tag:blogger.com,1999:blog-6191351531121016579.post4867210876304383350..comments2022-03-19T11:22:08.695+05:30Comments on ' ಪುನರ್ನವ 3.0 ': ಕಾಪಿ-ಪೇಸ್ಟ್ADM - nistratorhttp://www.blogger.com/profile/05344869601280389882noreply@blogger.comBlogger2125tag:blogger.com,1999:blog-6191351531121016579.post-30031806066941608292012-11-30T12:35:44.325+05:302012-11-30T12:35:44.325+05:30ಯಸ್ ರೇವಪ್ಪಾ... ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ..
ನೀವು ...ಯಸ್ ರೇವಪ್ಪಾ... ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ..<br />ನೀವು ಹೇಳುವಂತೆ ಇಂದಿನ ಪತ್ರಿಕೆ, ದೂರದರ್ಶನ ಮೊದಲಾದ ಸಮೂಹ ಮಾಧ್ಯಮಗಳ ಹಲವು 'ಐಟಂ' ಗಳು ಎಲ್ಲೆಲ್ಲಿಂದಲೋ ಎತ್ತಿಕೊಂಡಿರುವಂತಹವೇ ಆಗಿವೆ. ಸೃಜನ ಶೀಲತೆ ಮರೀಚಿಕೆ ಯಾಗಿದೆ. ಇದನ್ನು ಭಟ್ಟರು ಸಹ ಕಳೆದವಾರದ ತಮ್ಮ ನೂರೆಂಟು ನೋಟದಲ್ಲಿ ಒಪ್ಪಿಕೊಂಡಿದ್ದಾರೆ ಅವರೇ ಹೇಳುವಂತೆ ಹಿಂದೆಲ್ಲಾ ಒಂದು ಲೇಖನ ತಯಾರಿಸಲು ಮಾಹಿತಿಗಾಗಿ ಲೇಖಕ ತುಂಬಾ ಕಷ್ಟಾ ಪಡಬೇಕಾಗಿತ್ತು. ಹಲವು ಪುಸ್ತಕಗಳನ್ನು ಓದಬೇಕಾಗಿತ್ತು. ಈಗ ಅಂತಹ ತಾಪತ್ರಯಗಳೇ ಇಲ್ಲ ಕೈಯಲ್ಲೊಂದು ಲ್ಯಾಪ್ ಟಾಪೋ, ಪಾಮ್ ಟಾಪೋ ಇದ್ರೆ ಸಾಕು. ಅಂತರ್ಜಾಲದಲ್ಲಿ ಮಾಹಿತಿಗೇನೂ ಬರವಿಲ್ಲವಲ್ಲ. ಭಟ್ಟರು-ಶೆಟ್ಟರು ಯಾರಿಗಾದ್ರೂ ಭಟ್ಟಿ ಇಳಿಸುವ ಸೃಜನಶೀಲತೆಯೊಂದಿದ್ರೆ ಸಾಕು ಅಲ್ವೇ..ಪರಶು..,https://www.blogger.com/profile/10226294824127140739noreply@blogger.comtag:blogger.com,1999:blog-6191351531121016579.post-29312898360283579512012-11-30T00:16:55.920+05:302012-11-30T00:16:55.920+05:30ಅಕ್ಷರ ಪಯಣ ಪುನರಾರಂಭಿಸಿದ ಪರಶುರಾಂಗೆ ಅಭಿನಂದನೆಗಳು !!
ನಿ...ಅಕ್ಷರ ಪಯಣ ಪುನರಾರಂಭಿಸಿದ ಪರಶುರಾಂಗೆ ಅಭಿನಂದನೆಗಳು !!<br />ನಿಮ್ಮ ಬರಹ ಎಂದಿನಂತೆ ಆಪ್ತವಾಗಿದೆ. <br />ಈ ಕೃತಿಚೌರ್ಯ ಧಾಟಿಯ ಕೆಲಸಗಳು ಇತ್ತಿಚೆಗೆ ತುಂಬ ಹೆಚ್ಚುತ್ತಿವೆ. ರೀಮೇಕ್ ಸಿನಿಮಾ ತೆರನಲ್ಲಿ ಬೇರೆ ಮೂಲದಿಂದ ಯಥಾವತ್ ಭಟ್ಟಿ ಇಳಿಸಿದ ಬರಹ - ಪ್ರಬಂಧ ಗಳನ್ನು ತಮ್ಮದೆಂದು ಹೇಳಿಕೊಳ್ಳುವ ಜನ ಹೆಚ್ಚುತ್ತಿದ್ದಾರೆ. <br /><br />ಮುಂಚೂಣಿ ಕನ್ನಡ ಪತ್ರಿಕೆಗಳ ಕೆಲವು ಭಟ್ಟರುಗಳು ದಿನವೂ ಬೈಟು ಕಾಫಿ ಕುಡಿಸುತ್ತೇವೆ ಎಂದು ಹೇಳಿ, ಆಂಗ್ಲಭಾಷೆಯ ಯಥಾವತ್ ತರ್ಜುಮೆಗಳನ್ನ ನೀಡುತ್ತಿದ್ದಾರೆ. ಆ್ಯಪಲ್ ನಂಥ ಸೃಜನಶೀಲ ಕಂಪೆನಿಗಳನ್ನು ಕೊಂಡಾಡುವ ಅವರು ತಮ್ಮ ಸೃಜನಶೀಲತೆಯನ್ನು ಪೂರ್ತಿ ಸೂರ್ಯಶಿಕಾರಿ ಮಾಡುವ ಹುಮ್ಮಸ್ಸಿನಲ್ಲಿ ಕಳೆದುಕೊಳ್ಳುತ್ತಿದ್ದಾರೆ ಎಂಬ ಸಂಶಯ. ಅವರಿಗೆ ಚಾಲಾಕು ಬುದ್ಧಿಯ ಸಿಂಹಗಳೂ ಕೈಜೋಡಿಸಿವೆ ಎಂಬುದು ನಿಮಗೆಲ್ಲ ತಿಳಿದ ವಿಚಾರ. ಇತ್ತೀಚಿನ ದಿನಗಳಲ್ಲಿ ಕನ್ನಡ ದಿನಪತ್ರಿಕೆಗಳಲ್ಲಿ ಕ್ರೈಂ & ರಾಜ್ಯದ ಸುದ್ದಿಗಳನ್ನು ಹೊರತುಪಡಿಸಿದರೆ, ಬಹುತೇಕ ಸುದ್ದಿಗಳು ಸ್ವಯಂ ಪ್ರತಿನಿಧಿಯ ಸುದ್ದಿ ಸಂಪಾದನೆ ಬದಲಿಗೆ ಆಂಗ್ಲ ಅವತರಣಿಕೆಯ ಯಥಾವತ್ ವರದಿಗಳಾಗಿರುತ್ತವೆ. ಪತ್ರಿಕಾ ಪ್ರತಿನಿಧಿಗಳು ಅನುವಾದಕರಾಗಿ ಬದಲಾಗುತ್ತಿದ್ದಾರೇನೋ ಎಂಬ ಸಂಶಯ ಮೂಡದೇ ಇರದು. <br /><br />ಇಂಥದೊಂದು ಗಂಭೀರ ವಿಚಾರವನ್ನು ತೆಳುಹಾಸ್ಯದ ಜೊತೆಗೆ ತಳುಕು ಹಾಕಿ ನೆನಪಿಸಿಕೊಟ್ಟ ಪರಶುರಾಂ ಅಭಿನಂದನಾರ್ಹರು !!ADM - nistratorhttps://www.blogger.com/profile/05344869601280389882noreply@blogger.com