮಳೆಯೊಂದಿಗೆ ಬೆಳೆದ ಬಾಲ್ಯದ ದಿನಗಳನ್ನು ನೆನಪಿಸುತ್ತದೆ.
ಮಳೆಯೊಂದಿಗೆ ಬೆರೆತ ನಮ್ಮ ನೆನಪಿನಾಳದ ಪದರಗಳನ್ನು ಎಳೆ ಎಳೆಯಾಗಿ ತೆರೆದಿಡುವ ಸಾಲು.
ಹೌದು, ಮಳೆ ಎಂಬುದೇ ಹೀಗೆ,ಅದು ಸುರಿಯುವ ಪರಿಯ ನೋಡುತ ಕುಳಿತರೆ ಮನಸ್ಸು ನೆನಪಿನಾಳಕ್ಕೆ ತನ್ನಿಂದ ತಾನೇ ಜಾರುತ್ತಾ ಸಾಗುತ್ತದೆ.
ಹೊರಗೆ ಜಿರ್ರೆ0ದು ಸುರಿಯುವ ಮಳೆಯಿಂದಾಗಿ ತಂಡಾ ತಂಡ- ಕೂಲ್ ಕೂಲ್

ನಿಜ.
ಮಳೆಯೊಂದಿಗೆ ಬೆಳೆಯದ ಬಾಲ್ಯವಿಲ್ಲವೇನೋ..!?

ಬಾಲ್ಯದಲ್ಲಿ ಮಳೆ ಬರುವ ಮುನ್ಸೂಚನೆ ಇದೆ ಎಂದಾಗಲೇ ಗೆಳೆಯರೊಡಗೂಡಿ ಅಂಗಳಕ್ಕೆ ಬಂದು

"ಹುಯ್ಯೋ ಹುಯ್ಯೋ ಮಳೆರಾಯ ಹೂವಿನ ತೋಟಕೆ ನೀರಿಲ್ಲ" ಎಂದು ಹಾಡಿ-ಕುಣಿದದ್ದು,
ಮುಂಗಾರಿನ ಹನಿಮಳೆಗೆ ತೋಯ್ದ ಮಣ್ಣಿನ ಅನನ್ಯ ವಾಸನೆಗೆ ಹಿಗ್ಗಿನಲಿದಿದ್ದು,

ಮಳೆಯೊಂದಿಗೇ ಬೀಳುವ ಪುಟ್ಟ ಪುಟ್ಟ ಆಲಿಕಲ್ಲುಗಳನ್ನು ಆಯ್ದು
ಲೋಟದಲ್ಲಿ ಶೇಖರಿಸಿಟ್ಟಿದ್ದು,
ಆಯ್ದಿಟ್ಟ ಅರೆಗಳಿಗೆಯಲ್ಲೇ ಆಲಿಕಲ್ಲುಗಳು ಮಾಯವಾಗಿ ಲೋಟದಡಿಯಲ್ಲಿ ತಣ್ಣನೆ ನೀರು ಮಾತ್ರ ಉಳಿದದ್ದು,
ಮಳೆ ನಿಂತು ಹೋದ ಮೇಲೆ ಕೆಂಬಣ್ಣದಿಂದ ಹರಿಯುವ ಚರಂಡಿಯ ನೀರಿನಲ್ಲಿ

ಕಾಗದದ ದೋಣಿ ಮಾಡಿ ಬಿಟ್ಟಿದ್ದು,
ಹೀಗೆ ಎಲ್ಲವೂ ನೆನಪಾಗುತ್ತದೆ.
ಹಾಗೆ ನೋಡಿದರೆ ಬೆಂಗಳೂರಿನಲ್ಲಿ ಮಳೆಕಡಿಮೆ.
ಕಡಿಮೆ ಮಳೆಯಿಂದಾಗಿಯೇ ಇಷ್ಟೊಂದು ಅಗಾಧ ಅಭಿವೃದ್ಧಿ ಸಾಧ್ಯವಾಗಿರಬಹುದೇನೋ..?
ಬೆಂಗಳೂರಿನ ರಸ್ತೆಗಳು ಹೇಮಮಾಲಿನಿಯ ಕೆನ್ನೆಯಂತೆ (ಲಾಲೂ ಹೇಳಿಕೆ)
ನುಣುಪಾಗಿರಲು ಮಳೆಯ ಕೃಪೆ ಕೂಡಾ ಕಾರಣವಿರಬಹುದು..!
ಇಲ್ಲಿ ಮಳೆ ಕಡಿಮೆಯಾದರೂ ಅದು ಸೃಷ್ಠಿಸುವ ಆವಾಂತರಗಳು ಅಪಾರ..!
ನೆನಪಿನಲ್ಲುಳಿಸುವ ಘಟನೆಗಳೂ ಅಧಿಕ..!
ಆಫೀಸು ಮುಗಿಸಿ ಪಿಎಚ್ಎಸ್ ಬಸ್ಸಿನಲ್ಲಿ ಕಿಟಕಿ ಬದಿಯ ಸೀಟಿನಲ್ಲಿ

ಮಳೆ ಎಂದಾಕ್ಷಣ ನಮಗೆ ಮಳೆಯಲ್ಲಿ ನೆನೆದ

ಒಂದು ದಿನ ಮಳೆಯೊಂದಿಗೆ ಬಂದ ಸಿಡಿಲು ಪಕ್ಕದಲ್ಲೇ
ಬಡಿಯಿತೆನೋ ಎಂಬಂತೆ ಆರ್ಭಟಿಸಿದ್ದು ನೆನಪಾಗುತ್ತದೆ.
ಮಳೆಯಲ್ಲಿ ನೆನೆದು ಒದ್ದೆಮುದ್ದೆಯಾಗಿ ಪಜೀತಿ
ಪಡುತ್ತಿರುವಾಗ ನೆರವಿಗೆ ಬಂದವರೂ, ನಮ್ಮ ಪಜೀತಿ
ನೋಡಿ 'ಕಿಸಕ್' ಎಂದವರೂ ನೆನಪಾಗ್ತಾರೆ. ಆಫೀಸು ಮುಗಿಸಿ
ಮನೆಗೆ ಹೊರಡುವ ವೇಳೆಗೇ ಅಕಾಲಿಕವಾಗಿ ಬಂದ ಮಳೆಗೆ
'ಈ ಮಳೆಯಲ್ಲಿ ಹೇಗಪ್ಪಾ ಮನೆ ಸೇರೋದು' ಅಂತ
ಯೋಚಿಸುತ್ತಿದ್ದಾಗ " ಬಾರೋ ನನ್ನತ್ರ ಛತ್ರಿ ಇದೆ ಇಬ್ರೂ
ಹೋಗೋಣ" ಎಂದು ಕರೆದು ಬಸ್ಸು ಹತ್ತಿಸಿದವರು ಖಂಡಿತಾ ನೆನಪಾಗ್ತಾರೆ..
ಆಹಾ....
ಹೊರಗೆ ಮಳೆ ಹುಯ್ಯುತಿದೆ. ನನ್ನೊಳಗೆ ಹೀಗೆಲ್ಲಾ ನೆನಪಗುತ್ತಿದೆ..
ನಿಮ್ಮಲ್ಲಿ..??
ಪರಶು..,
renukatanaya@gmail.com
ಚಿತ್ರ ಸಂಗ್ರಹ : ರೇವಪ್ಪ
3 comments:
Matte male huyyutide ella nenapagutide.
nija male andre nenapagodu ooru mattu balya.
andina a sundara dinagalanna lekhanada mulaka nenapsi kottiddakke dhanyavadaglu.
ಮಳೆ ಮತ್ತು ಮಳೆಯ ಅನುಭವ ಯಾವಾಗಲೂ ಖುಷಿ ಕೊಡೋ ವಿಷ್ಯಗಳೇ ಆದ್ರೆ ಸಿಡಿಲು,ಗುಡುಗುಗಳು ಭಯ ಬೀಳಿಸ್ತಾವಪ್ಪಾ..... ಕಳೆದ ಬರಹಕ್ಕಿಂತ ಈ ಬರಹದಲ್ಲಿ ತುಂಬಾ ಸುಧಾರಣೆಯಿದೆ ಪರಶು..... ಆದ್ರೂ ನೀ ತೀರಾ ಜೆನರಲ್ ಆಗಿ ಬರೀತಿಯ,,,, ಇದು ಯಾರ ಅನುಭವ ಬೇಕಿದ್ರೂ ಆಗಿಬಿಡೋ ಚಾನ್ಸ್ಯಿದೆ...... ಇದೊಂದು ಅಂಶದಲ್ಲಿ ನೀ ಬದಲಾವಣೆ ಮಾಡಿಕೊಂಡ್ರೆ ನಾವು ಇನ್ನೂ ಹೆಚ್ಚಿನದನ್ನ ನಿರೀಕ್ಷಿಸ ಬಹುದು... ಯಾವಾಗ್ಲೂ ನೆಗೆಟಿವ್ ಆಗಿ ಕಮೆಂಟ್ ಮಾಡ್ತಾನೆ ಅನ್ಕೊಬೇಡೋ ಮಾರಾಯಾ.....
ಯಾರಿದು ನಿಹಾರಿಕ ಅಂದ್ರೆ..... ಕನ್ನಡ ಬಳಸ್ರೀ....
ಡಿಯರ್ ಯಶವಂತ್...
ನಿಮ್ಮ ಪ್ರತಿಕ್ರಿಯೆಗೆ ಅಭಿನಂದನೆ. ನೀವು ಹೇಳಿದಂತೆ ಇಲ್ಲಿ ಎಲ್ಲರದೂ ಆಗಿರುವಂತಹ ಅನುಭವವೇ ನನದೂ ಆಗಿದೆ. ಆದರೆ ಈ ಅನುಭವದ ಪದಗಳಿಗೆ ಅರ್ಥಬದ್ದವಾದ ಫೋಟೋ ಹುಡುಕಿ ಹಾಕಿದಾರಲ್ಲ ರೇವಪ್ಪ ಅವರಿಗೆ ಥ್ಯಾಂಕ್ಸ್ ಹೇಳಲೇ ಬೇಕು.
ನೀವು ನೆಗೆಟಿವ್ ಆಗಿ ಕಾಮೆಂಟ್ ಮಾಡ್ತೀರ ಅಂತ ನಾನೇನೂ ಅಂದ್ಕೊಳ್ಳಲ್ಲ ಬಿಡಿ ಮಾರಾಯ್ರೇ. ಕಾಮೆಂಟ್ ಅಂತ ಇರೋದೆ ನಿಮ್ಮ ಅಭಿಪ್ರಾಯ ತಿಳಿಸೋಕೆ/ಬರಿಯೋಕೆ ಅದರಲ್ಲಿ ನಮಗೆ ಪಾಸಿಟೀವ್ ಆಗಿಯೇ ಬರಿಬೇಕು ಅಂತ ನಿರೀಕ್ಷಿಸೋದು ತಪ್ಪಲ್ವಾ ಯಶವಂತ್...
ಅಂದಹಾಗೆ ನಿಮ್ಮನ್ನೂ ಒಳಗೊಂಡಂತೆ ನಮ್ಮ ಕಿರಿಯ ಸಹಾಯಕ ಪ್ರಿಯ ಮಿತ್ರರ ಬರಹಗಳನ್ನೂ ಈ ಬ್ಲಾಗ್ ನಲ್ಲಿ ನಿರೀಕ್ಷಿಸ್ತೀನಿ..
ಅಂಜದೆ ಅಳುಕದೆ ಧುಮುಕಿರಿ ಈ ಬ್ಲಾಗ್ ನೊಳಗೆ..!
Post a Comment